ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತಿಮ್ಮಕವಿ

ಭ್ರಗುನಾರದಸdವಾದಿರೂಪವಾಗಿ ಕಥಿತವಾದವೆಂಕಟಗಿರಿಯ ಅಥವಾ ತಿರು ಪತಿಯ ಮಹಾತ್ತ್ವವು ಹೇಳಿದೆ. ಈ ಕಾವ್ಯದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ.- ಸರಸಿಜದಂತೆ ಸಾರಗುಣಮರ್ಣಪದಂತಿ ರಸಾರ್ದ್ರಮರ್ಕನಂ | ತಿರೆ ಘನಮಾರ್ಗಶೋಭಿ ಲಲನಾಒನದಂತಿರೆ ಭಾವಜಾತಿಒಂ | ಧುರಮಮರಾಗದಂತೆ ವಿಬುಧಾ ವಳಿಮಂಡಿತಮಬ್ಬ ಬಿಂಒದು | ತಿರೆ ಸುಕರಪ್ರಸಿದ್ಧಮೊನಿಕುಂ ಕೃತಿಯಿಂತಿದು ನೋಡೆ ಮಕ್ಕೃತಂ || ಗ್ರಂಥಾವತಾರದಲ್ಲಿ ವೆಂಕಟೇಶಸ್ತುತಿ ಇದೆ, ಬಳಿಕ ಕವಿ ಲಕ್ಷ್ಮಿ, ಸರೋಭೂತಮಹದ್ಬಕ್ತಿಸಾರಕಠಕೋಪಮಧುರಕವಿಕುಲಶೇಖರಭಟ್ಟನಾ ಥಗೋದಾಭಕ್ತಾಂಘ್ರಿರೇಣುಮುನಿವಾಹಪರಕಾಲರೆಂಬ 12 ಆಳ್ವಾರು ಗಳು,ರಾಮಾನುಜ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ ಇದು................... .. ಮಹಿಷಪುರವರಹರಿವಿಷ್ಟರಾಧ್ಯಕ್ಷ ಶ್ರೀ ಮರಚಿಕ್ಕದೇವಮಹಾರಾಯಪ್ರಸಾದೈಕಾಶ್ರಯ ಚತುರಮತಿಸಚಿರಕುಲಲಲಾಮ ಶ್ರೀ ಚಿಕ್ಕು ಪಾಧ್ಯಾಯನಿರೂಪಣದಿಂ ಕವಿತಿಮ್ಮಪ್ರಣೇತಮಪ್ಪ ವೆಂಕಟಾಚಲಮಹಾ ತ್ಮದೊಳ್. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ವಸಂತ ತಳಿರ್ವೆಳವಮಾವು ಸಣ್ಣನನೆಯೇವ ಪಾಟಳಿ ಕುಟ್ಟ ಕಾಳಿಯಂ | ತಳೆವದಿರ್ಮುತ್ತೆ ಪಲ್ಲವಿಪಶೋಕೆ ಸುಮಂಗಳನಾ೦ದ ಚಂಪಕಾ | ವಳಿ ಮೊನೆಮೊಗ್ಗೆ ಯಂ ಧರಿಪ ಮಲ್ಲಿಗೆ ಕೂಗುವ ಕೋಕಿಲವ್ರಜಂ | ಕಳರವದಿಂಪನಾಳ್ವಗಿಳಿಯೊಪ್ಪಿದುದಾಮಧುಮಾಸದೇವ್‌ಯೊಳ್ || ಅಶೋಕ ಅಸುಗೆ ತಳಿತುಕೆಟ್ ವಿರಡಿ ಪ್ರಸರಾಸುಗೆ ಮುಳಿಗುದೆಂದು ಮುಳಿದೊದೆಯ ಸತೀ! ವಿಸರದೆಡದಂಘ್ರಯಾವಕ | ರಸಮರ್ದಂಟಿದವೊಲೆಸಗುಮದಳದಳಿಗಳ೪°| ಅಂಜನಾದೇವಿ ತಳಿರಡಿ ಬಾಳೆಯಂ ಜಣಿನ ನುಣ್ದೋಡೆ ತೆಳ್ಳ ಸಿಂಪುವೆತ್ತ ಪೊಂ | 63