ಪುಟ:ಕನ್ನಡದ ಬಾವುಟ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫. ಹೊನ್ನಮ್ಮ ಸು. ೧೬೯೦ ಹದಿಬದೆಯ ಧರ್ಮ ಆದಿನಾರಾಯಣನಾ ಶೇಷನೊಡಗೂಡಿ! ಯಾದರದಿಂದವತರಿಸೆ ಯಾದವಕುಲವೇಳೆಗೆವೆತ್ತಿರ್ಪುದು | ಮೇದಿನಿಯೊಳು ಮೈ ಮೆವಡೆದು ಆ ಯಾದವರಿಗೆ ಕುಲದೇವರೆನಿಪ ನಾರಾಯಣನಾದಿ ಕಾರಣನು ಶ್ರೀಯೊಡಗೂಡೀ ಕರ್ಣಾಟದೇಶದೊಳ್ ಯಾದವಾದ್ರಿಯೊಳಿಹನು ಬಲಕೃಷ್ಣರಿಂದೆ ಹಲವು ಪೂಜೆಗೊಂಡಿರ್ಪ : ಕುಲದೇವರ ಸೇವೆಗೆಂದು ಪಲವು ಯಾದವರಾಯರಾ ದ್ವಾರವತಿಯಿಂದೊಲಿದೈ ತಂದರೀ ನೆಲಕೆ ಶ್ರೀ ನಾರಾಯಣನಡಿಗಳಿಗೆರಗಿ ಮಹಾನಂದರಸದ ಮೈಮೆಯೊಳು ಆ ನೆಲೆಯನ್ನು ಬಿಟ್ಟಗಲಲಾರದೆ ತಾವೀ ನಾಡೊಳು ನೆಲಸಿದರು ಈ ಶೈಲಕೆರಡು ಗಾವುದ ತೆಂಕಣ ರಮ್ಯ 1 ದೇಶವ ನೆಲೆವೀಡುಗೊಳಿಸಿ ಈ ಶೂರರು ನೆಲಸಿದರದರಿ೦ದೆ ಮಹಿಶೂರಪುರವೆನಿಸಿದುದು ಶ್ರೀರಂಗಪಟ್ಟಣದೊಳು ರತ್ನ ಸಿಂಹಾಸನಾರೋಹಣವನಾಚರಿಸಿ ಧಾರಿಣಿಯನು ಧರದೊಳು ಪಾಲಿಸುತ ಮಹಾರಾಜನೆನಿಸಿ ರಾಜಿಪನು ಧರೆಯ ಪೊರೆವ ಧರ್ಮವ ಸಂಪಾದಿಸ 1 ಧುರವ ಗೆಲುವ ರೈಮೆಯೊಳು ನರಪತಿ ಚಿಕದೇವರಾಜೇ೦ದ್ರಗೆ ಶೌರಿ ನೆರವಾಗಿಹನು ನೇಮದೊಳು ಚಿಕದೇವರಾಜಚಂದ್ರಮನ ಪಟ್ಟದ ರಾಣಿ | ಸಕಲ ಸದ್ಗುಣಸಂಪನ್ನೆ ಅಕಲುಕ್ಷೆಯೆಳವಂದೂರ ದೇವಮ್ಮನು ಸಕಲ ಸಂಪದದೊಡನಿಹಳು ಓಲಗಗೊಳುತೊಂದು ದಿನವೆಡಬಲದ ಸು/ ಶೀಲೆಯರೊಳು ಕಡೆಗಣ್ಣ ಸಾಲುವಿಡಿದು ಸುಳಿಸುಳಿಸಿಯೆನ್ನೊಳು ಸತ್ಕೃ। ಪಾಲೋಕನವನೆಸಗಿದನು ಕರುಣಾಮೃತಾಭಿಯ ಕಲ್ಲೋಲಗಳಂತೆ ! ತರತರದೊಳು ಕವಿತರುವ ಸರಸಕಟಾಕ್ಷವನೆಸಗಿಯೆನ್ನೊಳು ಮನಃಗರಗಿ ಮನ್ನಿಸಲೆಳಸಿದನು ಅರಸಿ ಕೇಳೀ ಹೊನ್ನಿ ಸರಸ ಸಾಹಿತ್ಯದ / ವರದೇವತೆ ತಾನೆಂದು ಪರಮಾರ್ಥವಾದಿಯಳಸಿಂಗರಾಧ್ಯನು 1 ಪರಿಪರಿಯೊಳು ಬಣ್ಣಿಸನು ಇವಳು ಕಾವ್ಯಾಲಂಕಾರ ನಾಟಕಗಳ 1 ಪವಣಿಗೆಯಿರವ ಬಲ್ಲವಳು ಇವಳ ಸಾಹಿತ್ಯದ ಸವಿಗೆಳಸುತ್ತೆನ್ನ ಕಿವಿಗಳು ಕದುಬುಗೊಂಡಿಹವು ಪವಣಿಗೆಯೊಪ್ಪೆ ಪುರುಳು ಪೊಗೆ ರೀತಿಯಂ 1 ಗವಿಸೆಯಲಂಕಾರಗಳು ಕವಿದು ಸರಿಯೆ ರಸದೊಳಂಪು ಘಮ್ಮನೆ / ಕವಿತೆಯೊಂದನ್ನು ಹೇಳಿಸಿಂದು ಎಂದ ರಾಯನ ನುಡಿಗಾನು ವಿನಯಗೂಡಿ | ಸಿಂದೆಗೆದಿರೆ ಪಟ್ಟದರಸಿ * ಕಂದ ಬಾರೆನ್ನ ಕಟ್ಟಾಣಿ ಹೆಣ್ಮಣಿಯೆ ಬಾರೆಂದು ಮುಂದಕೆ ಬರಿಸಿದಳು