ಪುಟ:ನನ್ನ ಸಂಸಾರ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಕಾದಂಬರಿ? ನಂಗ್ರಹ Jut - hh • • • • • • • • • • .

  • * * * * * * * * * * *

• // 1 n 1 • ೧೧ ೧೧೧M +AAAAAAA ಕೊಂಡರೆ ತಮ್ಮ ಕನೆಯನ್ನು ತಂದುಕೊಳ್ಳುವೆನೆಂಬುದೇ ಮೊದಲಾದ ವಾಗ್ದಾನ ದಿಂದ ದುದ್ರನಾದ ಕನ್ಯಾ -ತನನ್ನು ಹೊಡೆಯುವುದೂ, ಈ ಮೂಲಕ ಸುಯಾದವರ ರಿಲ್ಲದೆ ಹೋಗಲ, ಕುರೂಪಿಯೋ ವೃದ್ದನೋ ಆದ ಆವನಾದರೊಬ್ಬನಿಗೆ ಕನ್ಯಾದಾ ನಮಾಡುವುದೂ ವಿಶೇಷ ಪ್ರಚಾರವಾಗಿ ಹೋಗಿದೆ. ಪಾತಕಬಂಧೋ ! ಇದೇಕಾರಣ ದಿಂದಲೇ ಅಲ್ಲನೆ, ಸ್ನೇಹಲತೆಯು ತನ್ನ ಪ್ರಾಣಬಲಿಯನ್ನಿತ್ತು ಲೋಕದಲ್ಲಿ ಯಶಃ ಕಾಯದಿಂದ ವಿರಾಜಿತಳಾಗಿರುವಳು. ಇಂತು ಈಗಣಕಾಲದಲ್ಲಿ ಎಷ್ಟೋ ಕನ್ಯಾಪಿತರರನ್ನು ಸುಲಿದು ಅನೇಕ ಮಹ ನೀಯರು ದೊಡ್ಡ ಮನುಷ್ಯರಾಗಿರುವರು. ವಿವಾದಾಂತವನ್ನು ವಿರಕ್ತರಾದ ಕರುಣಾಕರ, ದಯಾಕರರು ತಮ್ಮ ಜನಕನೆಡೆಗೈದಿ ನಮಸ್ಕರಿಸಿ ವಿನಯಪೂರ್ವಕವಾಗಿ ಇಂತು ವಿಞ್ಞಾಪಿಸಿಕೊಂಡರು. ಲೋಕದಲ್ಲಿ ಪರೋಪಕಾರ ಶ್ವಾ ಫ್ಯವಾದ ಗುಣವೆಂದೂ ಅದನ್ನನುವರ್ತಿಸಿ ತಾವು ಆಮರಣಾಂತವಾಗಿ ಪರೋಪಕಾರ ನಿರತರಾಗಿಯೇ ಇದ್ದು ಈ ಕಳೇಬರವನ್ನು ತ್ಯಜಿಸ ಬೇಕೆಂದೂ ಧೃಢಸಂಕಲ್ಪರಾಗಿರುವೆವ, ಪ್ರಕೃತದಲ್ಲಿ ತಾವೇನೋ ನಮಗೆ ವಿವಾಹ ಮಾಡಲುದ್ಯುಕ್ತರಾಗಿರುವಿ, ದಯವಿಟ್ಟು ಅದನ್ನು ನನ್ನಿ ಸಬೇಕು; ಎಂದ ಮಕ್ಕಳ ನುಡಿಗಳನ್ನಾ ಲೈಸಿ ಸಚ್ಚಿದಾನಂದನು ಅಪ್ಪಾ ಮಕ್ಕಳಾ ! ವಿವಾಹಿತರಾದರೆ ನಿಮಗೆ ಆಗತಕ್ಕೆ ತೊಂದರೆಗಳೇನು ? ಎಂದು ಕೇಳಿದನು. ಮಕ್ಕಳು -ಅನೇಕವಿವೆ, ಅವುಗಳನ್ನೆಲ್ಲಾ ಸನ್ನಿಧಿಯಲ್ಲಿ ವಿಜ್ಞಾಪಿಸಲು ಭೀತ ರಾಗಿರುವೆವು. ತಂದೆ-ಚಿಂತೆಯಿಲ್ಲ, ನಿರ್ಭಯರಾಗಿ ಹೇಳಬಹುದು. ಮಕ್ಕಳು-ಅಸ್ಪಿ, ಮಾಂಸ, ಚರ್ಮ, ಇವೇ ಕೋಟೆಯಾಗಿಯ; ರಕ್ತ, ಕೀವು, ಇವುಗಳೇ ಕಂದಕವಾಗಿಯೂ ಇರುವ ಈ ಅಸಹ್ಯಕರವಾದ ಶರೀರಸೌಖ್ಯ ಕ್ರೋಸ್ಕರ ನಾವು ವಿವಾಹ ಮಾಡಿಕೊಳ್ಳಬೇಕೆ ? ತಂದೆ-ಇದು ಎಲ್ಲರಿಗೂ ತಿಳಿದಿರತಕ್ಕ ವಿಷಯವೆ ಎಲ್ಲರೂ ನಿಮ್ಮಂತೆಯೇ * ಅಭಿಪ್ರಾಯಪಡುವರೆ ? ಮಕ್ಕಳು-ಲೋಕದಲ್ಲಿರುವ ಪಟ್ಟಣಗಳ ಕೋಟೆಗಳಿಗೆಲ್ಲಾ ಸಾಧಾರಣ ವಾಗಿ ನಾಲ್ಕು ದಿಕ್ಕುಗಳಲ್ಲೂ ನಾಲ್ಕ ಬಾಗಿಲುಗಳಿರುವುವು. ಈ ಶರೀರವೆಂಬವೆಂಬ ಕೋಟೆ ಗಾದರೋ ಒಂಭತ್ತು ದ್ವಾರವಿರುವುದು, ಅಸಹ್ಯಕರವಾದ ಇಂತಹ ದ್ವಾರಗಳನ್ನುಳ್ಳ' ಈ ಶುರಸುಖಕ್ಕೋಸ್ಕರ ನಿವಾಹಿತರಾಗಬಹುದೆ ?