ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಸಿದ್ದರಾಮ. 19

ವಚನ ಗಮನ ಆದಾನ ವಿ ಸರ್ಜನೆ ಆನಂದವೆಂಬ ಕರ್ಮೇಂದ್ರಿಯಂಗಳು ತನ್ಮಾತ್ರಂ ಗಳು ತಾನಿರ್ದಲ್ಲ ; ಮನ ಬುದ್ದಿ ಚಿತ್ತ ಅಹಂಕಾರ ಜೀವನೆಂಬ ಜೀವಪಂಚಕಂಗಳು ತಾನಿರ್ದಲ್ಲಿ ; ಇವೆಲ್ಲ ತನ್ನಲ್ಲಿ ಉತ್ಪತ್ತಿಸ್ಥಿತಿಲಯವಾಗಿ ಮತ್ತೆ ತನ್ನ ಧೀನದಲ್ಲಿ ಆಡು ತ್ರಿಹುವಲ್ಲದೆ ಸ್ವತಂತ್ರ ಪರಬ್ರಹ್ಮವೇ ತಾನೆಂದರಿದ ಮಹಾಶರಣನು ಅವಳಿ ಧೀನದಲ್ಲಿ ತಾನಲ್ಲ ನೋಡಾ ಅಪ್ರಮಾಣ ಕೂಡಲಸಂಗಮದೇವಾ.

         ಕಲ್ಲದೇವರು ದೇವರಲ್ಲ , ಮಣ್ಣದೇವರು ದೇವರಲ್ಲ ; ಮರದದೇವರು ದೇವ 

ರಲ್ಲ : ಪಂಚಲೋಹದಲ್ಲಿ ಮಾಡುವ ದೇವರು ದೇವರಲ್ಲ ; ಸೇತುರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಅಷ್ಟಾಷಷ್ಟಿಕೋಟಿಪುಣ್ಯತೀರ್ಧಂಗಳು ಪುಣ್ಯಕ್ಷೇತ್ರಂಗಳಲ್ಲಿ ಇಹ ದೇವರು ದೇವರಲ್ಲ , ತನ್ನ ತಾನರಿದು ತಾನಾರೆಂದು ತಿಳಿ ದಡೆ ತಾನೇ ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವಾ.

                                                       ___________
                                    ಕೊಂಡಗೂಳಿ ಕೇಶಿರಾಜ 1 ನು. 1160 
      ಈತನ ಷಡಕ್ಷರಕಂದಕ್ಕೆ2  ಮಂತ್ರಮಹತ್ವದ ಕಂದ ಎಂಬ ಹೆಸರೂ 

ಉಂಟು.

                                                  _________________
                                        ಸಿದ್ದ ರಾm 3 ನು 1160 
      ಈತನು ಬಸವಸ್ತೋತ್ರದತ್ರಿವಿಧಿಯನ್ನೂ ಬರೆದಿದ್ದಾನೆ ಇದ 

ರಲ್ಲಿ 125 ಪದ್ಯಗಳಿವೆ. ಇದರಿಂದಲೂ ಇವನ ಬೇರೆ ಎರಡು ಗ್ರಂಧಗಳಿಂ ದಲೂ ಒಂದೊಂದು ಪದ್ಯವನ್ನು ಉದಾಹರಿಸುತ್ತೇವೆ---

                                         ಬಸವನ್ತೋತ್ರದತ್ರಿವಿಧಿ. 

ಲೋಕಲೋಕವನೆಲ್ಲ ಲೋಕಿಸದೆ ನಿಂದಲ್ಲಿ| ಬೇಕುಮಾಡಿದನೆನ್ನ ಬಸವಲಿಂಗ| ಮಕುಟಮಂಡಲದಲ್ಲಿ ಮನೆಗಟ್ಟಿ ನಿಂದವನು |ಅಕಳಂಕಬಸವನೈ ಯೋಗಿನಾಧ||

                                    ಮಿಶ್ರಸ್ತೋತ್ರದತ್ರಿವಿಧಿ. 4 

ಇಹಪರದ ಪರಿಯನು ಅಯ್ಯ ನೀನೇ ಬಲ್ಲೆ| ನಿಮ್ಮ ಶರಣನು ಬಲ್ಲ ಪ್ರಭುರಾಯನು| ಆತನನುಮತದಿಂದ ಮಾಯೆಯನು ಗೆಲುವುದನು | ನೀವೆನಗೆ ಕಲಿಸುವುದು

                                                                                                        ಯೋಗಿನಾಧ||

____________________________________________________________________________________________ I. Vol I, I52. 2 lbtd., 153 3 Ibtd., I50. 4. Ibtd , 151,