ಈ ಪುಟವನ್ನು ಪ್ರಕಟಿಸಲಾಗಿದೆ
ಕಂ|| ಗುರುವೇ ಬೊಮ್ಮಂಗುರುವೇ|
ವರವಿಷ್ಟುವೆ ನಿಪ್ಪ ನಾಗುರುವುಮಾಪತಿಯೈ ||
ಗುರುವೇ ಸಾಕ್ಷಾದಜನೈ| ಪಿರಿದಾಗುರುಚರಣ ಕೇಗಳಾನತನಪ್ಪೆಂ||೧||
ಮೆರೆವುದೊ ಮೈಸೂರ಼್ನಾಡೋಳ್ ವರಶಿವಗಂಗಾಭಿಧಾನ ಯಾತ್ರಾಸ್ಥಲಮೇಂ ||
ಕರೆವರ್ ದಕ್ಷಿಣಕಾಶೀ|
ಪುರಮೆಂದವನೀಧ್ರಮಂಕಕುದ್ಗಿರಿಯೆಂಬರ್||೨||
ಇದರೆಡೆಯೊಳ್ಪಾವನ ಮೆನ|
ಲದುವೆ ಪುರಂ ತ್ಯಾಮಗೊಂಡ್ಲ ವೆಂಬಾಸೆಸರಿಂ ||
ಪದದೇಂ ಮರೆಗುವೊ ಸುಜನಾ।
ಸ್ಪದಮಾಗಿರ್ಪುದು ಸಮಸ್ತವಸುಸಂಚಯದಿಂ||೩||
ವ||ಆಪುರದೊಳ್
ಶ್ರೀಕಂಠೇಶ್ವರ ಭಕುತಂ |
ಶ್ರೀಕಂಠಾಹ್ವಯ ಮಹೀಸುರಂ ಛಂದೋಗಂ ||
ಶ್ರೀಕರ ವಾಸಿಷ್ಠಾನ್ವಯ |
ನಾಕರುಣಾಕರನದೆಂತು ಮೆರೆದನೊಜಸದಿಂ||೪||
ಪಿರಿದುಂ ವ್ರತನಿಯಮದೊಳಂ|
ಪರಮೌದಾರ್ಯಂಗಳೊಳಗೆ ಪಾಸಟಿಯಿಲ್ಲಂ||
ನೆರೆಮೆರೆವಾತನ ತನಯಂ |
ವರನಂಜುಂಡಯ್ಯ ನೆಂಬ ಭೂಸುರನೆಸೆವಂ ||೫||
ವರನಂಜುಂಡಯ್ಯಸುತಂ।
ವರಗುರುಚರಣಾರವಿಂದಮಧುರೋಲಂಬಂ ||
ಬರೆದಂ ವೇಂಕಟಸುಬ್ಬಂ|
ವರವಿಘ್ನೇಶ್ವರ ಚರಿತ್ರಮಂ ಷಟ್ಟದಿಯೊಳ್ ||೬||