ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 $40 ಕರ್ಣಾಟಕ ಕವಿಚರಿತೆ. [16 ನೆಯ

ಗ್ರಂಥಾವತಾರದಲ್ಲಿ ಚೆನ್ನಿಗರಾಯನ ಸ್ತುತಿ ಇದೆ. ಈ ಗ್ರಂಥದಿಂದ ನರೆದಲೆಗನಿಗೂ ವ್ರೀಹಿಗೂ ನಡೆದ ವಾಗ್ವಾದರೂಪವಾದ ಕೆಲವು ಪದ್ಯಗಳನ್ನು ತೆಗೆದುಬರೆಯುತ್ತೇವೆ-
                ವ್ರೀಹಿಯ ಮಾತು 
         ಕ್ಷಿತಿಯಮರರುಪನಯನದಲಿ ಸು | ವ್ರತಸುಭೋಜನಗಳಲ ಮಂತ್ರಾ | 
         ಕ್ಷತೆಗಳಲಿ ಶುಭಶೋಭನದಲಾರತಿಯ ಬೆಳಗುವಲಿ ||
         ಕ್ರತುಗಳೆಡೆಯೊಳಗರಮನೆಗಳಲಿ | ಪ್ರತಿದಿನವು ರಂಜಿಸುತ ದೇವರಿ | 
         ಗತಿಶಯದ ನೈವೇದ್ಯವಾಗಿಹೆನೆಂದನಾವ್ರಿಹಿಗ ||
         ಜನಪರಿಗೆ ಶಿಶುಗಳಿಗೆ ಬಾಂಧವ | ಜನರೆಡೆಗೆ ಬ್ರಾಹ್ಮರ ಸಮಾರಾ | 
         ಧನೆಗೆ ವಿದ್ಯಾರಂಭಕಲಿಸುವ ಸಕಲಭೂಸುರರ ||
         ಮನೆಗಳಲಿ ಹರಿದಿವಸದೌಪಾ | ಸನಗಳಲಿ ತಾ ಯೋಗ್ಯ ನಹುದೆ೦| 
         ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ || 
         ಹೊಸಮನೆಯ ಪುಣ್ಯಾರ್ಚನೆಗೆ . | ... ಹಸುಮಕ್ಕಳಿಗೆ ಸೇಸೆಗೆ | 
         ವಸುಮತೀಶರ ಗರುಡಿಯಲಿ ಶಸ್ತ್ರಾಸ್ತದರ್ಚನೆಗೆ || 
         ಎಸೆವ ವಿಪ್ರರ ಫಾಲದಲಿ ರ೦ | ಜಿಸುತ ಗಂಧಾಕ್ಷತೆಯಹೆನು ಭಾ | 
         ವಿಸಲು ಲೋಕದೊಳಾರು ಸರಿ ತನಗೆಂದನಾವ್ರಿಹಿಗ ||
              ನರೆದಲೆಗನ ಮಾತು
         ಸತ್ವಹೀನರ ಒಡವರನು ಕ | ಣ್ಣೆತ್ತಿ ನೋಡೆ ಧನಾಢ್ಯರನು ಬೆಂ | 
         ಬತ್ತಿ ನಡೆವೆಯುಪೇಕ್ಷೆ ನಿನ್ನದು ಪೇಳೇಲೇನದನು || 
         ಹೆತ್ತ ಬಾಣತಿಯರಿಗೆ ರೋಗಿಗೆ | ಪಧ್ಯಪಾನದಿ ಹೆಣದ ಬಾಯಿಗೆ |
         ತುತ್ತು ನೀನುಹೆ ನಿನ್ನ ಜನ್ಮ ನಿರರ್ಧಕರವೆಂದ || 
         ಮಳೆದೆಗೆದು ಬೆಳೆಯಡಗಿ ಕ್ಷಾಮದ | ವಿಳಯಕಾಲದೊಳನ್ನವಿಲ್ಲದೆ | 
         ಯಳುವ ಪ್ರಾಣಿಗಳಾದರಿಸಿ ಸಲಹುವೆನು ಜಗವಳೆಯ || 
         ಎಲವೊ ನೀನೆಲ್ಲಿಹೆಯೊ ನಿನ್ನಯ | ಬಳಗವದು ತಾನೆಲ್ಲಿಹುದೊ ಈ | 
         ಹಲವುಧಾನ್ಯಗಳೆನಗೆ ಸರಿಯಲ್ಲೆಂದ ನರೆದಲೆಗ ||
         ಸತ್ತವರ ಪ್ರತಿಬಿಂಬರೂಪನು | ವಿಸ್ತರಿಸಿ ಪಿತೃನಾಮಗಳ ನಿನ |
         ಗಿತ್ತು ಮೂವರ ಪೆಸರಿನಲಿ ಕರೆಕರೆದು ದರ್ಭೆಯಲಿ ||