ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಪಂಚತಂತ್ರ ಕಥೆಗಳು. ಸುವುದಕ್ಕಿಂತ ಸಾಯುವುದುಮೇಲು. ಒಬ್ಬನಿಂದ ಅನೇಕರು ಜೀವಿ ಸುವುದಿಲ್ಲದಿದ್ದರೆ ಅವನ ಜನ್ಮವು ಏತಕ್ಕೆ? ಮೂಗಿನಿಂದ ಚುಚ್ಚಿ ಕೊಂಡು ತಿನ್ನುವ ಕಾಗೆ ತನ್ನ ಹೊಟ್ಟೆಯ ತುಂಬಿಕೊಳ್ಳುವುದಿಲ್ಲವೆ ? ಇದೂ ಅಲ್ಲದೆ ಸ್ವಲ್ಪ ಮಿದುಡುಳ್ಳ ಕಠಿಣವಾದ ಮೂಳೆ ಸಿಕ್ಕಿದರೂ ನಾಯಿ ಸಂತೋಪಿಸುತ್ತದೆ. ಅದರಿಂದ ಅದರ ಹಸಿವುಕೂಡ ತೀರುವುದಿಲ್ಲ. ಸಿಂಹವು ತನ್ನ ಹತ್ತಿರಕ್ಕೆ ಅಲ್ಪಮೃಗ ಬಂದರೂ ಅದನ್ನು ಬಿಟ್ಟು ಬಿಟ್ಟು ಮದಿ ನಿದ ಆನೆಯನ್ನು ಕೊಂದು ಅದರೆ ಕುಂಭಸ್ಥಲದಲ್ಲಿಯ ವಿದುತನ್ನು ಭಕ್ತಿ ಸಲು ಯತ್ನಿಸುತ್ತದೆ. ಹೀನರೂ ಅಧಿಕರೂ ಆದ ಸಕಲಮನುಷ್ಯರೂ ತಮ್ಮ ತಮ್ಮ ಬಲಾನುಸಾರವಾಗಿ ಕೆಲಸಗಳ ಮಾಡಲಪೇಕ್ಷಿಸುತ್ತಾರೆ. ಹಾಗೆ ನೀನು ನಿನ್ನ ಬಲಕ್ಕೆ ತಕ್ಕಷ್ಟು ಮಾಡ ನೆನಸಿದೆ, ಮೇಲಾಗಿ ನಾಯಿ ತನಗೆ ಆಹಾರ ಕೊಡುವವನ ಬಳಿಯಲ್ಲಿ ಬಾಲವನ್ನು ನುಲಿದು ಕೊಳ್ಳುತ್ತಾ ಕಾಲುಗಳನ್ನು ನೆಲಕ್ಕೆ ಚಾಚಿಕೊಂಡು ಭೂಮಿಯ ಮೇಲೆ ಬಿದ್ದು ಹೊಟ್ಟೆ ಬಾಯಿ ತೋರಿಸುವುದು. ಹೀಗೆ ಏನೇನು ಮಾಡಿದರೂ ನಾಯಿಗೆ ಒಂದು ತುತ್ತು ಅನ್ನ ವೇ ಹೊರತು ಹೊಟ್ಟೆ ತುಂಬ ಇಕ್ಕರು. ಆನೆ ಬಹುಧೈರ್ಯದಿಂದ ನೋಡುತ್ತಿರುವುದು ಒಳ್ಳೆಯ ಮಾತುಗ ಳನ್ನು ತುಂಬ ಹೇಳಿದ ಹೊರತು ಆಹಾರವನ್ನು ತೆಗೆದುಕೊಳ್ಳದು. ವಕ್ಕೆ ಬೇಕಾದಷ್ಟು ಆಹಾರ ಕೊಡುವರು. ಹೀನನಾದವನು ಎಷ್ಟು ದೀನನಾಗಿ ಕೇಳಿಕೊಂಡರೂ ಅವನಿಗೆ ಯಾರೂ ಕೊಡರು; ಒಂದುವೇಳ ಕೊಟ್ಟರೂ ಸ್ವಲ್ಪವೇ ಕೊಡುವರು. ಅಧಿಕನಿಗಾದರೆ ಅವನು ಕೇಳದಿದ್ದರೂ ಅರಸರು ಅವನ ಆಸೆ ತೀರುವ ಹಾಗೆ ಕೊಡುವರು. ಘನವಾದ ನಿದ್ದೆಯಿಂ ದಲೂ ಪರಾಕ್ರಮದಿಂದಲೂ ಉಪಾಯದಿಂದಲೂ ಅರಸರು ನೋಡಿ ಮೆಚ್ಚು. ವಂತೆ ಬದುಕುವುದೇ ಬದುಕು; ಇದು ಹೊರತು ನೀಚವಾದ ಬದುಕು ಏತ ಕೈ? ನಾಯಿ ಯಾವಾಗಲೂ ಬಾಲವನ್ನು ಆಡಿಸುತ್ತಾ ಬಂದು ಹಿಡಿಯನ್ನ ವನ್ನು ತಿನ್ನಲೇತಿನ್ನುತ್ತದೆ. ಪಾರುಷದಿಂದಲೂ ಜ್ಞಾನದಿಂದಲೂ ಕೀರ್ತಿ ಯಿಂದಲೂ ಪ್ರಸಿದ್ದಿಗೇರಿದವನ ಸಂಪತ್ತು ಒತ್ತೊತ್ತು ನಿಂತರೂ ಸಾಕು. ತನ್ನ ಹೊಟ್ಟೆಯಮಾತ್ರ ತುಂಬಿಕೊಳ್ಳುವ ಕಾಗೆ ಬಹುಕಾಲ ಬದುಕಿದರೂ ಫಲವೇನು ? ಸ್ವಲ್ಪ ನೀರಿನಿಂದ ಕಲ್ಲುಭೂಮಿಯಲ್ಲಿ ಪ್ರವಾಹ ಹೊರಳಿ ಚ