ಪುಟ:ಜ್ವರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಳಿಕ ೩ ಗುಂಜಿಯ ಗುಳಿಗೆಗಳನ್ನು ಕಟ್ಟಿ, ಒಂದೆಂದು ಗುಳಿಗೆಯನ್ನು ಅಲ್ಲದ ಕಸದಂಡನೆ ಕೊಡಬೇಕು, ಮೇಲೆ ತಣ್ಣೀರು ಕುಡಿಸಬೇಕು. ಪಥ್ಯ:ಮಜ್ಜಿಗೀ, ಬದರೀಕಾಖೆಭಜ್ಜಿ ಉಣಬೇಕು; ಅಂದರೆ 4 ವರು ಜನ ಗಳಲ್ಲಿ ಕಫಪಿ ಜ್ವರದ ನಾಶವಾಗುತ್ತದೆ. ಶುದ್ಧ ಪಾರಜ, ಗಂಧಕ, ಬಳೆಗಾರ, ಮೆಣಸು ಇವನ್ನು ಸಮ ಭಾಗ ತಕೊಂಡು ಕಂಡಿಸಿ ಅರೆದು, ಅದಕ್ಕೆ ೬ ದಿನಗಳ ವರೆಗೆ ಎನದ ಪಿತ್ತದ ಭಾವನ ಕಂಡ ಬೇಕು; ಹಾಗು ಒಣಗಿದ ಮೇಲೆ ಡಬ್ಬಿ ತುಂಬಿಟ್ಟು ೨ ಅವರೇ ಕಾಳನ್ನು ಔಷಧವನ್ನು ಖಾರಗೆಣಸಿನ ರಸದಲ್ಲಿ ಕಲ್ಲುಸಕ್ಕರಿ ಕೂಡಿಸಿ ಕೊಟ್ಟರೆ, ಒಂದೇ ಪ್ರಹರದಲ್ಲಿ ಕಫಶ್ಲೇಷ್ಮ ಜ್ವರವು ನಿಲ್ಲುತ್ತದೆ. ಇದಕ್ಕೆ ಪಥ್ಯ:- ಮಜ್ಜಿಗೀ ಅನ್ನ, ಬದನೇಕಾಯಿ ಭಜ್ಜಿ, - ೧ ಸನ್ನಿಪಾತಜ್ವರ. ಕಾರಣ:-ಬಹಳ ಹುಳಿ, ಸಿಗೋಷ್ಣ, ತೀರ್ವೋಚ್ಛ, ಮಧುರ, ಮದ ಸೇವನ, ಬಿಸಿಎ) ಇಲ್ಲವೆ ಬೆಂಕಿ ಕಾಸುವದು, ಒಗರು ಪದಾರ್ಥ ತಿನ್ನುವದು, ಕಾಮ- ಕಧ, ಅತಿರುಕ್ಷ, ಅತಿಜಡ, ಆಕ೦ಠ ಭೋಜನ, ಮಾಂಸಭಕ್ಷಣ, ಶೀತಪದಾರ್ಥ ಸೇವನ, ಶೋಕ, ಭ್ರಮ, ಚಿಂತೆ, ಪಿಶಾಚಿ ಬಾಧೆ ಮತ್ತು ಮಿತಿ ವಿಂರಿದ ಸ್ತ್ರೀಸಂಗ ಈ ಮೊದಲಾದ ಕಾರಣಗಳಿಂದ ಚೈತ್ರ, ವೈಶಾಖ, ಶ್ರಾವಣ, ಭಾದ್ರಪದ, ಆಶ್ರೀಜ, ಕಾರ್ತಿಕ ಮಸಗಳಲ್ಲಿ ಬಹುಶಃ ಸನ್ನಿಪಾತದ ಪ್ರಕ:ಹ ವಾಗುತ್ತದೆ, ಸನ್ನಿಪಾತವುಂಟಾಗಲಿಕ್ಕೆ ಕರ್ಮ-ನಿರಾಕಗಳು, ವಿಶ್ವಾಸಘಾತ ಮಾಡಿದರೆ, ಬಿರಿನುಡಿಗಳನ್ನಾಡಿದರೆ, ಹೆರವರ ಪ್ರಾಣ ತಕೊಂಡರೆ, ನಿರಪರಾಧಿಯನ್ನು ಸೆರೆಮನೆಯಲ್ಲಿಟ್ಟರೆ, ದ್ವೇಷ ಮಾಡಿದರೆ, ಸುಮ್ಮ ಸುಮ್ಮನೆ ಸಿಟ್ಟು ಮಾಡಿದರೆ, ಶಾಸ್ತ್ರ-ವೇದ-ದ್ವಿಜ ಇವುಗಳ ಮೇಲೆ ದೋಷಾ ರೋಹಣ ಮಾಡಿದರೆ, ಹೋಮ, ಯಾಗ, ಕುಂಚ, ಜಲಾಶಯ, ವಿವಾಹ ಬಾವಿ ಮತ್ತು ಅಡವಿಗಳನ್ನು ನಾಶ ಮಾಡಿದರೆ ಮತ್ತೂ ಅನೇಕ ಕಾರಣಗಳಿಂದ ೧೩ ಬಗೆಯ ಸನ್ನಿಪಾತವಾಗುತ್ತದೆ. ಸನ್ನಿಪಾತಜ್ಞತದ ಪರಿಹಾರವಾಗ ಬೇಕಾದರೆ, ಅನೇಕ ಪ್ರಕಾರದ ಧರ್ಮ ಕೃತ್ಯಗಳನ್ನೂ, ಪರೋಪಕಾರದ ಕೆಲಸ ಗಳನ್ನೂ, ತನ್ನ ಮನಸ್ಸಿಗೆ ಸಮಾಧಾನವುಂಟಾಗುವಂಥ ಉತ್ತಮ ಕೆಲಸವನ್ನೂ, ದೇವಭಕ್ತಿಯನ್ನು, ಕೆರೆ, ಭಾವಿ, ಔಷಧಾಲಯಗಳನ್ನೂ, ಮಾರ್ಗದಲ್ಲಿ ಗಿರ