ಪುಟ:ನನ್ನ ಸಂಸಾರ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ

           ಪೊಡವಿಯಲ್ಲಿ ಮಹೇಶನೆಂಬುವ| ಪೊಡವಿಪಾಲಕನಾಗಿ ಲೋಕದೆ|
       ಪಡೆದು ಜಸವಂತನ್ನ ಮನೆಯೊಳ್ಸುಖದೆ ನೆಲಸಿರಲು                 || ೧೫ ||
      ಗುರುವುಸುರಪುರ ದತ್ತಣಿಂದಲಿ| ಬರಲುಕಂಡನು ಬಳಿಕ ವಿಧಿಯಿಂ। 
           ಗುರುವನರ್ಚಿಸಲವನು ನಲಿಯುತ ನೃಪನಿಗಳಿದನು||
        ನರಪನಿನಗೆಣೆವರ್ಷದೊರೆಗಳ್ | ತಿರೆಯೊಳೊಲ್ವರು ಮಿಲ್ಲ ಸಗ್ಗದೆ | 
             ಮೆರೆಗು ನಿನ್ನಯಜಸವು ನೀಂಸುರವಂದ್ಯನಾಗಿರುವೆ             || ೧೬ ||  
            ಅರಸಕೇಳೆಂದೊರೆಯೆ ಜೀವನು | ನರಪನಾಲಿಸಿ ಗುರುವೆನಿನ್ನ ಯ| 
            ಹರಿಕಸತ್ಯವಿದೆಂದಿಗಕ್ಕು ಮೊ ಪೇಳುಗೀಷ್ಪತಿಯೆ ||
        ದೊರೆಯನುಡಿಯನು ಕೇಳ್ದು ಜೀವನು!ಕರಿಯಜನುಮವ ಪಡೆದು ನೀನವ|
       ತರಿಸಲಂದಿನ ಕಾಲಕಂನಿಜ ಮಕ್ಕು ಮಾನುಡಿಯು                    || ೧೭ || 
      ಸ್ಮರನವೈರಿಯು ನಿನಗೆ ಮುಕ್ತಿಯನಿರದೆ ಕೊಡುವನು ಕೇಳೆನುತೊರೆದು| 
                ಸುರಪುರೋಹಿತನಮರನಗರಿಗೆ ತೆರಳೆಬಳಿಕಿ||
     ಧರಣಿಪಾಲಕ ನಾಡನಾಳು | ತ್ತಿರೆ ಕೃಪಾನ್ವಿತನಾಗಿ ಮಾರ್ಗದೆ | 
       ಪೊರಮಡುತ್ತಿರಲೊಮ್ಮೆ ನಾರದಮುನಿಯು ನೋಡಿದನು               || ೧೮ ||   
         ನಿರುಕಿಸುತ್ತಂ ಗಣನೆಮಾಡದೆ| ತೆರಳೆ ನರಪನು ಮುನಿಯು ಕೋಪಿಸಿ|
        ದೊರೆಯೆಗರ್ವದೆ ನಡದೆಯದರಿಂ ನೀನು ಕರಿಯಾಗು|| 
   ಮರಳಿ ಜನ್ಮಾಂತರದೊಳುದಿಸುವೆ| ವರಗಜಾಸುರನೆಂದು ಮೆರೆಯುವೆ|
              ಭರದೊಳಾಗಲೆ ಶಿವನಿವಾಸಸ್ಥಾನ ಮಹುದೆಂದು              || ೧೯ || 
     ಮುನಿಯುಶಾಪವ ನಿತ್ತು ನಡೆಯ | ಲ್ಕನಿತರೊಳಗೆ ಮಹೇಶರಾಜನು |
      ನೆನೆದು ಜೀವನ (1) ದೇವಮುನಿಯಾ ನುಡಿಗೆಬೆರಗಾದ ||
     ದಿನವು ಕಳೆಯಲು ಬಳಿಕ ಮರಣವ| ಜನಪನೊಂದಿಯ ಬನದಬಳಿಯೊಳ್ | 
       ಜನುಮವಾಂತನು ಪಿಡಿಯ (2)ಬಸಿರೊಳು ಕಂದಕೇಳೆಂದ              || ೨೦ || 
  ಕರಿಯರೂಪವತಾಳು ಮೊಗದೊಳು| ಧರಿಸಿ ಮಾನುಷರೂಪ ಮುಳಿದೆಡೆ | 
    ಸುರನರೋರಗರಲ್ಲಿ ತನಗೆಣೆಯಿಲ್ಲ ಮೆರನೆಮೆರೆದು || 
    ತಿರುಗುತೊರ್ಮಯೆನತ್ತು ಗುಡಿಯನು ಮುರಿದನರಿದುಂನೆನೆಯುತಿರ್ದನು|
ಗುರುವ ಮಾತನು ಮನ್ನ ನಿಂತುಂನಾಗದೈತ್ಯ                               || ೨೧ || 
                         (1) ಬೃಹಸ್ಪತಿ (2) ಹೆಣ್ಣಾನೆ