ಪುಟ:ಚಂದ್ರಶೇಖರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಭಾಗ મમ ಸೋತದ ವೇಗದಲ್ಲಿ ಹೊರಟಿತು. ದೊಡ್ಡ ಹಡಗಿನಿಂದ ಬಂದೆರಡು ಬಂದೂಕು ಹಾರಿತು. ಆದರೆ ಕತ್ತಲೆಯಲ್ಲಿ ಯಾರಿಗೂ ಗುರಿಯಿಟ್ಟು ಹೊಡೆದುದಲ್ಲವಾದ ಕಾರಣ ಆ ಶಬ್ದವು ಅಲ್ಲಿಯೆ ಅಣಗಿಹೋಯಿತು. - ಅನಂತರ ದೊಡ್ಡ ಹಡಗಿನಿಂದ ಕೆಲವುಮಂದಿ ತಿಪಾಯಿಗಳು ಬಂದೂಕು ಸಮೇತ ರಾಗಿ ಒಂದು ಸಣ್ಣ ದೋಣಿಯಲ್ಲಿ ಹಿಂದೆ ಓಡಿಬಂದರು. ಪ್ರತಾಪನು ಅವರು ಹತ್ತಿರ ಬರುವವರೆಗೂ ಏನೂಮಾಡಲಿಲ್ಲ, ಅವರು ಹತ್ತಿರಬರುತ್ತಲೆ, ಎರಡು ಬಂದೂಕುಗ ಳನ್ನೂ ಗುರಿಯಿಟ್ಟು ಹಾರಿಸಿದನು, ಹಿಂದೆ ಬರುತಲಿದ್ದವರಲ್ಲಿ ಇಬ್ಬರು ಆಹತರಾದರು. ಮಿಕ್ಕವರು ಭೀತಿಗೊಂಡು ಹಿಂಜರಿದು ಹೊರಟುಹೋದರು. ಕುರುಚು ಕಾಡಿನಲ್ಲಿದ್ದ ರಾಮಚರಣನು, ಪ್ರತಾಪನು ನಿಷ್ಕಂಟಕವಾದುದನ್ನು ಕಂಡು, ದೊಡ್ಡ ಹಡಗಿನವರು ಕುರುಡು ಕಾಡಿನಲ್ಲಿ ಹುಡುಕುವುದಕ್ಕೆ ಬರುತಲಿದ್ದು ದನ್ನೂ ನೋಡಿ ಮೆಲ್ಲಮೆಲ್ಲಗೆ ಸರಿದು ಹೊರಟುಹೋದನು. “Ka, 1 {