ಪುಟ:ಪರಂತಪ ವಿಜಯ ೨.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧೫

೧೧೯


ಭಾವನೆ. ಇವನಿಗೆ ಆಹಾರವಿಲ್ಲದಂತೆ ಮಾಡಿ ಅವನಾಗಿ ಸಾಯುವಂತೆ ಮಾಡಬೇಕೆಂದು, ಶಂಬರನು ಕಾವಲುಗಾರನಿಗೆ ಆಜ್ಞೆ ಮಾಡಿದ್ದನು. ಈ ಕಾವಲುಗಾರನ ಮನಸ್ಸು, ಇಂಥ ಅಕೃತ್ಯವನ್ನು ಮಾಡುವುದಕ್ಕೆ ಒಪ್ಪಲಿಲ್ಲ. ಆದುದರಿಂದಲೇ, ಅವನು ಏಕಾಂತವಾಗಿ ಆಹಾರವನ್ನು ತಂದುಕೊಡುತಿದ್ದನು. ಕಾಮಮೋಹಿನಿಯೂ ಅವಳ ತಂದೆಯೂ ಕಲೆತು ಮಾತನಾಡಿದ ದಿನ ಪ್ರಾತಃಕಾಲ, ಕಾವಲುಗಾರನು ಆಹಾರಾದಿಗಳನ್ನು ಗಂಟುಕಟ್ಟಿ ಪರಂತಪನಿದ್ಧ ಗುಹೆಗೆ ಹಾಕಿದನು. ಆದಾಗ್ಯೂ, ಆ ದಿನವೇ ಎರಡನೆಯ ಸಾರಿ ಲಾಂದ್ರವನ್ನು ಹಿಡಿದುಕೊಂಡು ಇವನು ಪರಂತಪನ ಬಳಿಗೆ ಬಂದನು. ಪರಂತಪನು ಇವನನ್ನು ದೃಷ್ಟಿಸಿ ನೋಡಲು, ಇವನ ಎದೆಯಲ್ಲಿ ಗಾಯ ವಾಗಿ ರಕ್ತವು ಸುರಿಯುತಿತ್ತು. ಇವನು ಮೂರ್ಛೆಯಿಂದ ಕೆಳಗೆ ಬೀಳುವಂತೆ ಕಾಣುತ್ತಿದ್ದನು. ಆದರೂ ಒಂದು ನಿಮಿಷದೊಳಗಾಗಿ ಆ ಕಾರಾಗೃಹದ ಬೀಗವನ್ನು ತೆಗೆದು ಒಳಗೆ ಹೋಗಿ ಪುನಃ ಹೊರಗೆ ಬೀಗವನ್ನು ಹಾಕಿದನು. ಪರಂತಪನು ಆಶ್ಚರ್ಯದಿಂದ ಇವನ ವ್ಯಾಪಾರವನ್ನೆಲ್ಲ ನೋಡುತ್ತಿದ್ದನು. ಆಗ ಕಾವಲುಗಾರನು ಕುರ್ಚಿಯನ್ನು ಎಳೆದುಕೊಂಡು ಅದರ ಮೇಲೆ ಕುಳಿತು ಕೊಂಡು ಸರಂತವನನ್ನು ದೃಷ್ಟಿಸಿನೋಡಿ - ಅಯ್ಯಾ ! ನೀನು ಪರಂತಪನೆ ? ” ಎಂದನು.
ಪರಂತಪ-ಅಹುದು.
ಕಾವಲುಗಾರ -ನಾನು ಈ ರತ್ನಾಕರದ ಕಾವಲಗಾರನು. ಲೋಕದಲ್ಲಿ ಎಲ್ಲರೂ ನನ್ನನ್ನು ಪಿಶಾಚನೆಂದು ತಿಳಿದುಕೊಂಡಿರುವರು. ಈಗ ನನಗೆ ಅಪಾಯಕರವಾದ ಏಟು ಬಿದ್ದಿರುವುದು. ಸ್ವಲ್ಪ ಹೊತ್ತಿನೊಳಗಾಗಿ ನಾನು ಸಾಯುವೆನು. ಸಾಯುವುದಕ್ಕೆ ಮುಂಚೆ ನಾನು ಹೇಳತಕ್ಕ ಕೆಲವು ಅಂಶಗಳುಂಟು.
ಪರಂತಪ – ಒಳ್ಳೆಯದು. ಹೇಳಬೇಕಾದುದನ್ನು ಹೇಳು. ನಿನಗೆ ತಗುಲಿರತಕ್ಕ ಏಟು ನಿಜವಾಗಿ ಅಪಾಯಕರವಾದುದೆ?
ಕಾವಲುಗಾರ-ಅದರಲ್ಲಿ ಏನೂ ಸಂದೇಹವಿಲ್ಲ. ಶಂಬರನ ಸಮೀಪ ದಲ್ಲಿದ್ದ ಕೆಲವು ಕಾಗದ ಪತ್ರಗಳನ್ನು, ಒಂದು ಧರ್ಮಕಾರ್ಯಾರ್ಥವಾಗಿ ನಾನು ಈ ರಾತ್ರಿ ಅಪಹರಿಸಿದೆನು. ಅವನು ನನ್ನನ್ನು ಗುಂಡಿನಿಂದ ಹೊಡೆ