ಪುಟ:ಚೆನ್ನ ಬಸವೇಶವಿಜಯಂ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Apr ಚನ್ನ ಬಸವೇಕವಿಜಯಂ (ಕಾಂಡ 4) [ಅಧ್ಯಾಡು ಸುಡುತ್ತ, ಕರಿ ತುರಗ ರಥ ಛತ್ರ ಚಾಮರಗಳನ್ನೆಲ್ಲ ಕರುಕುಗೊಳಿಸಿ, ಭಂಗವನ್ನುಂಟುಮಾಡುತ್ತ ಬಂದಿತು, ಪೂಣ್ಮುಖನು ವರುಣಾಸ್ತ್ರ ವನ್ನು ಬಿಟ್ಟು ಆ ಬೆಂಕಿಯನ್ನಾರಿಸಿ, ದೈತ್ಯವಾಹಿನಿಯನ್ನೆಲ್ಲ ಜಲದಿಂದ ಕೊಚ್ಚಿ ಹೋಗುವಂತೆ ಮಾಡಿದನು. ತಾರಕನು ಕೆರಳ ಬಡಬಾಸ್ತ್ರವನ್ನು ಬಿಟ್ಟು ಆ ನೀರನ್ನು ಇಂಗಿಸಿ, ಮತ್ತೆ ಪರ್ವತಾಸ್ತ್ರವನ್ನು ಪ್ರಯೋಗಿಸಿದನು. ಅದನ್ನು ಗುಹನು ವಜ್ರಾಸ್ತ್ರದಿಂದ ಖಂಡಿಸಲು, ತಾರಕನು ಅಂಧಕಾ ರಾಸ್ತ್ರವನ್ನು ಬಿಟ್ಟು ಕತ್ತಲೆಗವಿಸಿದನು, ಪಡದನನು ಸೂರಾಸ್ತ್ರ ದಿಂದ ಕತ್ತಲೆಯನ್ನು ತೊಲಗಿಸಲು, ದೈತ್ಯನು ಸರ್ಪಾಸ್ತ್ರವನ್ನು ಬಿಟ್ಟ ನು, ಕುಮಾರನು ಗರುಡಾಸ್ತ್ರದಿಂದದನ್ನು ಖಂಡಿಸಿದನು. ಹೀಗೆ ಇಬ್ಬ ರೂ ದಿವ್ಯಾಸ್ತ್ರಗಳಿಂದ ವಿಜ್ಞಾಡಿ ಒಬ್ಬರೂ ಸೋಲುಗೆಲವುಗಳನ್ನು ಪ ಡೆಯದೆ ಸೆಣಸುತ್ತಿರಲು, ತಾರಕನು ಬ್ರಹ್ಮಾಸ್ತ್ರವನ್ನು ತೊಟ್ಟುಬಿಟ್ಟ ನು ಮೃತ್ಯುವಿನ ನಾಲಿಗೆಯಂತೆ ಲೋಕಭಯಂಕರವಾಗಿ ಬರುತ್ತಿರುವ ಆ ಬಾಣವನ್ನು ನೋಡಿ ಕಾರಿಕೇಯನು ರುದ್ರಾಸ್ತ್ರವನ್ನು ಬಿಟ್ಟು ಆ ಬ್ರಹ್ಮಾಸ್ತ್ರವನ್ನು ಎರಡು ತುಂಡಾಗಿ ಕತ್ತರಿಸಿ ಕೆಡಹಿದನು, ಅದ ನ್ನು ಕಂಡು ತಾರಕನ ಕೋಪವು ಮಿತಿಮೀರಿತು. ಘುಡುಘುಡಿಸಿ, ದಿವ್ಯ ಶಕ್ರಾಯುಧವನ್ನು ಕೈಗೆ ತೆಗೆದುಕೊಂಡು ಗರಗರನೆ ತಿರುಗಿಸುತ್ತಿರಲು, ಅದರ ಅಗ್ರಧಾರೆಯಿಂದ ಉದುರುತ್ತಿರುವ ಕಿಡಿಗಳಿಂದ ಲೋಕವೆಲ್ಲ ತಲ್ಲಣಿ ಸುತ್ತಿದ್ದುವು. “ ಎಲೋ ಬಾಲಕನೆ ! ನನ್ನೊಡನೆ ಹಗೆತನವನ್ನು ಕಟ್ಟಿ ಕೊಂಡ ಫಲವನ್ನು ಈಗ ಉಣ್ಣು ” ಎಂದು ತಾರಕನು ನುಡಿದು, ರಭ ಸದಿಂದ ಕುಮಾರನಮೇಲೆ ಪ್ರಯೋಗಿಸಿದನು. ಅದನ್ನು ಸೇನಾನಿಯು ಲೀಲಾಮಾತ್ರದಿಂದ ಕೈಯಲ್ಲಿ ಹಿಡಿದು, ಅದನ್ನೇ ಗರಗರನೆ ತಿರುಗಿಸಿ ತಾರ ಕನಮೇಲೆ ಬಿಟ್ಟನು. ಅದು ರಕ್ಕಸನ ಎದೆಯನ್ನು ನಟ್ಟು ನೀಳತು, ತಾರ ಕನ ದೇಹವು ಗಡಗಡನೆ ನಡುಗಿಹೋಯಿತು. ರಕ್ತವು ಆಕಾಶಮಂಡಲಕ್ಕೆ ಚಿಲ್ಲನೆ ಚಿಮ್ಮಿತು. ತುಟಗಳು ಒಣಗಿದುವು ತಲೆ ತಿರುಗಿ ದೊಪ್ಪನೆ ಭೂ ಮಿಯಮೇಲೆ ಬಿದ್ದನು. ರಕ್ತದಿಂದ ಅಭಿಪಿಕ್ತವಾಗಿ ಬಿದ್ದಿದ್ದ ರಕ್ಕಸನ ದೇಹವು ಕೆಂಗಲ್ಲಿನ ಬೆಟ್ಟವು ಬಿದ್ದಿರುವಂತೆ ಕಾಣುತ್ತಿದ್ದಿತು, ತನ್ನೊಡೆ ಯನಿಗುಂಟಾದ ಈ ಅವಸ್ಥೆಯನ್ನು ಕಂಡು ದೈತ್ಥವಾಹಿನಿಯು ಹಾಹಾ