ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತ ನಾಲ್ಕನೇ ಅಧ್ಯಾಯ ಸ್ವರೂಪವಾದಕಾಶಿಯವಿರಹಾಗ್ನಿಯಿಂತಾಪಪಟ್ಟನು, ಇದುಮಹಾಶ್ಚರ? ಪಠ. ಮೇ ರನುಲಲಾಟಸ್ಥಳದಲ್ಲಿ ಇರುವನಯನಾಗ್ನಿಯಿಂ ತಾಪಪಟ್ಟವನಲ್ಲ ರಳಲ್ಲಿ ಧರಿಸಿದ ಕಾಲಕೂಟವಿಷಜ್ವಾಲೆಯಿಂ ಸಂತಾಪಪಟ್ಟವನಲ್ಲ. ವಿಷಜ್ವಾಲೆ ಉಳ್ಳ ಸರ್ವಾಭರಣದಿಂ ಸಂತಾಪಪಟ್ಟವನಲ್ಲ, ತನ್ನ ಸ್ಮರಣೆಯಂಮಾಡಿದ ಮಾ ತ್ರದಲ್ಲಿಯೇ ಮನೋವಾಕ್ಕಾಯ ಕಂಗಳಲ್ಲಿ ೨ ವಿಧ ತಾಪಂಗಳ ಪರಿ ಹರಿಸಿದಂಥಾ ಪರಮೇಶ್ವರನು ಕಾಶಿಯ ವಿಯೋಗದಿಂ ತನಗೆಪುಟ್ಟದ ತಾಪಮ ಪರಿಹರಿಸಿಕೊಂಡವನಲ್ಲಿ, ಆಲಾಟದಲ್ಲಿ ಧರಿಸಿಕೊಂಡಿದ್ದ ಚಂದ್ರನ ಶೀತಕಿರ ಣಗಳಿಂ ಶಿರಸ್ಸಿನಲ್ಲಿ ಧರಿಸಿದ್ದಗಂಗೆಯ ಶೈತ್ಯದಿಂದಲೂ, ಅಭಿಷೇಕವಂಗೈದ ಡಿ ವ್ಯಗಂಧೋದಕದಿಂ ತನಗೆಪುಟ್ಟದ ತಾಪಮು ಪರಿಹರಿಸಿಕೊಂಡವನಲ್ಲ. ಈ ಶಿಯಿಂದ ಬಂದವಾಯುವು ಶರಿರಮಂ ಸೋ೦ಕಲು, ತಾಪಹರಮಾದತೆ ಏನು ಉಪಚಾರದಿಂದಲೂ ಶಾಂತವಾಗದೆ ಪರಮೇಶ್ವರನು ಕಾತಿಯಂಬಿಟ್ಟು ವಿರಹಾ ಗ್ನಿಯಿಂದ ಅತ್ಯಂತಸಂತಾಪ ಪಟ್ಟವನಾಗಿ ಪಾರ್ವತೀದೇವಿಯಂ ಕರೆದು ಇಂತೆಂ ದನು-ಎಲೆದೇವಿ! ನೀನುಇಲ್ಲದಿದ್ದರೆ ತನ್ನಾಂಗಳು ಸುಖದಿಂದಿಹವು,ಅದೆ ತೆಂದರೆ-ಪೂರ್ವದಲ್ಲಿ ದಕ್ಷನಕುಮಾರಿಯಾದ ಸತೀದೇವಿಯರ ವಿಯಾಗದಿಂ ಹುಟ್ಟಿದ ವಿರಹತಾಸ ಒಂದುಪಕಾರದಿಂ ಪರಿಹರವಾಯಿತು, ಈಗಕಾತಿಯಂ ಬಿಟ್ಟ ವಿರಹತಾಪವೂ ನೀನುಸಮಿಾಪದಲ್ಲಿ ರ್ದೂ ಬಿಡದೆಯಿದ್ದಿತು, ಎಲೈ ಕಾತಿಯೇ! ಎನ್ನಸಕಲಾಂಗಕನಿನ್ನ ಸಂಪರ್ಕದಿಂ ಸುಖಶೀತಳವೆಂತಾದೀತು, ಎಲೈ -ಸಕಲಪಾಪಸಂಹಾರಕ ಮಾದ ಕಾಶಿಯೇ! ನಿನ್ನ ನಿಯೋಗದಿಂ ಪುಟ್ಟಿದೆ ಅಗ್ನಿಯು ಚಂದ್ರನಿಂಪಸರುವ ಅಮೃತೋದಕದಿಂದ ಹೆಚ್ಚಿದ ಅಗ್ನಿಯಂತೆ ಹೆ ಚ್ಚು ತಾಯಿದ್ದೀತು, ಪೂರ್ವದಲ್ಲಿ ದಕ್ಷನನಗಳ ವಿರಹಾಗ್ನಿಯು ಹಿಮವಂ ತನ ಮಗಳಾದ ನಿನ್ನ ಅಂಗಸಂಗದಿಂದ ಸುಖವಾಗಿ ಶಾಂತವಾಯಿತು. ಈಗ ಕಾ *ಪಟ್ಟಣವಂ ನೋಡದೆ ಇದ್ದರೆ ಎನ್ನ ಶರೀರ ಹೋದಹೊರತಾಗಿ, ಈತಾಪಂ ಗ್ನಿಯಿಂದ ಕೃಶವಾಗಿ ಶಾಂತವಾಗದು ಎಂದು ಮನಸ್ಸಿನಲ್ಲಿ ಚಿಂತೆಗೊಳುತ್ತಾ ಇರುವ ಪರಮೇಶ್ವರನ ನೋಡಿ ಪಾರ್ವತೀದೇವಿ ಇಂತೆಂದಳು:- ಎಲೈ ಸ್ವಾಮಿ ಸಕಲಲೋಕ ಪಾಲಕನಾದ ನಿಮಗೆ ಸಮಸ್ತವೂ ಹಸ್ತಗತವಾಗಿ ಹುದು ಅಂಥಾ ನಿಮಗೆ ವಿಯೋಗನೆಲ್ಲಿಯದು, ಬ್ರಹ್ಮ, ವಿಷ್ಣುವೂ' m