ಪುಟ:ಚೆನ್ನ ಬಸವೇಶವಿಜಯಂ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಳಿ #ಳಿ ಚನ್ನಬಸವೇಶವಿಜಯಂ (೪೦ಚ ೩) (ಅಧ್ಯಾಯ ರಿ, ಜಡೆಯ ಸರ, ಕುಚ್ಚು, ಈಗಟೆ, ಬುಗುಡಿ, ಮುರುವು, ಸರಪಣಿ, ಬಳ, ಕಡಗ, ಉಂಗುರ, ಗೆಜ್ಜೆಯದಾಬು, ಒಡ್ಯಾಣ, ಲು೪, ಗೆಜ್ಜೆಪಿ ಕೈ, ಕಾಲುಂಗರ, ಗಗ್ಗರ, ಪಾತಗ, ಕಾಲಸರ ಮೊದಲಾದ ನಾನಾಭರ ಣಗಳನ್ನು ಆಯಾಯ ಸ್ಥಲಗಳಗಿಟ್ಟ, ಹೊವನ್ನು ಮುಡಿಸಿ, ಶೃಂಗರಿಸಿದ ರು, ಸಾಂಗಸುಂದರಿಯಾಗಿ ಸಾಲಂಕೃತಳಾಗಿ ಕುಳಿತಿರುವ ಆ ಮಹಾ ದೇವಿಯು ಶೃಂಗಾರರಸದ ಸರಸ್ಪದಂತೆ ತೋರುತ್ತಿದ್ದಳು ಶಿವನ ವೈರಿ ಯಾದ ಮನ್ಮಥನಿಗೆ ನಾವು ಬಾಣವಾಗಿದ್ದ ಅಪರಾಧವನ್ನು ಮನ್ನಿಸಿ ಕಾ ಪಾಡಬೇಕೆಂದು ಅಶೋಕದ ಚಿಗುರು ಪಾರತಿಯ ವಾದವನ್ನು ಮರೆಹೊ ಕಂತೆ ಆದೇವಿಯ ಕೆಂಪಾದ ಪಾದಗಳು ತೋರುತ್ತಿದ್ದುವು. ಹದಿನೈದು ಕಣ್ಣಳ ಶಿವನು ತನ್ನ ೫ ಅಗ್ನಿನೇತ್ರಗಳನ್ನ ಮುಚ್ಚಿ, ಉಳಿದ ಹತ್ತು ಕ ಣ್ಣಗಳನ್ನು ಮಾರುತಿಯ ಶರೀರದ ಮೇಲೆ ಬಿಡಲು, ಅವು ನುಣುಪಾದ ಆ ದೇಹದಮೇಲೆ ನಿಲ್ಲದೆ ಜಾರಿ ಪಾದಳ ಬೆರಳಿನ ತುದಿಯಲ್ಲಿ ನಿಂತುಕೊಂ ಡುವೋ ಎಂಬಂತೆ ದೇವಿಯ ಪಾದದ ಉಗುರುಗಳು ಒಪ್ಪಿದುವು, ಒಂ ದಾನೆಯು ಕುಂಭಸ್ಥಲದಿಂದ ಎರಡು ಸುಂಡಿಲುಗಳು ಮೂಡಿದುವಂತೆ ಆ ದೇವಿಯ ಕಟಪುರೋಭಾಗ ತೊಡೆಗಳ ಮೆರೆದಿದ್ದುವು. ಅದರ ಸು ತಲೂ ಇರುವ ಒಡ್ವಾಣವು ಕುಂಭಸ್ಟಅಕ್ಕಲಂಕರಿಸಿದ ಅರಳೆಲೆಯ ಸ ರದಂತೆ ಕಾಣುತ್ತಿದ್ದಿತು. ಶಿವನ ಮೋಹದ ನಿಧಿಯನ್ನು ಕಾದುಕೊಂಡಿ ರುವ ಸರ್ಪದಂತೆ ಆದೇವಿಯ ರೋಮರಾಜೆಯೇ ಅದರ ಹುತ್ತಿನಂತೆ ಹೊ ಕುಳೂ ಕಾಣಿಸುತ್ತಿದ್ದುವು. ಅಂತಹ ಕಾವಲಿದ್ದರೂ ಸಿ ವಶದಲ್ಲಿರು ವ ನಿಧಿಯಾದುದರಿಂದ ನಂಬಿಕೆ ಸಾಲದೆ ಮತ್ತೂ ಹೆಚ್ಚಾದ ಕವ೩' ಸ ಬೇಕೆಂದು ಗಂಟೆಯ ಸುರವರನ್ನು ನಿಲ್ಲಿಸಿರುವಂತೆ ಗೆಜ್ಜೆಗಳದಾಬು ತೋ ರುತ್ತಿದ್ದಿತು. ದೇವಿಯ ಸ್ತನದ್ವಯವನ್ನು ನೋಡಿದ ಒಬ್ಬ ಸಖಿಯು ಮ ತೂದಳನ್ನು ಕುರಿತು ಎಂದಿಗೂ ಅರಲದಿರುವ ತಾವರೆಯ ಮೊಗ್ಗು ಎಲ್ಲಾದರೂ ಇರುವುದೆ ? ಎಂದು ಕೇಳಲು, ಆಕೆಯು- ದೇವಿಯ ಮುಖ ವನ್ನೂ ಕಂಠಹಾರವನ್ನೂ ನೋಡಿ, ಚಂದ್ರಮಂಡಲವೂ ನಕ್ಷತ್ರಗಳೂ ಸವಿಾಪದಲ್ಲಿರುವಾಗ ತಾವರೆಯು ಅರುವುದೆಲ್ಲಿ ಬಂದಿತು ? ಎಂದು ಸ ಮಾಧಾನವನ್ನು ಹೇಳಿದಳು ಚಂದ್ರಮಂಡಲದಲ್ಲಿರುವ ಅಮೃತಸಾವ