ಪುಟ:ನನ್ನ ಸಂಸಾರ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಹಿಣಿ

                                                                                                     ಕ -ಇವು ಸ್ತ್ರೀಯರಾದ ನಮ್ಮಿಂದ ಸಾಧ್ಯವೆ?

ಸವಾರ-ಪರೋಪಕಾರ ಮಾಡುವುದಕ್ಕೆ ಸ್ತ್ರೀಯರಾದರೇನು ? ಪುರುಷದರೇನು ? ಕ- ಇರಲಿ, ವಿಪತ್ಕಾಲದಲ್ಲಿ ನೀನು ನಿನ್ನ ಬಂಧುಗಳನ್ನೂ, ಮಿತ್ರರನ ಇಷ್ಟರನ್ನೂ, ಆಪ್ತರನ್ನೂ ಬಿಟ್ಟು ಇಲ್ಲಿಗೆ ಏತಕ್ಕೆ ಬಂದೆ ? ಸವಾರ- ಪರೋಪಕಾರಸರಾಯಣನಾದ ಕರುಣಾಕರನ ಆಜ್ಞೆಯಂತೆ ನಾ ಬಂದಿರುವೆನೇ ವಿನಹ ಮತ್ತೆ ಬೇರೆಯಲ್ಲ. ಕ-ಹಾಗಿದ್ದರೆ ಕರುಣಾಕರ, ದಯಾಕರರು ಅಲ್ಲಿ ಏನುಮಾಡುತಲಿರುವ ಸವಾರ-ಸುವರ್ಣಪುರದವರಿಗೂ, ಅವಂತಿಪುರದವರಿಗೂ ನಡೆಯುತಲಿಯುದ್ಧದಲ್ಲಿ ಘಾಯಪಟ್ಟ ಸೈನಿಕರನ್ನು ವೈದ್ಯಶಾಲೆಗೆ ಸಾಗಿಸಿ ಅಲ್ಲಿ ಉಪಚುವುದೂ, ಮರಣೊನ್ಮುಬರಾಗಿರುವವರು ತಮ್ಮ ಪುತ್ರ ಮಿತ್ರಕಳತ್ರಾದಿಗಳಿಗೆ ಅಂತ್ಯಲದಲ್ಲಿ ಹೇಳುವ ಮಾತುಗಳನ್ನು ಬರೆದುಕೊಳ್ಳುವುದೂ ಇದೆ ಮೊದಲಾದ ಕಾಂಗಳಲ್ಲಿ ಸ್ವಲ್ಪವೂ ಬೇಸರ ಪಡುವವರು. ಕ- ಇಷ್ಟುದಿನಗಳೂ ಇಲ್ಲದ ಯುದ್ದಕ್ಕೆ ಈಗ ಕಾರಣವೇನು ? ಸವಾರ --ಸುವರ್ಣಪುರದವರಿಗೂ, ಅವಂತಿ ಪುರದವರಿಗೂ ಬಹುದಿನಗಳಿಂದ ದ್ವೇಷವಿದ್ದಿತು. ಇದಕ್ಕಾಗಿ ಅವಂತಿಪುರದವರು ಸುವರ್ಣಪುರದವರನ್ನು ಜಯಿಸಿ ಕೆಂದು ಅನೇಕಾವರ್ತಿ ಪ್ರಯತ್ನ ಪಟ್ಟಾಗ್ಗು ಉಪಯೋಗವಾಗಲಿಲ್ಲ. ಕ-ಹಾಗಾದರೆ ಈಗ ಜಯಿಸಿದವರು ಅವಂತಿಪ್ರರದವರೇ ? ಸವಾರ-ಸಂದೇಹವೇನು ? ಜಯ ಲಕ್ಷ್ಮಿಯು ಐಶ್ವರ್ಯಲಕ್ಷ್ಮಿಯು ಚಪಲೆಯರು.ಈ ಹೊತ್ತ ಇದ್ದಕಡೆ ನಾತಿ ಇರುವದಿಲ್ಲ.ನಾಳೆ ಇದ್ದ ಕಡೆ ನಾಡಿ ಇರುವುದಿಲ್ಲ. ಆದರೆ ನಿರ್ಭಾಗ್ಯಲಕ್ಷ್ಮಿಯು ಒಂದಾವರ್ತಿ ಬಂದರೆ ತೊಲಗಲು ಒ ಕಾಲಬೇಕು, ಮತ್ತು ತೊಲಗಿಸಲು ಬಹು ಪ್ರಯತ್ನ ಬೇಕು. ಅದರಂತೆಯೇ ಅವಂತಿಪುರದವರೂ ಬಹು ಪ್ರಯತ್ನ ಮಾಡಿ ಕೊನೆಗೆ ಜಯಲಕ್ಷ್ಮಿಯನ್ನು ಹೊಂದಿದರು. ಕ- ಇನ್ನು ಮುಂದೆ ಸುವರ್ಣಪುರದಸರಿಗೂ, ಪ್ರಜೆಗಳಿಗೂ ಏನುಗತಿ ? ಸವಾರ - ಯುದ್ಧದಲ್ಲಿ ಪ್ರತಿಭಟಿಸಿ ನಿಂತವರಲ್ಲ ನೇಕರು ಯಮಪುರವನ ಕೆಲವರು ಆರಾಗಾರವನ್ನೂ ಸೇರಿದರು.