ಪುಟ:ಕರ್ನಾಟಕ ಗತವೈಭವ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



- ೭ -

ಕರ್ನಾಟಕದ ಇತಿಹಾಸವನ್ನು ಅಭ್ಯಾಸಮಾಡುವವರು ತೀರ ಅಪೂರ್ವ. ಇಂದಿನವರೆಗೆ, ಈ ವಿಷಯಕ್ಕೆ ತರುಣರಲ್ಲಿ ಸಂಪೂರ್ಣ ಅನಾಸ್ಥೆಯೇ ಉಂಟೆಂದರೂ ಸಲ್ಲುವುದು, ಈ ಅನಾಸ್ಥೆಯನ್ನು ದೂರಗೊಳಿಸಿ, ಕರ್ನಾಟಕದ ಇತಿಹಾಸ ವನ್ನು ಅಭ್ಯಾಸಮಾಡುವವರಿಗೆ ಉಂಟಾಗಬಹುದಾದ ತೊಂದರೆಗಳನ್ನು ತಿಳಿಯ ಹೇಳಿ, ಅವರಿಗೆ ಮಾರ್ಗದರ್ಶಿಯಾಗುವಂತೆ ಕೆಲವು ಸೂಚನೆಗಳನ್ನು ಮಾಡುವುದೇ ಈ ಪ್ರಬಂಧದ ಎರಡನೆಯ ಉದ್ದೇಶವು. ಈ ಉದ್ದೇಶಗಳಿಂದಲೇ, ಎರಡು ಪೂರಕ ಪ್ರಕರಣಗಳನ್ನು ಜೋಡಿಸಿ, ಇತಿಹಾಸ ಸಂಶೋಧನದ ವಿಷಯವಾಗಿ, ಈ ದೇಶದಲ್ಲಿ ಇಲ್ಲಿಯವರೆಗೆ ಆಗಿಹೋದ ಪ್ರಯತ್ನಗಳನ್ನು ಸಂಕ್ಷೇಪವಾಗಿ ವರ್ಣಿಸಿ, ಲಿಪಿಗಳ ಮುದ್ರೆಯನ್ನು ತೆಗೆದುಕೊಳ್ಳುವ ರೀತಿಯನ್ನು ಹೇಳಲಾಗಿದೆ.
ಸಾರಾಂಶ, ಈ ಪ್ರಬಂಧವು ಕರ್ನಾಟಕ ಇತಿಹಾಸದೇವಿಯ ಮಂದಿರಕ್ಕೆ ಹೋಗುವ ದಾರಿಯನ್ನು ತೋರಿಸುವ ಕೈಕಂಬವು, ಆ ಮಂದಿರದೊಳಗೆ ಪ್ರವೇಶಿಸತಕ್ಕ ಮಹಾದ್ವಾರವನ್ನು ತೆರೆಯುವ ಕೆಲಸವು. ಮುಂದಿನ ಇತಿಹಾಸ ಸಂಶೋಧಕರದು; ಅದು ನನ್ನ ಯೋಗ್ಯತೆಯದಲ್ಲ. ಆ ಮಹಾದ್ವಾರವು ತೆರೆದು, ಇತಿಹಾಸ ಮಂದಿರಕ್ಕೆ ಪ್ರವೇಶ ದೊರೆಯುವ ಮೊದಲು "ಈ ಇಗೋ, ಇದೇ ಆ ಪವಿತ್ರವಾದ ದೇವಾಲಯವು; ಇದೇ ಇಲ್ಲಿ ಈ ಬಾಗಿಲ ಕಿಂಡಿಯೊಳಗಿಂದ ಆ ದೇವತೆಯ ದರ್ಶನವನ್ನು ಈಗ ತೆಗೆದುಕೊಳ್ಳಿರಿ." ಎಂದು ಬೊಟ್ಟು ಮಾಡಿ ತೋರಿಸುವುದಷ್ಟೇ ನನ್ನ ಕೆಲಸವು.
ಕೆಲಸಕ್ಕೂ ನಾವು ಎಷ್ಟು ಅನರ್ಹರಿದ್ದೆವೆಂಬುದನ್ನು ಪೂರ್ಣವಾಗಿ ಆರಿತಿರುವವು. ಇದಕ್ಕಾಗಿಯೇ, ನಾವು ಇಷ್ಟು ದಿವಸ ಪ್ರಬಂಧವನ್ನು ಬರೆಯಲಿಲ್ಲ. ಆದರೆ, ೪ನೆಯ ಮೇ ೧೯೦೫ ನೆಯ ಇಸವಿಯ ದಿವಸ ಆನೆಗೊಂದಿಯ ಆಕಸ್ಮಿಕ ದರ್ಶನದಿಂದ ನಮ್ಮಲ್ಲಿ ಮಿಂಚಿದ ಸ್ಪುರಣವು ನಮ್ಮನ್ನು ಅಣ್ಣಿಗೇರಿ, ಲಕ್ಕುಂಡಿ, ಗುಡಿಗೇರಿ, ಲಕ್ಷೇಶ್ವರ, ಹಳೆಬೀಡು, ಬೇಲೂರು, ಕಾರ್ಲೆ, ಕಾನ್ಸರಿ, ಬಂಕಾಪುರ, ಬಾದಾಮಿ, ಪಟ್ಟದಕಲ್ಲು, ಐಹೊಳಿ, ವೇಗೂಳ, ಮುಂತಾದ ಐತಿಹಾಸಿಕ ಕ್ಷೇತ್ರಗಳಿಗೆ ಎಳೆದೊಯ್ದಂತೆಯೇ ತರುಣರನ್ನೂ ಎಳೆದೊಯ್ಯಬಹುದೆಂಬ ಆಶೆಯಿಂದ, ನಮ್ಮ ಕೆಲವು ತರುಣ ಮಿತ್ರರ ಇಚ್ಛೆಯ ಮೇರೆಗೆ, ಅಪೂರ್ಣಾವಸ್ಥೆ