ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

218 ಕರ್ಣಾಟಕ ಕವಿಚರಿತ. [16 ನೆಯ

     ಕನಸಿನೊಳಾದೊಡಂ ಮಱೆದು ಕಂಡಱುಯಂ ವಿರುಪೇಂದ್ರಸೂನುವೆಂ | 
     ದೆನಿಸುವ ವೀರಭದ್ರನೆನುತುರ್ವರೆಯೆದ್ದು ಪೊಗಱುದಾತನಂ | 
         ಇವನ ಗ್ರಂಥಗಳಲ್ಲಿ
                       1 ವೀರಭದ್ರವಿಜಯ 
         ಇದು ಚಂಪೂಗ್ರಂಥ, ಇದರಲ್ಲಿ ವಿರೇಶನ ಚರಿತವು ಹೇಳಿದೆ ವರ್ಣ 
ನಾಭಾಗನವೇ ಹೆಚ್ಚಾಗಿದೆ. ಈ ಗ್ರಂಥದ ಉತ್ಕೃಸ್ವತೆಯನ್ನು ಕವಿ ಈ ಪದ್ಯಗಳಲ್ಲಿ 
‍ಹೇಳಿದ್ದಾನೆ___ 
      ಘನರಸದಿಂ ವಿಚಿತ್ರಪದದಿಂದೆ ನಭೋಂಗಣದಂತೆ ನಾಡೆ ರಂ |
      ಜನೆವಡೆದಿರ್ಪ ಲಕ್ಷಣದಿನುನ್ನ ತಸತ್ಕಳೆಯಿಂದ ಪೂರ್ಣಚಂ |
      ದ್ರನ ಸಿರಿಯಂತನಂತಪರಿರಾಜದಲಂಕೃತಿಯಿಂ ಗುಣಂಗಳಿಂ | 
      ಮನಸಿಜವೈರಿಯಂತೆಸೆವುದೀಕೃತಿ ಬಿತ್ತೆಗರೊಲ್ದು ಭಾವಿಸಲ್ ||
      ಗುರುಪದವಿಭಕ್ತಿಯಿಂ ಬಂ | ಧುರಲಿಂಗತ್ರಯದೆ ಸ ತಿ ಯಾನ್ವಿತದಿಂದಂ || 
      ವರರೀತಿಭಾವದಿಂ ಶಂ | ಕರಭಕ್ತರತೆಱದಿನೆಸವುದೀಸತ್ಕಾವ್ಯಂ || 
      ಇದು ಲಕ್ಕಣದಾಡುಂಬೊಲ | ನಿದು ಸಕ್ಕದದೇೞ್ಗೈ ಗಾಡಿ ನೆಲಸಿದ ನಾಡಿಂ | 
      ತಿದು ದೇಶೀಯದ ಬೀಡೆನಿ / ಫುದು ನವರಸಭರಿತನವ್ಯಕಾವ್ಯಂ ದಿವ್ಯಂ ||
          ಗ್ರಂಥಾವತಾರದಲ್ಲಿ ವಿಶ್ವನಾಥಸ್ತುತಿ ಇದೆ. ಬಳಿಕ ಕವಿ ಪಾರ್ವತಿ, 
ವೀರಭದ್ರ, ನಂದಿ, ಭ್ರಂಗಿ, ಗಣೇಶ, ಪಣ್ಮುಖ, ಸರಸ್ವತಿ ಇವರುಗ ಳನ್ನು ಕ್ರಮವಾಗಿ 
ಸ್ತುತಿಸಿದ್ದಾನೆ.  ಆಶ್ವಾಸಾಂತ್ಯದಲ್ಲಿ ಈ ಗದ್ಯವಿದೆ___
         ಇದು  ಸಮಸ್ತಬ್ರಹ್ಮಾಂಡಸಾರ್ವಭೌಮ ಸಕಲಸುರಮಕುಟಮಣಿವಿರಾಜಿತ 
ಪಾದಪದ್ಮ ಶ್ರೀಕಾಶೀಪುರಾಧೀಶ್ವರವಿಶ್ವನಾಧಪಾದಪಂಕೇಜಮಕರಂದಮಧುಕರಾಯ 
ಮಾನ ಶ್ರೀಕಂರವಂಶಾರ್ಣವಪೂರ್ಣಚಂದ್ರನೆನಿಪ ಸತ್ಯವೇಶ್ವರ ವೀರಭದ್ರನೃಪಾಲವಿ 
ರಚಿತಮಪ್ಪ ಶ್ರೀವೀರಭದ್ರವಿಜಯಮಹಾಪ್ರಬಂಧದೊಳ್
         ಇವನ ಬಂಧವು ಲಲಿತವಾಗಿಯೂ ಹೃದಯಂಗಮವಾಗಿಯೂ ಇದೆ. ಈ 
ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ___
                             ಸಮುದ್ರ
   ಅನಿಮಿಷವೃಂದದಿಂ ಸುರನಿವಾಸದವೋಲ್ ಸಲೆ ವಿದ್ರುಮಂಗಳಿಂ |
   ವನದವೊಲಾಸರಸ್ವತಿಯ ಮೇಳದಿನಬ್ಬ ಜನಂತೆ ಸಂತತಂ ||