ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಕರ್ನಾಟಕ ಗತವೈಭವ
ಕದಂಬರು
ಕದಂಬರ ವಿಷಯವಾಗಿ ಗೊತ್ತಿರುವ ಸಂಗತಿಗಳೇನಂದರೆ- ಇವರ ಮೂಲ ಪುರುಷನು ಮಯೂರಶರ್ಮನು. ಇವನು ಸೊರಬ ತಾಲುಕ ಸ್ಥಾನಗುಂಡೂರ ಅಥವಾ ತಾಳಗುಂದ ಎಂಬಲ್ಲಿಯ ಬ್ರಾಹ್ಮಣನು, ಇವನು ಕಂಚಿಗೆ ವೇದಾಧ್ಯಯನಕ್ಕಾಗಿ ಹೋದಾಗ ಅಲ್ಲಿಯ ಪಲ್ಲವ ಅರಸನಿಂದ ಅವಮಾನಿತನಾದುದರಿಂದ ಕ್ಷತ್ರಿಯ ಧರ್ಮವನ್ನು ಸ್ವೀಕರಿಸಿ ಬನವಾಸಿಯಲ್ಲಿ ಕದಂಬರಾಜ್ಯವನ್ನು ಸ್ಥಾಪಿಸಿದನು. ಈ ಕದಂಬರು ೩ ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಸ್ವತಂತ್ರವಾಗಿ ಆಳಿದರು. ಈ ವಂಶದಲ್ಲಿ ಕಾಕುಸ್ಥವರ್ಮ, ಕೃಷ್ಣವರ್ಮ ಮುಂತಾದ ಅರಸರು ಪ್ರಬಲರಾಗಿದ್ದರು. ಮುಂದೆ ಚಾಲುಕ್ಯರು ೬ನೆಯ ಶತಮಾನದಲ್ಲಿ ಇವರ ಸ್ವಾತಂತ್ರವನ್ನು ಹರಣ ಮಾಡಿದರು. ಮುಂದೆ ಈ ಕದಂಬರು ಅನೇಕ ಶತಮಾನಗಳವರೆಗೆ ಮಾಂಡಲಿಕ ಅರಸರಾಗಿ ಅಳಿದರು.
ಗಂಗ ವಂಶಾವಳಿ*
| ಮಾಧವ-ಕೊಂಗುಣಿವರ್ಮ (೧೦೩) | ||
| ↓ | ||
| ಅವನೀತ (೪೩೦-೪೮೨) | ||
| ↓ | ||
| ದುರವಿನೀತ (೪೮೨-೫೧೭) | ||
| ↓ | ||
| ಶಿವಮಾರ (೬೭೦-೭೧೩) | ||
| ↓ | ||
| ಶ್ರೀ ಪುರುಷ (೭೨೬-೭೭೬) | ||
| ↓ | ||
| ರಾಜಮಲ್ಲ (೮೭೦-೯೦೭) | ||
| ↓ | ||
| ಬೂತುಗ (೯೩೮-೯೫೩) | ||
| ↓ | ||
| ಮಾರಸಿಂಹ (೯೬೧-೯೭೪) | ||
| ↓ | ||
| ರಾಚಮಲ್ಲ (೯೭೪-೯೮೪ |
- *ಈ ವಂಶಾವಳಿಯಲ್ಲಿ ಮುಖ್ಯವಾದ ಹೆಸರುಗಳನ್ನು ಮಾತ್ರವೇ ಕೊಟ್ಟಿರುತ್ತದೆ.