ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



    198                                                         ಕರ್ಣಾಟಕ ಕವಿಚರಿತೆ.
                                                                                                                                                      [16 ನೆಯ

ಇವರ ನಲ್ಪಿನ ದೀಹವುತ್ತಮರ ದಾಹವಿಂ ತಿವರ ನಡೆಯನಘರಸುಗಳಿಗಿದೇ ಕಡೆಯೆಂಬ | ಯುವತಿಯರು ಬಂದರಾದೇವದೇವೇಶನಂ ನೋಡೆ ಮತಮಗೆ ಕೂಡೆ | ಸಾವು ನೆಲದಲಿರ್ದಾತನಾಮಂಚಮಂ ಬಯಸುವಂ |

ಸಲೆ ಖಟ್ಟದಿಂದಿಳೆಯನೆಳಸುವಂ ಪುದಿದಿರ್ದ | 

ಮಲಮೂತ್ರದಿಂ ವಿವಸ್ತ್ರದೆ ಲಜ್ಜೆಯಂ ತೊಳೆಯುತಿರ್ದೆಕೊರಲ್ಗಳುಮೊಣಗುತ ||

ಸಲಿಲಮಂ ಬಯಸುತ್ತಲಂತಪ್ಪ ಬಾಧೆಯೊಳು | 

ಸಲೆ ಗರುಸಿದರ್ಧಮಂ ನೆನೆನೆನೆದು ದುಃಖದಿಂ | ಮಲಮಲಂಮಳುಗುರಜ್ಞಾನದಿಂ ತನ್ನ ಗೃಹರಕ್ಷಣೆಗೆ ಚಿಂತಿಸುವನು || -

                                                  ವಿರುಪರಾಜ 1519
ಈತನು ತ್ರಿಭುವನತಿಲಕವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ ; ರಾಜವಂಶಕ್ಕೆ ಸೇರಿದವನು. ತನ್ನ ಪರಂಪರೆಯನ್ನು ಹೀಗೆ ಹೇಳಿ ಕೊಂಡಿದ್ದಾನೆ -

ಏರುಬೀಡಿನ ಗೋಸೆ ಚೋಳರಭೀಮ ಚೋಳನಾರಾಯಣ ಹನ್ನೊಂದುಬೀಡಿ ನಮಂಡಲಿಕರಗಂಡ ಹೊನ್ನೊರೆಬಿರುದಾಂಕ ಶ್ರೀಕಂರವಂಶಾಬ್ಧಿ ಹಿಮಕರನಾದ ಚಿಕ್ಕವಿ ರೂಪಾಕ್ಷ , ಮಗ ಸಂಗಭೀಮ ಹೊನ್ನೊರೆಕಾವ ಏರುಬೀಡಿನಗೋಸವೆಸರನು ಶಾಳ್ದ ಕಾಮ , ಇವನ ಹೆಂಡತಿ ವೀರಾಂಬೆ , ಮಗ ನಾನಾಕಲಾರಾಮ ಚೋಳರ ಭೀಮ ಭೋಗನನುಜ ವಿರುಪರಾಜ (ಕವಿ).

       ಈ ಗ್ರಂಥವನ್ನು ಶಕ 1441 ಪ್ರಮಾಧಿಯಲ್ಲಿ, ಎಂದರೆ 1519ರಲ್ಲಿ, ರಚಿಸಿದಂತೆ ಹೇಳುತ್ತಾನೆ.
ಪೂರ್ವಕವಿಗಳಲ್ಲಿ ಕೆರೆಯಪದ್ಮರಸ, ಹರಿದೇವ, ಪಾಲ್ಕುರಿಕೆಯಾರಾಧ್ಯ, ಮಾಯಿದೇವಪ್ರಭು, ಬಾಣ, ಮಯೂರ, ಕಾಳಿದಾಸ, ರಾಘವಾಂಕ ಇವರುಗಳನ್ನು ಸ್ಮರಿಸಿದ್ದಾನೆ.

ಇವನ ಗ್ರಂಥ

             ತ್ರಿಭುವನತಿಲಕ್ 

ಇದು ಸಾಂಗತ್ಯದಲ್ಲಿದೆ ; ಸಂಧಿ 27, ಪದ್ಯ 1525. ಇದರಲ್ಲಿ 63