ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ವೀರಭದ್ರರಾಜ. 221

   ಕುಲವಿದು ಗೋತ್ರವಿಂತಿದು ಚರಿತ್ರವಿದೆಂಬುದನಿನ್ನೆಗಂ ರಸಾ | 
   ತಲದಿನಧಾತ್ರಿಯಲ್ಲಿ ನೆಱೆ ಕಂಡವರಿಲ್ಲೆಲೆದೇವ ನಿನ್ನ ನೀ || 
   ಕುಲಯುತೆ ಗೋತ್ರಜಾತೆ ಮಿಗೆ ಕೈವಿಡಿದಿರ್ದುದಱುಂದೆ ನೀಂ ಮಹಾ | 
   ಕುಲಪತಿಯೆಂಬುದಿಂದಱುಯೆಬಂದುದಿದೀಗಳುಮಾಮಹೇಶ್ವರಾ || 
   ಲಲಿತಮೃದೂಕ್ತಿಯಿಂದೆ ಗಿಳಿಯಂ ಮುಡಿಯಿಂದೆ ಮಯೂರನಂ ಚಲ | 
   ದ್ವಿಲಸಿತನೇತ್ರದಿಂದೆ ಮೃಗಿಯಂ ಮಧುರಸ್ವನದಿಂದೆ ಮತ್ತಕೋ || 
   ಕಿಲಮನದಾವಗಂ ಬಿಡದೆ ಪೋಲ್ತಗರಾಜಕುಮಾರಿ ನಿನ್ನ ತೋ | 
   ಳ್ವಲೆಗುಱೆ ಸಿಲ್ಕಿ ರಂಜಿಪುದು ಚೋದ್ಯಮೆ ನೋಡೆಯುಮಾಮಹೇಶ್ವರಾ |
   ಸುರುಚಿರಪುಣ್ಯದೊಬ್ಬುಳಿಯನಾಶ್ರಯಿಸಿರ್ಪನುರಕ್ತಿಯೇೞ್ಗೆಯೋ | 
   ಸುರಕುಜಮಂ ಸಮಂತಡರ್ದು ಪರ್ವಿದ ವಿದ್ರುಮವಲ್ಲಿಯೋ ಎನಲ್ ||
   ಕರಮೆಸೆದತ್ತು ನಿನ್ನ ಧವಳಾಂಗಸುಸಂಗದೊಳೊಪ್ಪುತಿರ್ಪ ಶಾಂ | 
   ಕರಿಯ ಶರೀರರಾಗರುಚಿ ಕಣ್ಗೆನಿದೀಯುತುಮಾಮಹೇಶ್ವರಾ ||
                         4. ಪ್ರಾಣನಾಥಶತಕ 
        ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಪಾರ್ವತೀಪ್ರಾಣನಾಥಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
   ಸೊದೆಯಂ ತ್ವದ್ಧ್ಯಾನಪೀಯೂಷಮನಜನೊಲವಿಂ ತೂಗಲಾಧ್ಯಾನಪೀಯೂ | 
   ಷದ ಪೆರ್ಚ೦ ಕಾಣ್ಬುದೆಲ್ಲಾಮುನಿತತಿಯಮರ್ದ೦ ಸೇವಿಸಂಗಕ್ಕುಮೇಗಂ || 
   ತ್ರಿದಶಾಂಗಂ ಧ್ಯಾನಪೀಯೂಷಮನುಱೆ ಸವಿವಂಗಕ್ಕುಮಷ್ಟಾಂಗಮೆಯ್ದಿಂ | 
   ತಿದು ಚಿತ್ರಂ ಸೆಂಪುದಾಳ್ದಿರ್ಪುದನಱುತಿವಱೋಳ್ ಪಾರ್ವತೀಪ್ರಾಣನಾಧಾ || 
   ತನುಗಾಸತ್ತಾಗೆ ಸರ್ವೆಂದ್ರಿಯಮವು ಪಟುವಂ ನೀಗೆ ಮುನ್ನರ್ಜಿಸಿರ್ದ | 
   ರ್ಧನಿಕಾಯಂ ಪೋಗೆ ದೇಹಂ ವಲಿತಪಲಿತಕಿಂಬಾಗೆ ಬೆನ್ನೊಪ್ಪದಿಂದಂ || 
   ಧನುವೋಲ್ ಮುಂ ಬಾಗೆ ನೋಡಲ್‌ ಶಿರಮದು ಭರದಿಂ ತೂಗೆ ಧರ್ಮಕ್ಕೆ ನಿಮ್ಮ|
   ರ್ಚನೆಗಿಂಬುಂಟೇ ಮನುಷ್ಯರ್ಗಘಹರ ಗಿರಿಶಾ ಪಾರ್ವತೀಪ್ರಾಣನಾಧಾ ||
                         5. ಶ್ರೀಕಂಠಸೋಮೇಶ್ವರಶತಕ 
       ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಶ್ರೀಕಂಠಸೋಮೇಶ್ವರಾ ಎಂದು ಮುಗಿಯುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇನೆ...