ಪುಟ:ಚೆನ್ನ ಬಸವೇಶವಿಜಯಂ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Fಳ ಚನ್ನಬಸವೇಳಚೆಡುಂ' (¥ಕಡ9) [ಅಧ್ಯಯ ಮತ್ತೂ ಕೊಬ್ಬಿದ ದೇವೇಂದ್ರನನ್ನು ಈದಿನ ಕತ್ತರಿಸಿಕ್ಕದಿದ್ದರೆ ನಾವು ಬ ದುಕಿ ಫಲವೇನೆಂದು ಶಪಥಮಾಡುತ್ತ, ಬಾಣಗಳನ್ನು ತೊಟ್ಟು ದೇವತೆಗೆ ಇಮೇಲೆ ಸುರಿಸಿದರು, ಮೋಡದ ಒಟ್ಟಿಲಿನ ಮಧ್ಯದಲ್ಲಿ ಸಿಕ್ಕಿದ ಬೆಟ್ಟದಂ ಐರಾವತವು ರಕ್ಕಸರ ಬಾಣದ ಒಡ್ಡಿನ ಮಧ್ಯದಲ್ಲಿ ಸಿಕ್ಕಿತು. ಇಂದ್ರನು ವೀರನಾದವನ್ನು ಮಾಡುತ್ತ ತನ್ನ ಧನುರಿದ್ದಾಕೌಶಲ್ಯವನ್ನೆಲ್ಲ ತೋರಿಸಿ, ರಕ್ಕಸರೀರರ ಬಾಣಗಳನ್ನೂ ತರಿದೊಟ್ಟುತ್ತಿದ್ದನು., ವಜದ ಹತಿಯಿಂದ ರಕೆಗಳನ್ನು ಕಳೆದುಕೊಂಡು ಉರುಳದ ಪರ್ವತಗಳಂತೆ ಇಂದ್ರ ರಾಕ್ಷಸ ರ ಮಧ್ಯದಲ್ಲಿ ಚಾಣದ ತುಂಡುಗಳ ರಾಶಿಯು ಬಿದ ಬೆಳದಿತು, ಇಂ ದ್ರನ ಬಾಣದೇಟುಗಳಿಂದ ಒಂದೊಂದು ಬಾರಿ ಜಂಭ ವೃತ್ರಾಸುರರು ಮೂರ್ಛಗೊಂಡರೆ, ಅವರ ಸೇನೆಯು ಹಾ ! ಎಂದು ಹಮ್ಮೆ ಸುತ್ತಿದ್ದಿ ತು, ಮರಳ ಅವರೆಚ್ಚತ್ತು ಇಂದ್ರನನ್ನು ಘಾತಿಸಿ ಮೈಮರಸಿದಾಗ ದೇವ ತೆಗಳು ಫಳ್ ಎನ್ನುತ್ತಿದ್ದರು ಆಗ ದೈತ್ಯರು ಕಡುನಿಟ್ಟಿದ್ದು, ಇಬ್ಬ ರೂ ಒಂದೇ ಬಾರಿಗೆ ದಿವ್ಯಾಸ್ತ್ರ ಗಳೆರಡನ್ನು ಪ್ರಯೋಗಿಸಲು ಅವುಗಳ ಪೆಟ್ಟಿನಿಂದ ಇಂದ್ರನು ಶಕ್ತಿಯುಳಿದು ಮೂರ್ಛಾಗತನಾಗಿ ಭೂಮಿಗುರುಳಿ ದನು. ಬಳಿಕ ದೇವಸೇನೆಯನ್ನು ರಕ್ಕಸರು ತರಿದಟ್ಟುತ್ತಿದ್ದರು. ಸಾರಥಿ ಯ ಅನುಚರರೂ ಶೈತ್ಯೋಪಚಾರ ಮಾಡಿದುದರಿಂದ ಇಂದ್ರನು ಎಷ್ಣ ತು, ತನಗಾದ ಪರಾಭವದಿಂದ ಮತ್ತಷ್ಟು ರೇಗಿ, ಪ್ರಳಯಕಾಲಾಗ್ನಿ ಯಂತೆ ಭೀಕರನಾಗಿ, ಎರಡು ಕೈಗಳಿಂದಲೂ ಬಾಣಗಳನ್ನು ತೆಗೆದು ಪ್ರ ಯೋಗಿಸುತ್ತಲಿದ್ದನು. ಅವುಗಳು ಭೂವೋಮಗಳನ್ನೊಂದುಮಾಡುವಂತೆ ದಟ್ಟವಾಗಿ ತುಂಬಿದುವು. ರಕ್ಕಸರ ಸೇನೆಯು ಸಿಡಿಲಿನಿಂದ ಉರಿದು ಹೋ। ಗುವ ಹಾವುಗಳಂತೆ ಇಂದ್ರನ ಬಾಹತಿಯಿಂದ ಉರುಳುತ್ತಿದ್ದಿತು. ಬಳಿ ಕ ಇಂದ್ರನು ನಿಶಿತಾಸ್ತ್ರಗಳೆರಡನ್ನು ಸೆಳೆದು ಎರಡು ಕೈಗಳಿಂದಲೂ ಆ ಯಿಬ್ಬರುದೈತ್ಯೇಂದರಮೇಲೆ ಗುರಿಕಟ್ಟಿ ಪ್ರಯೋಗಿಸಿ ಬೊಬ್ಬಿರಿದನು. ಅ ವನ್ನು ಜಂಭವೃತ್ರರು ಪ್ರತಿಬಾಣದಿಂದ ಮಧ್ಯಕ್ಕೆ ಖಂಡಿಸಿದರೂ, ಮತ್ತೆ ಹಿಂದಣ ತುಂಡುಗಳು ಮುಂದಣತುಂಡುಗಳಿಗೆ ಸೇರಿ ರಭಸದಿಂದ ಹೋಗಿ ಇಬ್ಬರ ತಲೆಗಳನ್ನೂ ಕಚ್ಚಿ ನಭೋಮಂಡಲಕ್ಕೆ ತಗೆದುಕೊಂಡುಹೋಗಿ ಸಮುದ್ರದಲ್ಲಿಟ್ಟುವು. ಇವರ ಮರವಿವಾರೆಯಿಂದ ದೇವತೆಗಳು ಸಂಕೋ