ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

319 ಶತಮಾನ]

                       ಸಿದ್ದನಂಜೇಶ
                       ದೇಶವರ್ಣನೆ
ದೇವನಿಕೇತನ ಹೂವಿನ ತೋಟಂ | ತಾವರೆ ತೀವಿದ ಪೂಣ೯ ತಟಾಕಂ | ಆವೆಡೆ   ನೋಡಲ್             ಭಕ್ತರ ಕೂಟಂ | ಪಾವನವೆತ್ತಿ ಸದಾಜಗದಾಟಂ ||
                       ಕಾಡು 

ಧರೆವೆಣ್ಣ ಬಿಸಿಲುಬೇಗೆಯ | ಪರಿಹರಿಪೆನೆನುತ್ತೆ ಕರದೊಳಾಂತಿಹ ಕೊಡೆವೋಲ್ | ಹುಗಿಂಬುಗೊಡದೆ ನಾನಾ | ತರುಗಳ್ ಕಿಷ್ಕಿoಧನಾಗಿ ರಾರಾಜಿಸುಗುಂ |

               2. ಶಿವಗಣಚಾರಿತ್ರ. 

ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 42, ಪದ್ಯ 2740. ಇದರಲ್ಲಿ ಶಿವಗಣಗಳ ಮಹಿಮೆ ವರ್ಣಿತವಾಗಿದೆ ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ ಕನ್ನಡಿಯಂತೆ ಕಲ್ಪದ್ರುಮದಂತೆ ಬಾ | ವನ್ನ ದ ಪರಿಮಳದಂತೆ | ಚೆನ್ನಾದುದೀಕಾವ್ಯವೆಂದು ರಸಿಕರಭಿ | ವರ್ಣಿಸುವರು ತವ:ತಮಗೆ || - ಗ್ರಂಧಾವತಾರದಲ್ಲಿ ಶಾಂತವೀರೇಶ್ವರಸ್ತುತಿ ಇದೆ. ಬಳಿಕ ಕವಿ ತೋಂಟದ ಸಿದ್ದಲಿಂಗ, ಹೋಳಿನಹಂಪೆಯಾರ್ರ್ಯ , ಕಟ್ಟಿಗೆಯ ಸಂಗಯ್ಯ, ಕೊಟ್ಟೂರು ಬಸವೇಶ, ಚಾಮರಾಜನ ಸಭೆಯಲ್ಲಿ ರಾಮದೀಕ್ಷಿತನನ್ನು ವಾದದಲ್ಲಿ ಸೋಲಿಸಿದ ತನ್ನ ತಂದೆ ಚೆನ್ನಾರ್ರ್ಯ

      ಇವರುಗಳನ್ನು ಹೊಗ ಳಿದ್ದಾನೆ.

ದೇವರಾಚಾರ್ ಸ,1650

 ಈತನು ಚಿಕ್ಕುಪಾಧ್ಯಾಯನ (1672) ದೊಡ್ಡಪ್ಪನು, .      ಇವನನ್ನು   
 ಚಿಕ್ಕುಪಾಧ್ಯಾಯನು ತನ್ನ ಶಿರಂಗಮಾಹಾತ್ಮದ ಆದಿಭಾಗದಲ್ಲಿ ಕವಿ ಎಂದೂ ಕರ್ಣಾಟಬಾಷಾಚದುರಂ                                      ಎಂದೂ ನಿನ್ನಿಸಿ ಹೇಳಿದ್ದಾನೆ. ಇವನು ಆವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು.

ಸಿದ್ಧ ನಂಜೇಶ ಸು [650 ಈತನು ರಾಘವಾಂಕ ಚಾರಿತ್ರ, ಗುರುರಾಜಚಾರಿತ್ರ ಇವುಗಳನ್ನು ಬರೆದಿದ್ದಾನೆ. ಅಲ್ಲದೆ ತೋಂಟದ ಸಿದ್ದ ದೇಶಿಕನ ಭಾವರತ್ಯಾಭರಣ, ಬಸವ