ಪುಟ:ಪರಂತಪ ವಿಜಯ ೨.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೧೮

ಪರಂತಪ ವಿಜಯ


ಕಾವಲುಗಾರ-(ಆತ್ಮಗತ) ಇವನೊಡನೆ ಮಾತನಾಡುವುದು ಸಮನಲ್ಲ. ಈ ಗಂಟನ್ನು ಈ ಸಲಾಕಿಗಳ ಸಂದಿನಿಂದ ಬೀಸಾಕಿ ಹೊರಟು ಹೋಗುವೆನು. (ಪ್ರಕಾಶ) ನಿನ್ನೊಡನೆ ಮಾತನಾಡುವುದಕ್ಕೆ ನಾನು ಬಂದಿಲ್ಲ.ಇದನ್ನು ತೆಗೆದುಕೊ.
  ಹೀಗೆ ಹೇಳಿ, ಗಂಟನ್ನು ಒಳಕ್ಕೆ ಬೀಸಾಕಿ ಹೊರಟುಹೋದನು. ಕೂಡಲೇ ಪರಂತಪನು ದೀಪದ ಕಡ್ಡಿಯಿಂದ ಅಲ್ಲಿದ್ದ ಕಟ್ಟಿಗೆಗಳನ್ನು ಹತ್ತಿಸಿ, ಆ ಬೆಳಕಿನಲ್ಲಿ ಈ ಗಂಟನ್ನು ಬಿಚ್ಚಿದನು. ಅದರಲ್ಲಿ ಅನೇಕವಿಧ ವಾದ ಭಕ್ಷ್ಯಗಳೂ ಮೇಣದ ಬತ್ತಿಗಳೂ, ದೀಪದಕಡ್ಡಿ ಪೆಟ್ಟಿಗೆಗಳೂ ಇದ್ದುವು. ಆಗ ಪರಂತಪನು, ತನ್ನ ಮನಸ್ಸಿನಲ್ಲಿ “ ಇವನು ಶಂಬರನ ಕಡೆಯವನು. ಈ ಭಕ್ಷ್ಯಗಳನ್ನೂ ಮೇಣದಬತ್ತಿಗಳನ್ನೂ ದೀಸದ ಕಡ್ಡಿ ಪೆಟ್ಟಿಗೆಗಳನ್ನೂ ಹೀಗೆ ತಂದು ಹಾಕುವುದಕ್ಕೆ ಕಾರಣವೇನು? ಶಂಬರನೇನಾದರೂ ವಿಷವನ್ನು ಹಾಕಿ ನಾನು ಇದನ್ನು ತಿಂದು ಸಾಯಲೆಂದು ಇವನ ದ್ವಾರಾ ಈ ಭಕ್ಷ್ಯವನ್ನು ಕಳುಹಿಸಿರಬಹುದೇ? ಹಾಗಿರಲಾರದು. ನಾನು ಇವನ ಹಸ್ತಗತನಾಗಿರುತ್ತೇನೆ. ನನ್ನನ್ನು ಕೊಲ್ಲುವುದು ಇವನಿಗೆ ಏನೂ ಕಷ್ಟವಿಲ್ಲ. ಈ ರೀತಿಯಲ್ಲಿ ಪ್ರೇರಿತವಾಗಿ ಈ ಕಾವಲುಗಾರನು ಬಂದಿರ ಲಾರನು. ಈಶ್ವರ ಪ್ರೇರಣೆಯಿಂದ ನನಗೆ ಸಹಾಯಮಾಡಬೇಕೆಂದು ಇವನಿಗೆ ಏತಕ್ಕೆ ತೋರಿರಕೂಡದು ? ಇರಲಿ, ಪರೀಕ್ಷಿಸೋಣ. ಬಹುಶಃ ಈ ಕಷ್ಟ ನಿವಾರಣೆಗೆ ಈ ಕಾವಲುಗಾರನು ನನಗೆ ಸಹಾಯಭೂತನಾಗುವನು ” ಎಂದು ಯೋಚಿಸುತ್ತ ಆ ದಿನವನ್ನು ಕಳೆದನು. ಮಾರನೆಯ ದಿವಸವೂ, ಆ ಕಾವಲುಗಾರನು ಒಳ್ಳೆಯ ಭಕ್ಷ್ಯ ಭೋಜ್ಯಗಳನ್ನು ಗಂಟುಕಟ್ಟಿ ಆ ಕಾರಾಗೃಹಕ್ಕೆ ತಂದು ಬೀಸಾಕಿದನು. ಅರ್ಥಪರನು ರೊಟ್ಟಿಯನ್ನು ತಂದು ಹಾಕುವುದು ನಿಂತು ಹೋಯಿತು; ಈ ಕಾವಲಗಾರನು ತರತಕ್ಕೆ ಆಹಾರಗಳು ಮಾತ್ರ ಕ್ರಮವಾಗಿ ಬರುವುದಕ್ಕೆ ಉಪಕ್ರಮವಾಯಿತು. ಹಸಿವಿನಿಂದ ನಾನು ಸಾಯಲೆಂದು ಶಂಬರನು ಅರ್ಥಪರನ ಮೂಲಕವಾಗಿ ಕಳುಹಿಸುತ್ತಿದ್ದ ರೊಟ್ಟಿಯನ್ನು ನಿಲ್ಲಿಸಿರಬಹುದೆಂಬುದಾಗಿಯೂ, ಹೀಗೆ ನಾನು ಸಾಯದಿರಲೆಂದು ಈ ಕಾವಲಗಾರನು ಭಕ್ಷ ಭೋಜ್ಯಗಳನ್ನು ತಂದು ಕೊಡುತ್ತಿರಬಹುದೆಂಬುದಾಗಿಯೂ, ಪರಂತಪನು ಭಾವಿಸಿಕೊಂಡನು. ಇದು ನಿಜವಾದ