ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ತಿರುಮಲಾರ್ಯ. 443

     ಸುಱುದು ಕುರುಳಳ್ಳೊಳ್ ತೊಳಗಿ ನುನ್ಬಣೆಯೊಳ್ ಕುಡಿಗೊಂಡು ಪುರ್ಬಿನೊಳ್| 
     ಪೊಳೆದೆಸೞಣನ್ಗಳೊಳ್ ಮುಗುಳು ಮೆಲ್ನಗೆಯೊಳ್ ಪೂಗರೇಯಿೞು ಗಲ್ಲದೊಳ್ || 
     ಬಳೆದು ಕುಚೆಂಗಳೊಳ್ ನವೆದು   ನಲ್ನಡುವಲಿ ಕಡುರಯ್ಯಮಾಗಿ ಕ | 
     ಣೊಳಿವುದು ನಲ್ನಳಾಕೃತಿಯುಮಿಕೃತಿಯುಂ ಪವನೊಂದಿದಂದದಿಂ || 
     ಕಂದೇ ಕವಿಕೋಕಿಲಮಾ | ಕಂದಂ ಕೊಮಳವಿಕಾಸಿಕೃತಿಕಲ್ಪಲತಾ |
     ಕಂದಂ ವಿಸೃಮರರಸದು | ಕಂದಂ ಚಿಕದೇವರಾಯಚಂದನ ಚಂದಂ ||
        ಗ್ರಂಥಾವತಾರದಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ , ಸುದ
     ರ್ಶನ, ಪಾಂಚಜನ್ಯ, ಸೂರಿಗಳು, ದಿವ್ಯಸೂರಿಗಳುಇವರುಗಳನ್ನು ಸ್ತುತಿಸಿ,
    ಸತ್ಕವಿಸ್ತುತಿ ದುಷವಿನಿಂದೆಗಳನ್ನು ಮಾಡಿ ಗ್ರಂಧವನ್ನು ಆರಂಭಿಸಿದ್ದಾನೆ.
       ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ - 
       ಇದು ಯದುಗಿರಿಶಿಖರಾಭರಣಶ್ರೀಮನ್ನಾರಾಯಣಚರಣಪರಿಚರಣಸರಾಯಣ 
    ಶರಣಾಗತರಕ್ಷಣವಿಚಕ್ಷಣ ಸಕಲಕಲಾಪ್ರವೀಣ ಬಿರುದೆಂತೆಂಬರಗಂಡ ಲೋಕೈಕವೀರ 
    ಭೂರಿತುರುಷ್ಕಶುಷ್ಕವನದಾವಾನಲ ಮರಾಟಝಾಟಮೇಘಚ್ಚಟಾವಿಘಟನನಿರಾಘಾಟ 
    ಪ್ರಳಯಕಾಲಜಂಝನಿಲ ಪಾಂಡ್ಯಮಂಡಲಾಧಿಪನೇತಂಡವಿಲುಂರನಕ೦ರರೀರವ ಮಲೆಪ 
    ನೃಸಮದಮರ್ದನ ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರಪ್ರೌಢವ್ರುತಾಪನವ್ರ 
    ತಿಮವೀರನರಸತಿ ಶ್ರೀಚಿಕದೇವಮಹಾರಾಜಕೃಪಾಪರಿಪಾಲಿತ ಶ್ರೀತಿರುಮಲೆಯಾರ್ಯವಿರ
    ಚಿತಮಪ್ಪ ಚಿಕದೇವರಾಜವಿಜಯಮಹಾಪ್ರಬಂಧದೊಳ್.
        ಈ ಗ್ರಂಥವು ಕಾವ್ಯಸರಣಿಯಲ್ಲಿ ಮೈಸೂರುಚರಿತ್ರೆಯನ್ನು ತಿಳಿಸು
    ವುದರಿಂದ ಮೈಸೂರುಚರಿತ್ರವನ್ನು ಬರೆವವರಿಗೆ ಸಹಾಯಕವಾಗಿದೆ; ಬಂಧ
   ವೂ ಪ್ರೌಢವಾಗಿದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆ
   ಯುತ್ತೇವೆ-
                           ಕವಿಗಳ ಮಹಿಮೆ
      ಕಡುಪಿ೦ ಕೂರಾನೆ ಕಾಱಚಡವಿಬಜಿಸಿಡಿಮಿಂಚೆಂಬಿವೆಲ್ಲ೦ |
      ಪಡೆಗುಂ ನೋಳರ್ಗೆ ಮೇಣುಬ್ಬಿಗದೆದವನವೇ ಮತ್ತೆ ಮೊಳಬ್ಬದೊಳ್ ಬಂ || 
      ದೊಡನೆಳ್ಳಂ ಪೆತ್ತುಮಾಱು೦ ಸಹೃದಯಹೃದಯಾಹ್ಲಾದಮಂ ನಾಡೆಯೆಂತಾ | 
      ದೊಡಮಳ್ಳೇಂ ಕಬ್ಬಿಗರ್ ತಾಮಘಟಿತಘಟನಾನೂತನಬ್ರಹ್ಮರಲ್ತೆ ||