ಪುಟ:ನನ್ನ ಸಂಸಾರ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ದ೦ ರಿ ಸ o ಕ ತ ಕೂಡಲೇ ಮಗುವಿಗೆ ಸಿದ್ರೆಯೂ ಬಂದಿತು. ಅನಂತರ ಸಹೋದರರಿಬ್ಬರೂ ಭೋಜನವನ್ನು ಮಾಡಿ ಮಲಗಿದರು. ಕೂಡಲೇ ಪರೋಪಕಾರ ಬುದ್ದಿಯು ಇದೇ ರೀತಿ ಕೊನೆಯವರಿಗೂ ಇವರಲ್ಲಿ ಸ್ಥಾಯಿಯಾಗಿ ಇರುವುದೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವಂತೆ ನಿದ್ರೆಯಂ ತ್ವರಿತವಾಗಿ ಬಂದಿತು. ನೋಡಿರಿ ! ಪಾಠಕರೇ ! ವಿಧಿವಿಲಾಸವು ಎಂತಿರು ವುದು ? ಸ್ವಲ್ಪಕಾಲದ ಮುಂಚೆ ಹಿಮದಲ್ಲಿ ಬಿದ್ದು ಮರಣೋನ್ಮುಖವಾ ಗಿದ್ದ ಮಗುವು ಈಗ ಹೇಗೆ ಸುಖವಾಗಿ ನಿದ್ರಿಸುತ್ತಿರುವುದು ? ಕರುಣಾ ಕರ ! ನೀನೇಧನ್ಯ ! ನಿನ್ನಂತಹ ಕರುಣಾಶಾಲಿಗಳು ಜಗತ್ತಿನಲ್ಲಿ ಅತಿ ವಿರಳ ರಲ್ಲವೆ ? >> 0 | S ತ್ರಿಯಲಹು. ಒಟರ ಮರುದಿನ ಬೆಳಗ್ಗೆ ಆ ಮಗುವಿನ ವದಂತಿಯು ಅಂದರೆ ಕರುಣಾ ಕರನ ಶಪಥವೂ ಮಗುವಿಗೆ ರೋಹಿಣಿ ಎಂದು ನಾಮಕರಣ ಮಾಡಿದ್ರೂ ಊರಲ್ಲೆಲ್ಲಾ ವ್ಯಾಪಿಸಿತು, ಮಗುವು ದೊರೆತ ಕಾಡಿನಲ್ಲಿ ಒಂದು ಗುಡಿ ಸಲು ಹಾಕಿಕೊಂಡು ಒಬ್ಬ ಕೃಷಿಕನು ವಾಸಮಾಡುತಲಿದ್ದನು. ಅವನು ಕರುಣಾಕರನ ಹೊಲದ ಕಾವಲುಗಾರನು, ಆ ದಿನ ರಾತ್ರಿ ನಿಧಿತನಾಗಿ ದ್ದಾಗ ಬಾಗಲಿಗೆ ಏನೋ ಬಡಿದಂತೆ ಬಹಳ ಗಟ್ಟಿಯಾದ ಶಬ್ದವಾಯಿತು. ರೈತನು ಅದನ್ನು ಕೇಳಿ ಮೇಲಕ್ಕೆದ್ದನು, ಆ ಸಮಯದಲ್ಲಿ ಅವನ ಕಿವಿಗೆ ಒಂದು ರೋದನಧ್ವನಿಯು ಕೇಳಿಬಂದಿತು, ಆದನ್ನು ಕೇಳಬಹುಭಯ ಪಟ್ಟು ಬಾಗಿಲನ್ನು ತೆಗೆಯದೆ ಭದ್ರವಾಗಿ ಹಾಕಿಕೊಂಡು ನಿದ್ರೆ ಮಾಡ ತೊಡ ಗಿದನು. ಮಾರನೆಯ ದಿನ ಪ್ರಾತಃಕಾಲ ಬಾಗಿಲನ್ನು ತೆಗೆದು ನೋಡಲು ಒಬ್ಬ ಸಿಪಾಯಿಯು ಬಿದ್ದಿದ್ದನು. ಇದನ್ನು ರೈತನು ಕಂಡು ಭಯಪಟ್ಟು ಈ ಸಂಗತಿಯನ್ನು ತನ್ನ ಯಜಮಾನನಾದ ಕರುಣಾಕರನಿಗೆ ತಿಳಿಸಿದನು. ಕರುಣಾಕರನು ಇದನ್ನು ಕೇಳಿ ಆ ಸಿಪಾಯಿಯ ಮೂಲಕ ಈ ಮಗುವಿನ ಎ