ಪುಟ:ಚೆನ್ನ ಬಸವೇಶವಿಜಯಂ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿಜವಿವಾಹಪ್ರಯತ್ನವು ಗಿರಿಜ; Jo{ ತ್ಸವವನ್ನು ನೋಡುವ ಸಂಭ್ರಮದಿಂದ ಗುಂಪುಗುಂಪಾಗಿ ಹೊರಟರು. ಶಿವನು ನಂಗಲಸ್ನಾನಾದಿಗಳನ್ನಾಚರಿಸಿ, ದಿವೃದುಕೂಲವನ್ನುಟ್ಟು, ಕ ಟಕಕೇಯೂರ ಕುಂಡಲಾದಿಗಳನ್ನು ಧರಿಸಿ, ಉತ್ತರೀಯವನ್ನು ಹೊ ದೆದು, ಕಿರೀಟವನ್ನಿಕ್ಕಿ, ಭತತ್ರಿಪುಂಡವನ್ನೂ ರುದ್ರಾಕ್ಷಮಾಲೆಯನ್ನೂ ಧರಿಸಿ, ಮುತ್ತಿನ ಬಾಸಿಂಗವನ್ನು ಕಟ್ಟಿ, ಲಾವಣ್ಣದ ಮಿರುಗೂ, ತಾರುಣ್ಯ ದಬೆಡಗೂ, ಕಾರುಣ್ಯದ ಸೊಬಗೂ, ಇಂದದ ಸಿರಿಯ, ಮಾಧುರ್ ದ ಪರಿಯ, ಗಾಂಭೀರ ಝರಿಯೂ, ಒಟ್ಟುಗೂಡಿ ಸಾಕಾರವಾದಂ ತೆ ಅಲಂಕೃತವಾಗಿ ನಿಂತು, ತನ್ನ ಸಕಲಪರಿವಾರವನ್ನೂ ಸಂತೋಷದಿಂ ದ ನೋಡಿದನು. ಎತಬಲಗಳಲ್ಲಿ ವೇದಗಳು ಶಿವನ ಮಹಿಮೆಯನ್ನು ಉ ದ್ಭವಿಸುತ್ತಿದ್ದುವು. ತಾನು ವ್ಯಸಭವನ್ನೇರಲು, ಹರಿಬ್ರಹ್ಮರು ತಮ್ಮ ತಮ್ಮ ವಾಹನಗಳನ್ನು ಹತ್ತಿ ಹಿಂದೆ ನಿಂತರು ಮುಂದೆ ಕೊಂಬು ತ ಮೂಟೆ ಭೇರಿ ಮೊದಲಾದ ವಾದ್ಯಗಳು ಭೋರ್ಗರೆದುವು. ಛತ್ರಚಾಮ ರದಜಪತಾಕೆಗಳು ದಟ್ಟವಾಗಿ ಕಾಣಿಸಿಕೊಂಡುವು. ಈ ಮಹಾವೈ ಭವದಿಂದ ರ್ಪತಿವನು ಹೊರಟನು ಇತ್ತ ಗಿರಿರಾಜನು ತನ್ನ ಸಕಲ ಬಂ ಧುಗಳೊಡನೆಯ, ಸಸ್ಯಶರಥಪದಾತಿಗಳೊಡನೆಯೂ ವಾದ್ಯ ವೈಭವ ವಿದ, ಕಲಸಕನ್ನಡಿಗಳನ್ನು ಹಿಡಿದ ಮುತ್ತೈದೆಯರೊಡನೆಯ ಬಂದು ಇದಿರೊಂಡು, ಅತೃತಮಹೋತ್ಸವದಿಂದ ರಾಜವೀಥಿಯಲ್ಲಿ ತನ್ನರಮನೆಗೆ ಕರೆದುಕೊಂಡು ಹೋದನು. ಶಿವನಿಗೂ ಹರಿಬ್ರಹ್ಮಾದಿಗಳ ಗೂ ಇತರಪರಿವಾರಕ್ಕೂ ಅವರವರ ಯೋಗ್ಯತಾನುಸಾರದ ಬಿಡಾಂಗಳ ನ್ನು ಮಾಡಿಕೊಟ್ಟು ಇಳಿಸಿ, ಉಪಚರಿಸಿದನು. ಶಿವನು ತನ್ನ ಬಿಡಾರದಲ್ಲಿ ನಾರದ ತುಂಬುರರ ಗಾನಶ್ರವಣದಿಂದಲೂ, ಭೈಂಗಿನಾಟ್ಟದಿಂದಲೂ, ಆ ನಂದಿಸುತ್ತಲಿದ್ದನು. ಇತ್ತ ಗಿರಿರಾಜನಪ್ಪಣೆಯಮೇರೆ ಅನೇಕಸಖಿ ಯರು ಪಾರತಿಯಬಳಿಗೈದಿ, ನಸುನಗುತ್ತ, ತಾಯಿಾ ! ಇಂದಿಗೆ ತಮ್ಮ ಪುಞ್ಞವು ಫಲಿಸಿತು ಎಂದು ಹೇಳುತ್ತ, ಎಣ್ಣೆಯನ್ನೊತ್ತಿ, ಪರಿಮಳದ ಪ ರನ್ನರೆದು, ಅರಿಸಿನವನ್ನು ನೀಡಿ, ಮಜ್ಝನಗೊಳಿಸಿ, ಪಟ್ಟ ವೀತಾಂಬ ರವನ್ನು ಡಿಸಿ, ಜತೆಯನ್ನು ಹೆಣೆದು, ಹಣೆಗೆ ಕಸ್ತೂರಿಯ ತಿಲಕವನ್ನಿಕ್ಕಿ, ರತ್ನದೋಳೆ, ಮುತ್ತಿನ ಬೊಟ್ಟು, ಮೂಗುತಿ, ಕಂಠಹಾರ, ಭುಜಕೀ