ಪುಟ:ಚಂದ್ರಮತಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ,

4. ಗುವ ಪ್ರಯೋಜನಗಳನ್ನರಿತು, ಚಂದ್ರಮತಿಗೆ ಗ್ರಹಣಶಕ್ತಿಯುಂಟಾದಕಾಲ ಮೊದಲ್ಗೊಂಡು ಸಣ್ಣ ಸಣ್ಣ ನೀತಿವದ್ಯಗಳನ್ನು ಕಲಿಸತೊಡಗಿದಳು ; ಸುಗುಣ ಗಳನ್ನು ಸ್ತನ್ಯದೊಡನೆಯೇ ಅರೆದು ಕುಡಿಸತೊಡಗಿದಳು. ಆದುದರಿಂದ ಚಂದ್ರಮತಿಯು ತನ್ನ ಆರನೆಯ ವರ್ಷದಲ್ಲಿಯೇ ಒಡನಾಡಿಯರಿಗಿಂತ ವಿವೇಕನತಿಯೂ, ಗುಣವತಿಯೂ ಆದಳು ಮೃದುವಲ್ಲದ ವಾತಾವುದೂ ಅವಳ ಬಾಯಿಂದ ಹೊರಡುತ್ತಿರಲಿಲ್ಲ. ಜನನೀಜನಕರು ಪ್ರೇಮಪೂರ್ವಕ ವಾಗಿ ಆವುದನ್ನು ಕೊಟ್ಟರೆ ಅದನ್ನು ತೆಗೆದುಕೊಂಡು ಸಂತೋಷಪಡು ತ್ರಿವಳಲ್ಲದೆ, ಇಲ್ಲದ ಪದಾರ್ಥಗಳನ್ನ ನೇಕ್ಷಿಸಿ ಅದೇ ಬೇಕೆಂದು ಯಾವಾ ಗಲೂ ಚಲಹಿಡಿಯುತ್ತಿರಲಿಲ್ಲ, ತನೊಡನಾಡುವ ಬಾಲೆಯರನ್ನು ಎ೦ದಾ ದರೂ ಬಯ್ಯುತ್ತಿರಲಿಲ್ಲ, ತನ್ನ ಬಳಿಯಲ್ಲಿರುವ ಹಣ್ಣು ಹಂಪಲುಗಳನ್ನೇ ಆದರೂ ಮೊದಲು ಅವರಿಗೆ ಕೊಟ್ಟು ಉಳಿದುದನ್ನು ತಾನು ತಿನ್ನುತ್ತಿದ್ದು ದಲ್ಲದೆ ಅವರನ್ನು ತನ್ನ ಸೋದರಿಯರಂತೆ ಭಾವಿಸಿ ನಿರಂತರವೂ ಪ್ರೀತಿಸು ತ್ರಿದ್ದಳು ಎಂದಾದರೂ ತಾನು ಪ್ರಮಾದವಶದಿಂದ ಒಂದು ತಪ್ಪನ್ನು ಮಾಡಿ ದವಕ್ಷದಲ್ಲಿ, ಮರುಮಾತಾಡದೆ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡುತ್ತಿದ್ದಳು. ತನ್ನ ತಪ್ಪನ್ನು ಮರೆಮಾಡುವುದಕ್ಕೋಸುಗ ಇಲ್ಲದು ದನ್ನೆಲ್ಲ ಕಲ್ಪಿಸಿ ಬೋ೦ಕುವುದಕ್ಕೆ ಸ್ವಲ್ಪವಾದರೂ ಪ್ರಯತ್ನಿಸುತ್ತಿರಲಿಲ್ಲ. ಒ೦ದಾನೊ೦ದು ದಿವಸ ಉಶೀನರನುಹಾರಾಜನು ವಿದ್ವಾಂಸರ ಮಧ ದಲ್ಲಿ ಕುಳಿತು ವಿದ್ಯಾಬ್ಯಾಸಂಗದಲ್ಲಿ ಕಾಲಹರಣ ಮಾಡುತ್ತಿದ್ದಾಗ ಆತನ ಆಸ್ಥಾನ ವಿದ್ವಾಂಸರಲ್ಲಿ ಅಗ್ರಗಣ್ಯನಾದ ವಿದ್ಯಾನಮುದ್ರನೆಂಬ ಬ್ರಾಹ್ಮಣನು ರಾಜನ ಅಪ್ಪಣೆಯಪ್ರಕಾರವಾಗಿ ಈ ಕೆಳಗೆ ವಿವರಿಸುವ ರೀತಿಯಲ್ಲಿ ವಿದ್ಯಾ ವಿಷಯಕವಾದ ಒಂದು ಉಪನ್ಯಾಸವನ್ನು ಮಾಡಿದನು

  • ಲೋಕದಲ್ಲಿ ಸ್ಕೂಲದೇಹವನ್ನು ಬಳೆಯಿಸುವುದಕ್ಕೆ ಆಹಾರವು ಹೇಗೆ ಆವಶ್ಯಕವೋ ಹಾಗೆಯೇ ಜ್ಞಾನವೆಂಬ ದೇಹವನ್ನು ಬಳೆಯಿಸುವುದಕ್ಕೆ ವಿದ್ಯೆಯೆಂಬ ಆಹಾರವು ಆವಶ್ಯಕವು. ವಿದ್ಯೆಯಿಂದ ವಿನಯವಿವೇಕಾದಿಗ ಳುಂಟಾಗುವುವ : ಅದರಿಂದ ಸಮಸ್ತ ಸದ್ಗುಣಗಳೂ ಉಂಟಾಗುವುವು. ಓದಿರತಕ್ಕವರು ಸಾಧಾರಣವಾಗಿ ತಮ್ಮ ವಿದ್ಯೆಗೆ ತಕ್ಕ ಬುದ್ಧಿಯನ್ನೂ