ಪುಟ:ಚಂದ್ರಶೇಖರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ, xX$ * ಯಿ ಜzಳ ವಜಾಘಾತ. ಶೀ! ಆ ನಿತಿದುಲ್ಲಿ ಗಂಗಾ ಪಿಚರಿಣಿಯಾದ ತರಣಿಯಲ್ಲಿ ಮಲಗಿದ್ದ ಶೈವಲಿನಿಗೆ ಎಚ್ಚರವಾಯಿತು. ಆ ಸಣ್ಣ ಹಡಗಿನಲ್ಲಿ ಎರಡು ಕೊಠಡಿಗಳು. ಒಂದರಲ್ಲಿ ಕಿಣಿ ಮಾಸ್ಟ್ರನು ಇದ್ದನು, ಮತ್ತೊಂದರಲ್ಲಿ ಶೈವಲಿನಿಯೂ ಅವಳ ದಾನಿಯ ಇದ್ದರ.. ಕೈವಲಿನಿಯು ಇನ್ನೂ ಬೀವಿಯಾಗಿರ ಲಿಲ್ಲ, ದೊಡ್ಡ ಅಂಚಿನ ಕರೆ ತೀರೆಯನ್ನುಟ್ಟು, ಕೈಯಲ್ಲಿ ಬಳೆಗಳನ್ನು ತೊಟ್ಟಿ ದೃಳು, ಕಾಲಿಗೆ ಮೋಜಾ ಇರಲಿಲ್ಲ ; ಬರೆಕಾಲು, ಸಂಗಡ ಪುರಂದರ ಪುರದಿಂದ ಬಂದಿದ್ದ ದಾನಿ ಪಾರ್ವತೀ, ನೈನಲಿನಿಯು ಮಲಗಿದ್ದಾಗ ಸೃಷ್ಟ ವನ್ನು ಕಂಡುದು ದರಲ್ಲಿ, ಆ ಭೀಮಾ ಪುಷ್ಕರಿಣಿಯು ನಾಲ್ಕು ಪಾರ್ಶ್ವಗಳಲ್ಲಿ ಮ ನೀರನ್ನು ಸ್ಪರ್ಶ ಮಾಡಲೆಳಸುವ ವೃಕ್ಷ ಶಾಖೆಗಳಿಂದ ವ್ಯಾಪಿತವಾದ ತೀರವು ಅಂಧಕಾರದ ರೇಖಾಯುಕ್ತ ವಾಗಿ ತಾನು ಅದರಲ್ಲಿ ಪದ್ಮ ಸ್ವರೂಪವಾಗಿ ಮುಖವನ್ನು ನೀರಿನಮೇಲೆ ಇಟ್ಟು ಕೊಂಡಿದ್ದ ಹಾಗೂ, ಸರೋವರದ ಸುyಂತದಲ್ಲಿ ಒಂದು ಸುವರ್ಣ ನಿರ್ಮಿತವಾದ ರಾಜ ಹಂಸವು ಕ್ರೀಡಿಸುತಲಿದ್ದ ಹಾಗೂ, ತೀರದಲ್ಲಿ ಒಂದು ಕ್ಷೇತವರ್ಣದ ಶೂಕರವು ಇದ್ದ ಹಾಗೂ ರಾಜಹಂಸವನ್ನು ಹಿಡಿದುಕೊಳ್ಳಲು ತಾನು ಉತ್ಸುಕವಾದ ಕೂಡಲೆ ರಾಜಹಂಸವು ಮುಖವನ್ನು ತಿರುಗಿಸಿಕೊಂಡು ಹೊರಟುಹೋದಹಾಗೂ, ಕರವು ಶೈವಲಿನೀಪದ್ಮ ವನ್ನು ಹಿಡಿಯುವುದಕ್ಕೆ ತಿರುಗಾಡುತ್ತಿದ್ದ ಹಾಗೂ, ರಾಜಹಂಸದ ಮುಖವನ್ನು ನೋಡು ವುದಕ್ಕೆ ಆಗದೆ ಇದ್ದ ಹಾಗೂ ಆದರೆ ಕೂಕರದ ಮುಖವು ಫಾಸ್ಟ್ರನ ಮುಖದಹಾಗೆ ತೋರುತ್ತಿದ್ದ ಹಾಗೂ, ತಾನು ರಾಜಹಂಸವನ್ನು ಹಿಡಿದುಕೊಳ್ಳಲು ಇಪ್ಪವುಳ್ಳವಳಾಗಿದ್ದ ಹಾಗೂ, ಆದರೆ ಕಾಲುಗಳ ಮೃಣಾಳವಾಗಿ ನೀರಿನಲ್ಲಿ ಕೆಳಗೆ ಬೇರು ಬಿಟ್ಟುಕೊಂಡು ಕದಲಿಸಲಾಗದೆ ಇದ್ದ ಹಾಗೂ, ಇತ್ತಲಾಗಿ ಶೂಕರವು, ನನ್ನ ಹತ್ತಿರ ಬಾ, ನಾನು ಹಂಸ ವನ್ನು ಹಿಡಿದುಕೊಡುವೆನೆಂದು ಹೇಳುತ್ತಿದ್ದ ಹಾಗೂ , ಹೀಗೆಲ್ಲಾ ಕನಸು ಬೀಳುತ್ತಿ ದ್ದಾಗ ಮೊದಲು ಕೇಳಿಸಿದ ಎಂದೂಕಿನ ಶಬ್ದದಿಂದ ಅವಳಿಗೆ ನಿದ್ರಾಭಂಗವಾಯಿತು. ಸಂಪೂರ್ಣವಾಗಿ ನಿದ್ರಾಭಂಗವಾಗಲಿಲ್ಲವಾಗಿ ಮೊದಲು ಏನೂ ಗೊತ್ತಾಗಲಿಲ್ಲ. ಆ ರಾಜ ಹಂಸವೂ ಆ ಶಕರವೂ ಕಣ್ಣುಗಳಿದಿರಿಗೆ ಬಂದುನಿಂತಹಾಗಾಗಿರುವುದು, ಪುನಃ ಬಂದೂಕಿನ ಶಬ್ದವಾಗಿ ಗದ್ದಲವು ಹೆಚ್ಚಿದಮೇಲೆ ಸಂಪೂರ್ಣವಾಗಿ ಎಚ್ಚರವಾಯಿತು.