ಪುಟ:ಪರಂತಪ ವಿಜಯ ೨.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯

ಅಧ್ಯಾಯ ೩


ಯಿಸು ಅದಕ್ಕೆ ತಕ್ಕ ದ್ರವ್ಯ ಲಾಭವನ್ನು ನೀನು ಪಡೆಯುವೆ. (ಪರಂತಪನನ್ನು ಕುರಿತು) ಅಯ್ಯಾ ! ಪರಂತಪನೆ ! ಇಲ್ಲಿರತಕ್ಕ ಪರಿಜನರೆಲ್ಲರನ್ನೂ ಕರೆದುಕೊಂಡು ಸ್ವಲ್ಪ ಹೊತ್ತು ಹೊರಗಿರು. ಇವನೊಡನೆ ಸ್ವಲ್ಪ ಮಾತನಾಡಬೇಕಾಗಿರುವುದು. ಅನಂತರ ನಿನ್ನನ್ನು ಕರೆಯಿಸಿಕೊಳ್ಳುವೆನು.
ಪರಂತಪ- ಅಪ್ಪಣೆ. (ಹೊರಕ್ಕೆ ಹೋಗುವನು.)
ಮಾಧವ-ಅಯ್ಯಾ ! ಅರ್ಥಪರನೆ ! ಈಗ ನನ್ನ ಆಸ್ತಿಯನ್ನೆಲ್ಲ ಸತ್ಪಾತ್ರದಲ್ಲಿ ವಿನಿಯೋಗಿಸುವುದಕ್ಕಾಗಿ ಒಂದು ಉಯಿಲನ್ನು ಬರೆಯಬೇಕಾಗಿರುವುದು. ಈ ಕಾರ್ಯವನ್ನು ಮಾಡುವುದಕ್ಕಾಗಿ ನಿನಗೆ ಕೊಡಬೇಕಾದುದೇನು ? ಸಂಕೋಚವಿಲ್ಲದೆ ಹೇಳು.
ಅರ್ಥಪರ-ಅಯ್ಯಾ ! ಮಾಧವ ! ನಿನ್ನ ವಿಷಯದಲ್ಲಿ ನಾನು ಇಷ್ಟೇ ಕೊಡಬೇಕೆಂದು ನಿರ್ಣಯಿಸಿ ಹೇಳುವುದಕ್ಕೆ ಶಕ್ತನಲ್ಲ. ನೀನು ಹೇಳಿದ ಕೆಲಸವನ್ನು ಕೃತಜ್ಞನಾಗಿ ನೆರವೇರಿಸುವೆನು. ನಿನಗೆ ತೋರಿದುದನ್ನು ಕೊಡಬಹುದು.
ಮಾಧವ- ಅಯ್ಯಾ ! ಹಾಗಲ್ಲ. ಒಂದುವೇಳೆ ನಿನಗೆ ಅಪರಿಚಿತರಾದವರು ಇಂಥ ಉಯಿಲನ್ನು ಬರೆದುಕೊಡಬೇಕೆಂದು ಪ್ರಾರ್ಥಿಸಿದ ಪಕ್ಷದಲ್ಲಿ, ಅವರಿಂದ ನೀನು ಎಷ್ಟು ಧನವನ್ನು ತೆಗೆದುಕೊಳ್ಳುವೆಯೋ, ಅದನ್ನಾದರೂ ಹೇಳು.
ಅರ್ಥಪರ-ಇದು ಆಯಾ ಕಾರ್ಯಗಳಿಗೆ ಅನುರೂಪವಾಗಿರುವುದು. ಹತ್ತು ವರಹಾಗಳು ಮೊದಲುಗೊಂಡು ನೂರು ವರಹಾಗಳ ವರೆಗೆ ತೆಗೆದು ಕೊಳ್ಳುವುದುಂಟು.
ಮಾಧವ- ಹಾಗಾದರೆ ಈ ಕೆಲಸಕ್ಕಾಗಿ ನಿನಗೆ ಹತ್ತು ಸಾವಿರ ವರಹಾಗಳನ್ನು ಕೊಡುತ್ತೇನೆ ಆ ಉಯಿಲನ್ನು ಬರೆಯುವುದು ಮಾತ್ರವಲ್ಲದೆ, ಅದರಂತೆ ಸ್ವಲ್ಪವೂ ಲೋಪವಿಲ್ಲದೆ ನಡೆಯಿಸತಕ್ಕ ಭಾರವು ನಿನ್ನದಾಗಿದೆ. ಈ ಕಾರ್ಯವನ್ನೆಲ್ಲ ಶ್ರದ್ಧೆಯಿಂದ ನಡೆಯಿಸು.
ಅರ್ಥಪರ-(ಸಂತೋಷದಿಂದ) ಅಯ್ಯಾ ! ಮಾಧವನೇ ! ಅನ್ಯತ್ರ ದೊರೆಯುವುದಕ್ಕಿಂತ ಸಹಸ್ರಾಂಶ ಅಧಿಕವಾದ ಧನವನ್ನು ನೀನು ಕೊಡು