ಪುಟ:ಚೆನ್ನ ಬಸವೇಶವಿಜಯಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೂನ್ ಚಿನ್ನ ಖಸಮೇಳವಿಜಯಂ (Fಾಂಡ ಎ.) ಅಧ್ಯಾಯ ಧವನು ಸೂPಾಸ್ತ್ರವನ್ನು ಬಿಟ್ಟು ಕತ್ತಲೆಯನ್ನು ತೊಲಗಿಸಿದನು. ಮೇಘಸ್ತ್ರವನ್ನು ರಾಕ್ಷಸನು ಪ್ರಯೋಗಿಸಲು, ಹರಿಯು ಮಾರುತಾ ಸ್ಮವನ್ನು ಬಿಟ್ಟು ಮೋಡಗಳನ್ನು ಓಡಿಸಿಬಿಟ್ಟನು. ಮತ್ತೂ ತನ್ನ ಬಾ ಣದಿಂದ ದೈತ್ಥನ ಕೈಬಿಲ್ಲನ್ನೂ ಬಾಣವನ್ನೂ ರಥ ತುರಗ ಸಾರಥಿಗಳ ನ್ಯೂ ಕಡಿದು ಹಾಕಿದನು. ಇದನ್ನು ದೈತ್ಯಾಧಿಪತಿಯು ನೋಡಿ, ಕಡು ಕೋಪವೇರಿ, ಸಿಕ್ಕದಂತೆ ಆರ್ಭಟಿಸಿ, ಭೂಮಿಗಿಳಿದು ಬಂದು ಮಹಾ ರೋಷದಿಂದ ಹರಿಯ ರಥವನ್ನೆತ್ತಿ ಬುಗುರಿಯಂತೆ ತಿರುಗಿಸಿ ಆಕಾಶ ಕೈಸದುಬಿಟ್ಟನು. ಸಕಲ ದೇವಾಸುರರೂ ಇದನ್ನು ನೋಡಿ ಆಗೃಪ ಟ್ಟರು. ಆಗ ವಿಷ್ಣುವು ಭೂಮಿಗಿಳಿದು ಹೊಸದೊಂದು ರಥವನ್ನು ಏರಿದ ನು, ಅದನ್ನೂ ದೈತನು ಮೊದಲಿನಂತೆ ಇಟ್ಟನು. ಹರಿಯು ಮತ್ತೆ ಹೊಸರಥವನ್ನೇರಲು, ತಿರಿಗಿ ರೈತನು ಆಕಾಶಕ್ಕಿಡುತ್ತಿದ್ದನು. ಹೀಗೆ ೨೧ ಬಾರಿ ಆಕಾಶಕ್ಕೆಸೆದನು. ಇದರಿಂದ ಹರಿಗೆ ಅತ್ಯಂತ ಖತಿಯುಂಟಾ ಯಿತು. ರಥವನ್ನು ಬಿಟ್ಟು ಕೈಯಲ್ಲಿ ಕೌಮೋದಕಿಯೆಂಬ ಗದೆಯನ್ನು ಹಿಡಿದು ದೈತ್ಯನ ಮುಂದೆ ನಿಂತು- “ ಇಂತಹ ಯಕ್ಷಿಣಿವಿದ್ಯೆಯನ್ನು ನೀನು ಯುದ್ಧದಲ್ಲಿ ತೋರಿಸದಿದ್ದರೆ ಶೂರರು ಮೆಚ್ಚಿಕೊಳ್ಳುವರೆ ? ಇಗೋ ನೋಡು, ಈ ಗದೆಯು ಮಧುಕೈಟಭ ಮೊದಲಾದ ಅನೇಕ ದೈತ್ಯರನ್ನು ಬಡಿದು ಕೊಂದಿರುವುದು, ಇದರ ರುಚಿಯನ್ನು ನೀನು ಯಾವಾಗಳೂ ಕಂಡಿಲ್ಲ; ಎಡಬಲಕ್ಕೆ ಹಾರಿ ತಪ್ಪಿಸಿಕೊಳ್ಳದೆ ಗದೆಯನ್ನು ಹಿಡಿದು ಇದಿ ರಾಗು, ಇಬ್ಬರ ಶೌವನ್ನೂ ಈ ಮಹಾಸೇನೆಯು ನೋಡಲಿ ?” ಎಂದು ನುಡಿದನು. ಆಗ ದೈತ್ಯನಾಥನೂ ಗದೆಯನ್ನು ಹಿಡಿದು ಮುಂದಾದನು. ಇಬ್ಬರೂ ಸಜ್ಜಾಗಿ ನಿಂತು, ತಮ್ಮ ತಮ್ಮ ಗದೆಗಳನ್ನು ತಿರುಹುತ್ತ ಒಬ್ಬ ರಮೇಲೊಬ್ಬರು ಪ್ರಯೋಗಿಸುತ್ತ ಬಂದರು. ಒಬ್ಬರೇಟನ್ನು ಮತ್ತೊ ಬ್ಬರು ತಪ್ಪಿಸಿಕೊಳ್ಳುತ್ತ, ಆಯವರಿದು ಹೊಡೆಯುತ್ತ, ಚಿಮ್ಮು, ತಿರು ಹುತ್ತ, .ಹಾರಿ ಬಡಿಯುತ್ತ, ಸ್ವರೂ ಅಚ್ಚರಿಗೊಳ್ಳುವಂತೆ ಹೋರಾಡಿ ದರು, ಅದರಲ್ಲೂ ದೈತ್ಯನು ಸೋಲದೆ ಹೋಗಲು, ವಿಷ್ಣುವು ಬೇಸರು ಗೊಂಡು, ಈ ದುಷ್ಮನನ್ನು ಮಲ್ಲಗಾಳಗದಿಂದಲಾದರೂ ಸೋಲಿಸಬೇ ಕೆಂದು ಯೋಚಿಸಿ, ಎಲೆ ಖಳನೆ, ಮಲ್ಲಯುದ್ಧಕ್ಕೆ ನಿಲ್ಲು ಎಂದು ಹೇಳಲು,