ಪುಟ:ಜ್ವರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--{ ]೨ ಸನ್ನಿಪಾಶ ಜ್ವರಕ್ಕೆ ಮಾತ್ರೆಗಳು:- ಕಸ್ತೂರಿ, ಕೇಶರ, ಲವಂಗ, ಜಾಜಿಕಾಯಿ, ಹಿಪ್ಪಲಿ ಇವನ್ನು ಸಮಭಾಗ ತಕೊ೦ಡು ಖಾಕಾಣಸಿನ ಕಸ "ಲ್ಲಿ ೧೦ ಪ್ರಸರಗಳ ವರೆಗೆ ಅರೆಯಬೇಕು. ನಂತರ ೨ ಗುಂಜಿಯಷ್ಟು ಮಾತ್ರ ಮಾಡಿಟ್ಟು, ಶಕ್ತಿ ಮಾನ, ವಯೋಮಾನಗಳಂತೆ ಅರ್ಧ ಇಲ್ಲವೆ ಇಡೀ ಮಾತ್ರ ಯನ್ನು ಅಲ್ಲದ ರಸದಲ್ಲಿ ತೆತ್ತು ಜೇನುತುಪ್ಪ ಮಿಶ್ರ ಮಾಡಿ ಕೊಡಬೇಕು, ಬಹುಶಃ ಒಂದೇ ಗುಳಿಗೆಯಿಂದಲೇ ಜ್ವರವಿಳಿಯುತ್ತದೆ; ಮತ್ತು ವಾಯು ಕಡಿಮೆ ಯಾಗುತ್ತದೆ. ಸನ್ನಿಪಾತಕ್ಕೆ ಇದು ಶ್ರೇಷ್ಠವಾದ ಮಾತ್ರೆಯಾಗಿದೆ. ೩ ಅಮೃತ ಸಂಜೀವಿನಿ ಸರ್ವಾಂಜನ:- (ನಾನಾ ಪ್ರಕಾರದ ವಾಯು ಗಳಿಗೆ) ಚಾವಾಳ ೧೦ ಭಾಗ, ಮೆಣಸು ೧ ಭಾಗ, ಹಿಪ್ಪಲಿ ೧ ಭಾಗ, ಪಾರಜ ೧ ಭಾಗ ಇವುಗಳನ್ನು ಕುಟ್ಟಿ ನೀರಲ ಹಾಗು ಲಿಂಬೇರಸಗಳಲ್ಲಿ ಬೇರೆ ಬೇರೆ ೭ ದಿವಸಗಳಲ್ಲಿ ಅರೆಯಬೇಕು. ಬಳಿಕ ಗುಳಿಗೆ ಕಟ್ಟಿಟ್ಟು, ಪ್ರಸಂಗದಲ್ಲಿ ಜೇನು ಶುಕ್ರ ಮತ್ತು ಖಾರಗೆಣಸಿನ ರಸ ಇಲ್ಲವೆ ತುಳಸೀ ರಸ, ಇಲ್ಲವೆ ಬಿಸಿ ನೀರಲ್ಲಿ ತಯು ಅ೦ಜನ ಮಾಡತಕ್ಕದ್ದು ,

  • ಬಂಗಾರದ ವರ್ಕಿನ ೧೦ ಪಾನುಗಳು, ಚಿಗರೆಯ ಕಚಾ ಕೋಡು ಅರ್ಧಿ , ಔಡಬೇಕು ೨ ತೊಲಿ, ಶುಂಠಿ ೧ ತೊಲಿ, ನೀರು ೧೨೦ ತಲಿ ಇವುಗಳ ಅಷ್ಟಾಂಶ ಕಷಾಯ ಮಾಡಿ ಸೂಸಿ ಒಂದು ಸೀಸ ತುಂಬಿಡಬೇಕು. ಸೂಸುವದಕ್ಕೆ ಶಂತಿಯ ಝರಡಿಯನ್ನು ಪಯೋಗಿಸಬಹುದು. ಸ್ಮತಿತಪ್ಪಿದ, ಬಡಬಡಿಸುವ, ವಾಯುವಿನಿಂದ ಗುರುವಾರಿಗೆ ಹಾಕುವ ಸನ್ನಿಪಾತದ ರೋಗಿ ಗಳಿಗೆ ಅರ್ಧಪ್ರಹರದ ಅಂತರದಿಂದ ೩ ಸಾರೆ ಕುದಿಸಿದರೆ ಅವೆಲ್ಲ ದುಷ್ಕಗಳು ಲೋಪವಾಗುತ್ತವೆ. ೩ ಸಾರೆ ಕೂಟ್ಟ ಈ ಗುಣದೆರದಿದ್ದರೆ ಒಂದು ಪ್ರಹರದ ನಂತರ ಪುನಃ ಆ ಕಷಾಯ ಕೊಡಬೇಕು. ಈ ಪ್ರಯೋಗವು ಅನುಭವಸಿದ್ಧವಿದೆ. ಬಂಗಾರದ ವರ್ಕಿನ ಬದಲು ಕೆಲವರು ಬಂಗಾರದ ಪಟ್ಟಿ ಇಲ್ಲವೆ ಪತ್ತಳಿಗಳನ್ನು ಹಾಕುತ್ತಿರುತ್ತಾರೆ; ಆದರೆ ವರ್ಕ ಹಾಕುವದೇ ಹೆಚ್ಚು ಗುಣಕಾರಕವಾಗಿದೆ,

- ೫ ಸಂಜ್ಞಾ ಪ್ರಶ್ಧಾಂಜನ:-ಸಮುದ್ರಶೋಕನ ಬೀಜ, ಅಂಟಾಳ ಕಾಯಿ, ಭೂತಕೇಶೀ, ಮಾವಳ್ಳಿ ಬೀಜ, ತುತ್ತೆ ಸಮಭಾಗ ತಕೊಂಡು ಅರೆದು ಅರಿವೆಯಲ್ಲಿ ಸೋಸಿದ ಪುಡಿಯನ್ನು ಮುಗಿನಲ್ಲಿ ಊದಬೇಕು. ಇದರಿಂದ ವಾಯು ವಾದ ಮನುಷ್ಯನು ಸ್ಮತಿಹೊಂದುವನು; ಮತ್ತು ಸನ್ನಿಪಾತ, ಕ್ಷೇತ್ರ, ಶಿರೋವ್ಯಥಾ ಇತ್ಯಾದಿಗಳು ಹೊಗುವವು. ಇದರ ಆಂಜನವನ್ನೂ ಮಾಡ ತಕ್ಕದು.