ಪುಟ:ಚಂದ್ರಶೇಖರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*y ಚಂದ್ರಶೇಖರ. ಆದರೆ ಅವನು ಮನುಷ್ಯರಕ್ತವನ್ನು ಪಾನಮಾಡುವನು. ಯಾವನಾದರೂ ಅವನ ಮನೆಯ ಸ ಇಂದರ್ ಪರಿಪಾಟ್ರಕ್ಕೆ ವಿಮುಗ್ಧನಾಗಿ ಅಲ್ಲಿಗೆ ಹೋದರೆ ಆ ನೂರು ಬಾಹು ಗಳುಳ್ಳ ರಾಕ್ಷಸನು ಅಂತಹವನನ್ನ ಹಿಡಿದು ಅವನ ರಕ್ತವನ್ನು ಪಾನಮಾಡುತಲಿದ್ದ ನೆಂದು ವರ್ಣಿಸಲ್ಪಟ್ಟಿದೆ. ಕೈವಲಿನಿಯು ಯುದ್ಧಕ್ಕೆ ತಾನು ಅಸಮರ್ಥಯೆಂದು ತಿಳಿದುಕೊಂಡು ಯುದ್ಧ ಕ್ಷೇತ್ರವನ್ನು ಬಿಟ್ಟು ಓಡಿಹೋದಳು. ತಾನು ಓಡಿಹೋದ ಸಮಾಚಾರವು ಗೊತ್ತಾ ದರೆ ಪ್ರತಾಪನು ಹುಡುಕಲಾರಂಭಿಸುವನೆಂದು ಅವಳಿಗೆ ಮನಸ್ಸಿನಲ್ಲಿ ದಿಗಿಲಿತ್ತು, ಅದ ಕ್ರೋಸ್ಕರ ಹತ್ತಿರ ಎಲ್ಲಿಯೂ ಇರದೆ ಕೈಲಾದವಟ್ಟಗೂ ದೂರ ಹೊರಟುಹೋದಳು. ಭಾರತವರ್ಷಕ್ಕೆ ಕಟಬಂಧನ ಸ್ವರೂಪವಾದ ಪರ್ವತಗಳ ಶ್ರೇಣಿಯು ಹತ್ತಿರದಲ್ಲಿಯೆ ಕಣ್ಣಿಗೆ ಬಿದ್ದಿತು. ಬೆಟ್ಟಗಳ ಮೇಲೆ ಹತ್ತಿ ಹೋಗುತ್ತಿದ್ದರೆ ಹಿಂದೆ ಹುಡುಕಿಕೊಂಡು ಬರುವವರ ಕಣ್ಣಿಗೆ ಬೀಳಬಹುದೆಂಬ ಭಯದಿಂದ ಹಗಲುಹೊತ್ತು ಬೆಟ್ಟವನ್ನು ಹತ್ತು ವುದಕ್ಕೆ ಪ್ರವೃತ್ತಿಸದೆ ಹಗಲೆಲ್ಲಾ ನನದಲ್ಲಿ ಔತುಕೊಂಡಿದ್ದಳು. ದಿನವೆಲ್ಲಾ ಆಹಾರ ವಿಲ್ಲದೆ ಕಳೆದುಹೋಯಿತು. ಸಾಯಂಕಾಲವಾದಮೇಲೆ ಮೊದಲು ನುಂಗಲು, ಅನಂತರ ೬ಳದಿಂಗಳ ಹುಟ್ಟುತಲಿತ್ತಾದ ಕಾರಣ, ಕೈವಲಿನಿಯು ಆ ಸಂಭವಅಂಧಕಾರ ದಲ್ಲಿ ಪರ್ವತಾರೋಹಣ ಮಾಡಲಾರಂಭಿಸಿದಳು. ಅಂಧಕಾರದಲ್ಲಿ ಕಾಲಿಗೆ ಕಲ್ಲು ತಗಲಿ ಎರಡು ಕಾಲುಗಳ ಹತವಿಕತವಾದವು. ಹಾದಿಯಿಲ್ಲದ ಕಾಡಿನಲ್ಲಿ ಹೋಗುತ್ನ ಮೈಗೆ ಲ್ಲಾ ಮುಳ್ಳುಗಿಡಗಳು ತಂದು ರಕ್ತಮಯವಾಯಿತು ರೈವಲಿನಿಗೆ ಸಾಯಶ್ಚಿತ್ತವು ಆರಂಭವಾಯಿತು. ಇದರಿಂದ ಕೈವಲಿನಿಗೆ ದುಃಖವ್ರಂಟಾಗಲಿಲ್ಲ. ವ.ನಃಪೂರ್ವಕವಾಗಿ ಅವಳು ಈ ಪಯಶ್ಚಿತಕ್ಕೊಳಪಟ್ಟಿದ್ದಳು, ಅವಳು ಮನಃಪೂರ್ವಕವಾಗಿ ಸುಖಮಯವಾದ ಸಂಸಾರವನ್ನು ತ್ಯಾಗಮಾಡಿ ಈ ಭೀಷ್ಮಣವಾದ ಕಂಟಕವುದುವಾದ ಹಿಂಸ್ರಜಂತು ಸರಿ ವೃತವಾದ ಸಾರ್ವತ್ಯಾರಣ್ಯದಲ್ಲಿ ಪ್ರವೇಶ ಮಾಡಿದ್ದಳು. ಇದುವರೆಗೂ ಘೋರತರವಾದ ಸಾಪದಲ್ಲಿ ಮುಣುಗಿದ್ದಳು, ಈಗ ದುಃಖವನ್ನು ಅನುಭವಿಸಿದರೆ ಆ ಪಾಪವು ಸ್ವಲ್ಪ ಮಟ್ಟಿಗಾದರೂ ಉಪಶಮನವಾಗುವುದೇನು ? ಆದುದರಿಂದ ಶೈವಲಿನಿಯು ಉತವಿಕ್ಕತವಾದ ಕಾಲುಗಳಿಂದ ಶೋಣಿತಾಕ್ಯ ಕಳೇಬರ ವುಳ್ಳವಳಾಗಿ, ಕುಧಾರ್ತೆಯಾಗಿ, ಪರ್ವತಾರೋಹಣ ಮಾಡಲಾರಂಭಿಸಿದಳು. ಹಾದಿಯಲ್ಲ. ಲತಾಗುಲ್ಮ ಮತ್ತು ಶಿಲಾರಾತಿದು ವಧೇ ಮಧ್ಯಾಹ್ನದಲ್ಲಿದ ಹಾದಿಯು ಸಿಕ್ಕದು. ಈಗ ಅಂಧಕಾರ. ಅದು ಕಾರಣ ಶೈವಲಿನಿಯು ಸ್ವಲ್ಪದೂರ ಮಾತ್ರ ಹತ್ತಿದಳು. - ಈ ಸಮಯದಲ್ಲಿ ಘೋರತರವಾದ ಮೇಘಾಡಂಬರವು ಉಂಟಾಗುತ ಬಂದಿತು. ರಂಧಶೂನ್ಯವಾದ, ವಿಚ್ಛೇದ ಶೂನ್ಯವಾದ, ಅನಂತವಾಗಿ ವಿಸ್ತ್ರತವಾದ, ಕೃಷ್ಣವರ್ಣ ಪುಳ್ಳವರಣದಿಂದ ಆಕಾಶದ ಮುಖವು ಆವೃತವಾಯಿತು. ಅಂಧಕಾರದಮೇಲೆ ಅಂಧಕಾ