ಪುಟ:ಚೆನ್ನ ಬಸವೇಶವಿಜಯಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ೧೦] ದಶಾವತಾರಕಾರಣನಿರೂಪಣ ಫಿ ಳ್ಳುತ್ತ, ಭೂಮಿಯ ಮೇಲೆ ಬಿದ್ದು ತಲೆಯೊಡೆದುಕೊಂಡು ಅಳುತ್ತ, ಅ ಯೋತಾಯೆ ! ಪಾಪಾತ್ಮರಾದ ನನ್ನನ್ನು ಕಾಯುವುದಕ್ಕಾಗಿ ಬಂದ ನಿನಗೆ ಈ ವಿಧವಾದ ಮರಣವಾಗಬಹುದೆ ? ಇನ್ನು ನನ್ನ ಗುರು ವು ನಮ್ಮ ಮೇಲೆ ಎಷ್ಟು ಕೋಪವನ್ನಾದರೂ ಮಾಡಿಕೊಳ್ಳಲಿ, ನಾವು ದೇವತೆಗಳನ್ನೆಲ್ಲ ಕೊಂದುಬಿಟ್ಟು ಸಾಯವುದೇ ನಿಜವೆಂದು ನಿರ್ಧರವಾ ಡಿ ಕೋಟಿ ಸಿಡಿಲಿನಂತೆ ಗರ್ಜನೆಮಾಡಿದರು. ಆ ಕೂಗು ಸಮಾಧಿಸ್ಥಿತ ನಾಗಿದ್ದ ಬೃಗುಮುನಿಯ ಕಿವಿಯಲ್ಲಿ ತುಂಬಿ, ಅವನನ್ನು ಬಹಿರ್ಮುಖ ಗೊಳಿಸಿತು. ಅವನು ಮಲಗಿದ್ದವರೆದ್ದಂತೆ ಕಣ್ಣು ಬಿಟ್ಟು, ಮುಂದೆ ಸತ್ತು ಮಲಗಿರುವ ತನ್ನ ಪತ್ನಿಯನ್ನು ನೋಡಿದನು. ಹಾ ! ತರುಣೀ ! ಇದೇನು ? ಎಂದು ಹಂಬಲಿಸಿದನು. ಅಯ್ಯೋ ! ಸತಿಯೇ ! ನಾನೀ ತಪಸ್ಸಿನಲ್ಲಿ ಕುಳಿತು ಬಹು ದಿನದಿಂದ ನಿನ್ನನ್ನಗಲಿದ್ದುದರಿಂದ ನೀನು ಕೋಪಿಸಿಕೊಂಡು ಪ್ರಾಣವನ್ನೇಗಿದೆಯೋ ? ಇಗೋ ನಾನು ಬಂದಿ ದೈನೆ, ನೆಡು, ಏಳು, ಆಲಿಂಗಿಸು, ಎಂದು ಹೇಳುತ್ತ, ತಲೆಯನ್ನೆ ಶಿ, ಮುಂಡಾಡಿ, ಅವಳ ರೂಪಗುಣಶೀಲಾದಿಗಳನ್ನು ನೆನೆನೆನೆದು ಪ್ರಲಾ ನಿಸುತ್ತಿದ್ದನು, (೩ ವಿಯಾಗವು ಎಂಥವರನ್ನೂ ಭ್ರಾಂತಿಗೀಡು ಮಾಡುವುದಲ್ಲವೆ ?) ಮತ್ತೂ “ ನಾನು ಸ್ನಾನವನ್ನು ಮಾಡಿಕೊಂಡು ಬಂ ದಿದ್ದೇನೆ, ಹೋಮಣಿನಾಡು, ದೇವಪೂಜಾಸಾಮಗ್ರಿಗಳು ತಂದಿ ಚು, ಯಶ್ರೇಷ್ಠರು ನಮ್ಮಾಶ್ರನಕ್ಕೆ ಬಂದಿದ್ದಾರೆ, ಅವರಿಗೆ ೧ ರ್ಘ ಪಾದ್ಯಾಚಮನಗಳನ್ನು ನೀಡು, ಇದೇಕೆ ಮಾತಾಡದಿರುವೆ ? ಇದುವರೆಗೆ ನಿನ್ನಿಂದಲೇ ನನ್ನ ತಪಸ್ಸೆಲ್ಲ ನಡೆದು ಬರುತ್ತಿದ್ದಿತು, ಮುಂದೆ ನಾನು 8 ನನನ ತಪಸ್ಸಿನಿಂದ ಮೆಚ್ಚಿಸಿ ಸಂಜೀವಿನೀಮಂತ್ರಸಿದ್ದಿ ಯನ್ನು ಪಡೆ ದು ಬರುವ ಮಗನೊಡನೆ ನಿನ್ನ ಸುದ್ದಿಯನ್ನು ಏನೆಂದು ಹೇಳಲಿ ? ನನ್ನ ಒಡಹುಟ್ಟಿನವರಿಗೆ ನೀನಳಿದ ಸುದ್ದಿಯನ್ನು ಹೇಗೆತಾನೇ ಹೇಳಲಿ ? ಅಯ್ಯೋ ! ಶಿವಶಿವಾ | ೨” ಎಂದು ದುಃಖಿಸುತ್ತಿದ್ದನು. ಅಷ್ಟರಲ್ಲಿ ಕಾಕ ಸರು ಮುಂದೆ ಬಂದು ಅಡ್ಡ ಬಿದ್ದು, ನಿಂತು, ಕೈ ಜೋಡಿಸಿ, ಗುರುವ ನೇ ! ನಿಮ್ಮ ಕೈಮಕ್ಕಳನ್ನು ವಿಷ್ಣು ಮೊದಲಾದ ದೇವತೆಗಳು ಅಟ್ಟಿ ಕೊಂಡು ಬಂದು ಕೊಂದರು: ಎಷ್ಟೋ ಮಂದಿ ದೈತ್ಯರು ಸತ್ತರು; ನಾ