ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯನೂ ರಚಿಸಿದರು, ಇಕ್ಕೇರಿ ವೆಂಕಟಪ್ಪನಾಯಕನ (1582-1629) ಆಜ್ಞೆಯಿಂದ ತಿರುಮಲಘಟ್ಟನು ಶಿವಗೀತೆಯನ್ನೂ, ಬಸವಪ್ಪನಾಯಕ ಸು (4697-1714) ಸೂಕ್ತಿಸುಧಾಕರವನ್ನೂ, ಸೋಮಶೇಖರನಾಯ ಕನ (1714-1739) ಮಂತ್ರಿಯಾದ ನಿರ್ವಾಣಯ್ಯನು ಶಿವಪೂಜಾವಿಧಾ ನವನ್ನೂ ಬರೆದರು. ಈಳಲೆ ವೀರರಾಜನು ವೈದ್ಯ ಸಂಹಿತಾಸಾರಾರ್ಣವ ವನ್ನು ರಚಿಸಿದನು; ಇವನ ಆಶ್ರಿತನಾದ ಚೆನ್ನಯ್ಯನು ಸದ್ದಿನೀಪರಿಣಯ ವನ್ನು ಬರೆದನು ; ಇದೇ ವೀರರಾಜನ ಮಗನಾದ ಕಳಲೆ ದೇವರಾಜನ ಆಶಿತ ರಂಗಯ್ಯನು ತುಲಾಕಾವೇರೀಮಾಹಾತ್ಮವನ್ನು ಬರೆದಿದ್ದಾ ನೆ: ಈ ದೇವರಾಜನ ತಮ್ಮನಾದ ಕಳಲೆ ನಂಜರಾಜನು ಕಕುದ್ದಿರಿ ಮಹಾತ್ಮವೇ ಮೊದಲಾದ ಅನೇಕಗ್ರಂಥಗಳನ್ನು ರಚಿಸಿದ್ದಾನೆ ; ಇವನ ಆಶ್ರಿತರಲ್ಲಿ ನೂರೊಂದನು ಸೌಂದರಕಾವ್ಯವನ್ನೂ ವೆಂಕಟೇಶನು ಹಾಲಾ ಸೈಮಾಹಾತ್ಮವನ್ನೂ ಬರೆದಿದ್ದಾರೆ. ಅಲ್ಲದೆ ಕುಸುವ ಾವಳೀಕಾವ್ಯವನ್ನು ಬರೆದ ದೇವಕವಿಗೆ (ಸು. 12೬೦) ಚಿಕ್ಕರಾಜಚಮೂಪನ, ನೇಮಿನಾಥ ಪುರಾಣವನ್ನು ರಚಿಸಿದ ಮಹಾಬಲಕವಿಗೆ (1-54) ಕೇತಯನಾಯಕನೂ, ದ್ವಾದಶಾನುಪೇಕು ಕಾರನಾದ ವಿಜಯಣ್ಣನಿಗೆ (1148) ಬೆಳುವಲನಾಡಿನ ನೆಮ್ಮನಭಾವಿಯ ಪ್ರಭು ಹೊನಬಂದಿ ಯ ದೇವರಾಜನೂ, ಸೌಂದರ ಪುರಾಣ ಕರ್ತೃವಾದ ಬೆನ್ನ ರಸನಿಗೆ (ಸು, 1- 5) ಡೆಂಕಣಿಕೋಟೆ ಪುರಾಧಿಪ ತಿಪ್ಪರಸನ ಪೋಷಕರಾಗಿದ್ದಂತೆ ತಿಳಿಯುತ್ತದೆ - ಇನ್ನು ಕೆಲವರು ಕವಿಗಳು ಚಿಕ್ಕ ಚಿಕ್ಕ ಪಾಳೆಯಪಟ್ಟುಗಳಿಗೂ ಗ್ರಾಮಗಳಿಗೂ ವಿಭುಗಳಾಗಿದ್ದಂತೆ ತೋರುತ್ತದೆ. ಇವರುಗಳ ಹೆಸ ರನೂ ತತ್ತ ಗ೧ಧನಾಮವನೂ ಕೆಳಗಣ ಪಟ್ಟಿಯಲ್ಲಿ ಕೋಟ್ಯ ದ್ದೇನೆ. ಕ. ಗ್ರಂಥ. ಚೋಳರಾಜನಾದ ಸೋಮನಾಧನ ಮಗ ಉದಯಾದಿತ್ಯ ಉದಯಾದಿತ್ಯಾಲಂಕಾರ ಸು, 1150 ಇಂದ ಶೇಖರರಾಜನ ಮಗ ಸೋಮರಾಜ ಉದ್ಧಟಕಾವ್ಯ 1222 ಕಲ್ಲ,