ಪುಟ:ಚೆನ್ನ ಬಸವೇಶವಿಜಯಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬdL ಚನ್ನಬಸವೇಳವಿಜಯಂ (Fಾಂಕ 4) [ಅದಯ ಜರುಗಿದನಂತರ, ಪುರೋಹಿತನಾದ ಬೃಹಸ್ಪತಿಯು ಶಿವನ ಬಳಿಗೆ ಹೋ ಗಿ, ಮುಹೂರ್ತವು ಸವಿಾಪಿಸಿತು ದಯೆಮಾಡಿಸಬೇಕು ಎಂದು ಬಿನ್ನೈ ಸಲು, ಶಿವನು ಅಲಂಕೃತನಾಗಿ ಬಾಸಿಂಗವನ್ನು ಕಟ್ಟಿ, ವಿಷ್ಣು ಬ್ರಹ್ಮರ ಹಸ್ವಾವಲಂಬನದಿಂದ ರತ್ನಖಚಿತವಾದ ಪಲ್ಲಕ್ಕಿಯನ್ನೇರಿ ಮಹಾ ವೈಭವ ದಿಂದ ಹೊರಟನು. ಹರಿಬ್ರಕ್ಕೇ೦ದ್ರಾದಿಗಳೆಲ್ಲರೂ ಪಲ್ಲಕ್ಕಿಯ ಎಡಬಲ ಗಳಲ್ಲಿ ಪಾದಚಾರಿಗಳಾಗಿ ಬರುತ್ತಿದ್ದರು. ಪಲ್ಲಕ್ಕಿಯ ಮೇಲೆ ಮುತ್ತಿನ ಛತ್ರವನ್ನು ಎತ್ತಿ ಹಿಡಿದಿದ್ದರು. ಮಗ್ಗುಲಲ್ಲಿ ಚಾಮರವನ್ನು ಬೀಸುತ್ತಿ ದ್ದರು, ವೇದಗಳು ಉದ್ಯೋಷಿಸುತ್ತಿದ್ದುವು ಸ್ತುತಿಪಾಠಕರು ಮುಂಗಡೆ ಕೈಯೆತ್ತಿ ಬಿರುದಾವಳಿಗಳನ್ನು ಹೊಗಳುತ್ತಿದ್ದರು, ಕಹಳಾದಿ ವಾದ್ಯಗಳು ಭೋರ್ಗರೆಯುತ್ತಿದ್ದುವು. ಇಂತಹ ಸಂಭ್ರಮದಿಂದ ಹೊರಟ ಶಿವನು ವಿವಾಹದ ಮಂಟಪದ ಬಾಗಿಲಲ್ಲಿ ಪಲ್ಲಕ್ಕಿಯಿಂದಿಳಿದನು ಮುತ್ತೈದೆಯ ರು ಆರತಿಗಳನ್ನು ಬೆಳಗಿದರು. ರತ್ನಕಾಂತಿಯಿಂದ ರುಂಗರುಗಿಸಲೂ, ಪುಸ್ಸ ಪರಿಮಳದಿಂದಲೂ (ಸಧವದಿಂದಲೂ ಘಮಘಮಿಸುತ್ತಲೂ, ಇರುವ ವಿವಾದಮಂಟಪವನ್ನು ಪರಶಿವನು ಪ್ರವೇಶಿಸಿದನು. ಗಿರಿರಾಜ ಮೇನಕಿಯು ವಿಧ್ಯುಕ್ತವಾಗಿ ಪರಶಿವನನ್ನು ಅರ್ಘವಾದ್ಯಾತವನ ಮ ಧುಪರ್ಕಗಳಿಂದರ್ಚಿಸಿದರು. ಬಳಿಕ ಶಿವನು ಮಂಟಪದ ಮಧ್ಯಭಾಗ ರಲ್ಲಿ ಅತ್ಯಂತ ಮನೋಹರವಾಗಿ ನವರತ್ನಗಳಿಂದ ನಿರ್ಮಿಸಿದ್ದ ವಿವಾದವೇ ದಿಕೆಯನ್ನು ಹತ್ತಿದನು, ಜಗತಿಯ ೧ ಪಕ್ಕದಲ್ಲಿ ಶಿವಗಣಂಗಳೂ ಸಪ್ತ ರ್ಮಿಗಳ ಪರಿಬ್ರಹ್ಮಾದಿಗಳೂ ನಿಂತುಕೊಂಡು, ಸಭೆಯೆಲ್ಲವೂ ಸುರ ನರೊ ಗರುಡ ಗಂಧರ್ವ ಕಿನ್ನರ ಕಿಂಪುರುಷ.ದಿಗಳಿಂದ ಕಿಕ್ಕಿರಿದಿದ್ದಿ ತುದಂಭಾವ್ಯಸ್ಪರ ಸ್ತ್ರೀಯರು ನರ್ತನವನ್ನು ಮಾಡುತ್ತಿದ್ದರು, ನಂದಿ ಮಾಕಾಳರೆಂಬ ತಡೀಮರಿಗಳು ಗದ್ದಲವನ್ನು ನಿಲ್ಲಿಸುತ್ತಿದ್ದರು. ಅಮ್ಮ ರಲ್ಲಿ ಅಲಂಕೃತೆಯಾಗಿರುವ ಸರ್ವಮಂಗಳೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಾಹಮಂಟಪಕ್ಕೆ ಕರೆದುಕೊಂಡು ಬಂದರು, ಹೂಗಿಂಡಿಯವಳು, ಎಲೆಕಂಬಳಿಗೆಯವಳು, ಕಾಲಂಜೆಯವಳು, ಚಾಮರದವಳು, ಬೀಸಣಿ ಗೆಯವಳು ಮೊದಲಾದ ೬೪ ವಿಧದ ಉಳಗದ ಗೆಳತಿಯರು ಮನ್ನ ಧನ ಮುದದಾನೆಗಳ ಹಿಂಡಿನಂತೆ ಪಲ್ಲಕ್ಕಿಯೊಡನೆ ಬರುತ್ತಿದ್ದರು. ಅಂದ