ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ವೀರಭದ್ರರಾಜ. 217

    ತಳೆದಿರ್ಪರಾದ್ವಿಜರ್ ನೆಲದಮರ್ದ್ದುಣಿವೆಸರ |
    ನುೞುದರಸುಮಗನರನಗಂಗೆ ಹೆಸರಾಪಸುಬೆ |
    ವಳನೆಂದು ವೈಶ್ಯನುಂ ಕುಡಿಯೆನಲ್ಕೊಕ್ಕಲಿಗನೆಂದಿಳೆಗೆ ಸಿದ್ಧಾಂತವು ||
                           ___ ___ ___
                     ವೀರಭದ್ರರಾಜ ಸು 1530
        ಈತನು ವೀರಭದ್ರವಿಜಯವನ್ನೂ, ಪಾರ್ವತೀವಲ್ಲಭಶತಕ, ಉಮಾ ಮಹೇಶ್ವರಶತಕ, ಪ್ರಾಣನಾಥಶತಕ, ಶ್ರೀಕಂಠಸೋಮೇಶ್ವರಕತಕ, ಕಂದ ಶತಕ ಎಂಬ 5 ಶತಕಗಳನ್ನೂ ಬರೆದಿದ್ದಾನೆ.
      ಇವನು ವೀರಶೈವಕವಿ; ರಾಜವಂಶಕ್ಕೆ ಸೇರಿದವನು.ತನ್ನ ವಂ ಶಾವಳಿಯನ್ನು ಹೀಗೆ ಹೇಳಿಕೊಂಡಿದ್ದಾನೆ ___ಶ್ರೀಕಂಠವಂಶವಾರಿಧಿಚಂದ್ರ ನಾದ ಚಿಕ್ಕವಿರುಪರಾಜ; ಮಗ ಕಾಮನೃಪ, ಇವನ ಹೆಂಡತಿ ವೀರ ಮಾಂಬೆ; ಅವರ ಮಗ ವಿರೂಪಾಕ್ಷನೃಪ; ಮಗ ಕವಿ ವೀರಭದ್ರರಾಜ. ಈತನ ತಂದೆಯಾದ ವಿರುವರಾಜನು 1519 ರಲ್ಲಿ ತ್ರಿಭುವನತಿಲಕವನ್ನು ಬರದುದಾಗಿ ಆ ಗ್ರಂಥದಿಂದ ತಿಳಿವುದರಿಂದ ಇವನ ಕಾಲವು ಸುಮಾರು 1530 ಆಗಬಹುದು.
         ಪೂರ್ವಕವಿಗಳನ್ನು
     ಬಾಣನ ಬೆಡಂಗು ಕನ್ನಡ |ಜಾಣಂ ಹಂಪೆಯಹರೀಶ್ವರನ ಬಗೆ ಸುಕವಿ | 
     ಪ್ರಾಣ೦ ಮಯೂರನೊಳ್ನುಡಿ | ಮಾಣದೆ ನೆಲಸಿಕೆ ಮತ್ಕೃತಿಯೊಳೊಳ್ಬಿಂದಂ|| 
     ಘನಕವಿಕಾಳಿದಾಸನಡಿಗಳ್ಗೆ ಹಲಾಯುಧನಂಘ್ರಗಳ್ಗ ಭೋ | 
     ಜನ ಚರಣಕ್ಕೆ ಮಲ್ಹಣನ ಪಾದಪಯೋಜಕೆ ನಾಡೆ ಕೇಶಿರಾ |
     ಜನ ಚರಣಕ್ಕೆ ಯುದ್ಭಟಮಹೀರಮಣಕ್ರಮಕೆಯ್ದೆ ಸಂತತಂ | 
     ವಿನಮಿತನಾಗಿ ಪೇಱೈನೊಲವಿಂ ಬುಧಸೇವ್ಯಮೆನಿಪ್ಪ ಕಾವ್ಯಮಂ ||
ಎಂಬ ಪದ್ಯಗಳಲ್ಲಿ ಸ್ಮರಿಸುತ್ತಾನೆ, ತನ್ನ ಗುಣಗಳನ್ನು ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ__
    ಮನಸಿಜಮಾನಭಂಜನಪದಾಂಬುಜವಲ್ಲದೆ ಮಿಕ್ಕ ದೇವರಂ !
    ನೆನೆದಱುಯಂ ಸಮಂತು ಪರಕಾಮಿನಿಯರ್ಕಳ ಸಂಗಮಂ ವಲಂ ||
      1, 199ನೆಯ ಪುಟವನ್ನು ನೋಡಿ
      28