ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕರ್ಣಾಟಕ ಕವಿಚರಿತೆ [17 ನೆಯ

                                                                  3, ಶಬರಶಂಕರವಿಲಾಸ
                       ಇದೂ ಚಂಪೂರೂಪವಾಗಿದೆ; ಆಶ್ವಾಸ : ಈ ಗ್ರಂಥವನ್ನು ರಚಿಸುವುದಕ್ಕೆ ಮುಂದೆ ರಾಜಶೇಖರವಿಲಾಸ ಬಸವರಾಜವಿಜಯಗಳನ್ನು ಕನ್ನಡದಲ್ಲಿಯೂ ಕವಿಕರ್ಣರಸಾಯನವನ್ನು ಸಂಸ್ಕೃತದಲ್ಲಿಯೂ ಬರೆದಂತೆ ಕವಿ ಹೇಳುತ್ತಾನೆ. ಇದರಲ್ಲಿ ಶಿವನ 15ನೆಯ ಲೀಲೆಯಾದ ಶಬರಲೀಲೆ ವರ್ಣಿಸಲ್ಪಟ್ಟಿದೆ.
ಈ ಕಾವ್ಯದ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗ ಳಲ್ಲಿ ಹೇಳಿದ್ದಾನೆ --

ಬೇಂಗೊಡದಂತ ಝ೦ಕುಸ ತುಂಬಗಳಿ೦ಚರದಂತೆ ಪೆ೦ಪನಾ | ಳ್ದಿ೦ಗಡಲ೦ತೆ ಪಣ್ತೊಸೆವ ವಾಮರದಂತೆ ಪಯೋಜದಂತೆ ಬೆ || ಳ್ದಿ೦ಗಳ ಸೊಂಪಿನಂತೆ ಸುಸಿಲಾಸೆಯ ನಲ್ಲಳ ನೋಟದಂತೆ ಚಿ |

ತ್ತ೦ಗೊಳಲಾರ್ಪುದೀಕೃತಿ ಷಡಕ್ಷ೦ದೇವಕೃತಂ ರಸಜ್ಞರಾ | 

ಇದು ಪೊಸರೀತಿ ನೇಡಿದು ನವೀನಮಲಂಕೃತಿ ನವ್ಯಭಾವಮಿ೦ | ತಿದು ನವವೃತ್ತಿ ಲೇಸಿದು ರುಸ್ಪಿತಿ ನೂತ್ನ ಮಿದಲ್ತೆ ನೂತನಂ || ಪದರಚನಾವಿಲಾಸವುದು ಕಬ್ಬಮಪೂವ౯ಮಿದೆಂದು ಕಬ್ಬಿಗರ್|

ಪದೆದೊಲವಿಂದೆ ಕೀರ್ತಿಗೆ ನಿಮಿಹಿ ವರ್ಸಿಸುಭಗಪ್ರಬಂಮ೦ ||
   ಗ್ರಂಥಾವತಾರದಲ್ಲಿ ಶಿವಸ್ತುತಿ ಇ., ಬಳಿಕ ಕವಿ ಪಾರ್ವತಿ, ವೃಪ ಭೇಶ್ವರ, ಪುರಾತನರು, ಷಣ್ಮುಖ, ವೀರಭದ್ರ, ನಂದಿ, ಭುృ೦ಗಿ, ರೇಣುಕ, ದಾರುಕ, ಗಣೇಶ, ಚತುರಾಚಾರ್ಯರು ಇವರುಗಳನ್ನು ಸ್ಮರಿಸಿದ್ದಾನೆ. ಆಶಾ ಸಗಳ ಅಂತ್ಯದಲ್ಲಿ ಈ ಗದ್ಯವಿದೆ----
    ಇದು ನಿಖಿಳಸುರಾಸುರೇಂದ್ರ ವರದ ಸಿಪಿಳಭುವನೈಕವಲ್ಲಭ ಕರುಣಾಕರ ಪರ ಮಶಿವಲಿಂಗತರುಣಪತಂಗಸಂಗತಹೃದಯಾರವಿಂದಬಂಧುರ ಸರಸಜನಮಾನಿತೋಭಯ ಕವಿತಾಪಿಚಕ್ಷಣ ಶ್ರೀಷಡಕ್ಷರದೇವವಿರಚಿತಮಾದ ಶಬರಶಂಕರವಿಳಾಸವಿಪುಳಪ್ರ
ಬಂಧದೊಳ್.
    ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:-
                                                      ಗಿಳಿ
ತನಿವಣ್ಣಂ ಮನವಾಳೆ ನೋಡಿ ಒಳಿವ೦ದೊಲ್ದಪ್ಪಿ ಪಕ್ಕಂಗಳಿಂ |
ದನಿದೋಳುತ್ತೊಲವೆತ್ತು ಚಂಚುಪುಟದಿಂದಂ ಮೆಲ್ಪಿನಿಂ ಸೀಳ್ದು ಸೀ |