ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಸೋಮನಾಧಕವಿ 327

ಅಡಿಯ ಕೆಂಪಿಗೆ ನುಣೊಡೆಯ ಬಣ್ಣಿಗೆ ಪೊ |ನ್ನುಡೆಯ ಸೆ೦ಪಿಗೆ ಪೂದಳೆದ |         
ಪೊಡೆಯತಣ್ಣಿಗೆ ಮೊಗದೆಡೆಯ ಸೊಂಪಿಗೆ ಸಿರಿ|ಮುಡಿಯ ಕಂಪಿಗೆ ಮೋಹಿಸುವೆನು||
                 ಧರ್ಮರಾಜನ ಉಕ್ತಿ                               
ನಡೆನುಡಿನೆನಹುಗಳೊಳು ಪರಹಿಂಸೆಯ | ನೋಡಬಡದಿರವಿಗೀಡುಂಟೇ |                     
ಅಡಸಿದಾಸತ್ತಿನೊಳಾದರು ಪುಸಿವಾತ | ನುಡಿಯದುದಕೆ ಸುಯುಂಟೇ |                        
ಪ್ರಟ್ಟು ಪೊಂದುಗಳ ಪೋರಟೆ ಪೊದ್ದದು ಪಾಪ ಮುಟ್ಟದು ಮೋಹ ಮುಸುಕದು;                       
ನೆಟ್ಟನೆ ವೈರಾಗ್ಯಮಿರೆಯಿಹಪರಸೌಖ್ಯ | ಬೆಟ್ಟ ತಪ್ಪುದು ತಪ್ಪದಿದು ||
                 ಅರ್ಜುನನ ಉಕ್ತಿ                               
ಧನವಿಲ್ಲದಿರೆ ಧೈದ್ಯಕೆಚ್ಚು, ತಲ್ಲಣ ಹುಟ್ಟ ಮನಕುಂದಿ ಮತಿ ಮಸುಳುವುದು!          
ತನಿವೇಸಗೆಯೊಳು ತೋಳನೀರಂತೆ ನಿ | ರ್ಧನರ ಗೆಯ್ಕೆಗಳಡಗುವುವು ||
                  ಭೀಮನ ಉಕ್ತಿ                                        
ಪರಿಕಿಸೆ ಸನ್ಯಾಸವೆಂಬುದು ಜಗದೊಳು | ಪರಿಪರಿಯೊಳು ಭಂಗವಡೆದು |                 
ಪುರುಳುಗೆಮ್ಮೊಡಲ ಪೊರೆಯಲಯದವರ | ಪರಮನಾಸ್ತಿಕವಾದವೈಸೆ |
                   ____ ____ ___
             ಸೋಮನಾಥಕವಿ ಸು 1600                              
  ಇತನು ಅಕ್ಷರಚರಿತ್ರೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ                                                           
ಕವಿ ಪೂರ್ವಕವಿಗಳಲ್ಲಿ ಕುಮಾರವ್ಯಾಸನನ್ನು (ಸು 1430) ಸ್ತುತಿಸಿರುವುದ                                                
ರಿಂದ ಇವನಕಾಲವು ಸುಮಾರು 1600 ಆಗಿರಬಹುದೆಂದು ತೋರುತ್ತದೆ.
  ಇವನ ಗ್ರಂಥ
                 ಅಕ್ಕೂರಚರಿತ್ರೆ                                       
 ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ;ಸಂಧಿ9,ಸದ್ಯ 501. ಇದರಲ್ಲಿ                                              
ಶ್ರೀಯರಸನು ಅಕ್ರೂರನಿಗೆ ತನ್ನ ನಿಜವನ್ನು ತೋರಿಸಿದ ಕಥೆ ಹೇಳಿದೆ.ಇ                                                  
ದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...
                   ಗೊಲ್ಲರು                                   
ತಗಡುಗಣ್ಣಿಯ ಮರಿವ ಕಡೆಗೋ ' ಲುಗಳ ತಿದ್ದುವ ದಾವಣಿಯ ಗೂಂ |                    
ಟಗಳ ಕೆತ್ತುವ- ಮಗುನೇಣಿನ ಹುರಿದು ಪಿಡಿದುಡಿವ||                               
ಮೊಗವಡವ  ಮಾಡುವ ಮನೆಯ ಹ | ಟ್ವಿಗಳ ಕುಟತೆವರುಗಳ ತಿದ್ದುವ |                 
ಬಗೆಯಲೊಪ್ಪುವ ಗೋವಳರನಕೊರನೀಕ್ಷಿಸಿದ |