ಪುಟ:ಚೆನ್ನ ಬಸವೇಶವಿಜಯಂ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಚನ್ನಬಸವೇಶವಿಜಯಂ (೪೦ಚಿ ಳಿ) [ಅಧ್ಯಾಯ ಸ್ವರೂಪವನ್ನು ನೋಡಿ ಲೀಗುಟ್ಟಿ, ಸುವಣ್ಣರಥವನ್ನೇರಿ ತನ್ನ ಮಹಾಸೇನೆ ಯೊಡನೆ ಶತಮಾಯನಮೇಲೆ ಸಾಗಿದನು.ಆತನು ಬ್ರಹ್ಮನಿಗಿದಿರಾಗಿ (ಎ ಲೋಬೊಮ್ಮನೆ ! ಕುಂಬಾರನು ಮಡಿಕೆಗಳನ್ನು ಹುಟ್ಟಿಸುವಂತೆ ಲೋಕ ವನ್ನೆಲ್ಲ ಸೃಸ್ಮಿಸುವ ಶಕ್ತಿಯು ನಿನ್ನಲ್ಲಿದ್ದ ಮಾತ್ರದಿಂದಲೇ ಲೋಕವನ್ನೆಲ್ಲ ಕೊಲ್ಲುವ ಶಕ್ತಿಯೂ ನಿನಗಿದೀತೆ ? ಯುದ್ಧದ ಪ್ರಸಕ್ತಿಯು ನಿನಗೇಕೆ ? ವೇದಶಾಸ್ತ್ರವನ್ನು ಬಿಚ್ಚಿ ಹೊಟ್ಟೆ ಹೊರೆದುಕೊಂಡು ಇನ್ನೂ ಕೆಲಕಾಲ ಬ ದುಕುಹೋಗು ಎಂದು ಹೀಯಾಳಿಸಿ, ನೂರಾರು ಬಾಣಗಳನ್ನೊಂದೊಂ ದುಬಾರಿಗೆ ಪ್ರಯೋಗಿಸುತ್ತ ಬಂದನು. ಬ್ರಹ್ಮನು ಪ್ರತಿಬಾಣಗಳಿ೦ದವನ್ನೆಲ್ಲ ಖಂಡಿಸಿ, “ ಎಲೋ ಮದಾಂಧದೈತ್ಯನೆ ! ಸೊಳ್ಳೆಗಳನ್ನು ಸವರುವ ಕೌದ್ಧ ವನ್ನು ನನ್ನ ಮುಂದೆ ಬಿಚ್ಚಿ ಗೆದ್ದು ಬದುಕುವೆಯಾ ? ಎಷ್ಟು ದಿನ ಯಾವಶಾ ಲೆಯಲ್ಲಿ ಯಾವಗುರುವಿನಿಂದ ಇವೆರಡು ಮಾತುಗಳಾಡುವುದನ್ನು ಕಲಿತೆ? ) ಎಂದು ಮೂದಲಿಸಿ, ಮಸದ ಬಾಣಗಳು ನೂರನ್ನು ರಕ್ಕಸನಮೇಲೆ ಬಿಟ್ಟ ನು, ಅವನ್ನು ಶತಮಾಯನು ಖಂಡಿಸಿ, ಅನಂತವಾದ ಬಾಣಜಾಲವು ಬ್ರಹ್ಮನಮೇಲೆ ಸುರಿಸಿ, ಭೂಮಂತರಿಕ್ಷಗಳೊಂದೂ ಕಾಣದಂತೆ ಮು ಭೈಬಿಟ್ಟನು. ಬ್ರಹ್ಮನು ಅವನ್ನೆಲ್ಲ ಕೊಚ್ಚಿ, ಅವನೆದೆಗೆ ಬಾಣವನ್ನು ನ ಟ್ಟು ಮೂರ್ಛಗೊಳಿಸುವನು. ಅದಕ್ಕೆ ಸರಿಯಾಗಿ ರಕ್ಕಸನು ಬ್ರಹ್ಮನಿಗೆ ಮುಯ್ದಾಡುವನು, ಓರೋರನ ರಥವನ್ನು ನುಚ್ಚು ಮಾಡುವರು. ಹೊಸಹೊಸತೇರ್ಗಳನ್ನು ಹತ್ತುವರು, ರೋಷದಿಂದ ಗಳಿಗೆ 7:೪ಗೆಗೆ ಸಿ «ನಾದವನ್ನು ಮಾಡುವರು. ಹೀಗೆ ಈರರೂ ಸಮನಾಗಿ ಯುದ್ಧಮಾ ಡುತ್ತಿರುವಲ್ಲಿ, ಮಾಯಾವಿಯಾದ ಶತಮಾಯನು ಅತಿಶಯವಾಗಿ ಕೆರಳ, ತನ್ನ ಮಾಯಾಜಾಲದಿಂದ ಬ್ರಹ್ಮನನ್ನು ಗೆಲ್ಲಬೇಕೆಂದು ಯೋಚಿಸಿ, ಕಪ ಟವಿದ್ಯೆಯ ಶಕ್ತಿಯನ್ನು ಬಿಚ್ಚಿದನು. ಕ್ಷಣಕಾಲದಲ್ಲಿ ರಣಾಂಗಣದಲ್ಲೆಲ್ಲ. ಕಾಳತ್ತಲೆ ಕವಿದಿತು. ಒಬ್ಬರನ್ನೊಬ್ಬರು ಕಾಣದಂತಾಯಿತು. ಹುಲಿ ಕ ರಡಿ ಸಿಕ್ಕ ಶಾರೂಲ ಕೋಣ ತೋಳ ಹಾವು ಚೇಳು ಮೊಸಳೆ ಮಿಾನು ಮೊದಲಾದ ಭೀಕರಪ್ರಾಣಿಗಳು ಅನಂತವಾಗಿ ಹುಟ್ಟಿ ದೇವತೆಗಳ ಮೇಲೆ ಬಿದ್ದು ತಿವಿದು ಪರಚಿ ಬಗಿದು ಕಡಿದು ಹಾನಿಗೊಳಿಸಿದುವು. ಮಳೆ ಮಿಂ ಚು ಸಿಡಿಲು ಗಾಳಿ ಧೂಳಿ ಹೊಗೆ ಬೆಟ್ಟ ಗುಡ್ಡ ಕಲ್ಲು ಗುಂಡುಗಳು ಕೋ