ಪುಟ:ಪರಂತಪ ವಿಜಯ ೨.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಪರಂತಪ ವಿಜಯ


ಬಲವಾದ ದ್ವೇಷ ಹುಟ್ಟುವುದು, ನೀನು ಅಜಾಗರೂಕನಾಗಿದ್ದರೆ ನಿನಗೆ ಬಲವಾದ ಕೇಡುಂಟಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ, ನೀನು ಇವನ ವಿಷಯದಲ್ಲಿ ಮಾತ್ರ ಬಹಳ ಜಾಗರೂಕನಾಗಿರಬೇಕು. ಇದಲ್ಲದೆ, ರಹಸ್ಯವಾದ ಇನ್ನೊಂದು ವಿಷಯವನ್ನು ನಿನಗೆ ಹೇಳಬೇಕಾಗಿರುವುದು. ಏನೆಂದರೆ, ಆ ಕಾಮಮೋಹಿನಿಯು ಬಹಳ ಸುಂದರಿಯಾಗಿಯೈ ಗುಣಾಧ್ಯಳಾಗಿಯೂ ಇರುವಳಾದುದರಿಂದ, ಸಮಸ್ತ ವಿಷಯದಲ್ಲಿಯೂ ನಿನಗೆ ಅನುರೂಪಳಾಗಿರುವಳು. ಇವಳಿಗೆ ಶಂಬರನ ವಿಷಯದಲ್ಲಿ ಸ್ವಲ್ಪವೂ ಅನುರಾಗವಿಲ್ಲ. ಆದರೂ, ಆ ನೀಚನು ಇವಳನ್ನು ಬಲಾತ್ಕಾರದಿಂದ ವಿವಾಹ ಮಾಡಿಕೊಳ್ಳುವುದಕ್ಕಾಗಿ ಬಹುಪ್ರಯತ್ನ ಮಾಡುತ್ತಲಿದ್ದಾನೆ. ದೈವಗತಿ ಹೇಗಿರುವುದೋ ತಿಳಿಯುವುದಕ್ಕಾಗುವುದಿಲ್ಲ. ಒಂದುವೇಳೆ ದೈವಕೃಪೆಯಿಂದ ಅವಳೇ ನಿನಗೆ ಲಭಿಸಿದರೂ ಲಭಿಸಬಹುದು. ಅದು ದೈವಸಂಕಲ್ಪ ವಿದ್ದಂತಾಗಲಿ. ನೀನು ಮಾತ್ರ ನಾನು ಹೇಳಿರುವ ಕಾರ್ಯಗಳಲ್ಲಿ ಯಾವುದನ್ನೂ ಮರೆಯದೆ ನೆರವೇರಿಸಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡು. (ಎಂದು ಹೇಳಿ, ತನ್ನ ಕೈಪೆಟ್ಟಿಗೆಯ ಬೀಗದ ಕೈಯನ್ನು ಅವನ ಕೈಯಲ್ಲಿ ಕೊಟ್ಟು,) ಇನ್ನು ನಾನು ಸ್ವಲ್ಪ ವಿಶ್ರಮಿಸಿಕೊಳ್ಳುವೆನು. ವೈದ್ಯನನ್ನು ಕರೆ. ಪರಂತಪನು ಒಡನೆಯೇ ಜೀವಾನಂದನನ್ನು ಕರೆತರುವನು.
ಮಾಧವ-(ಆತನನ್ನು ನೋಡಿ) ಅಯ್ಯಾ ! ಚಿಕಿತ್ಸಕನೆ ನನಗೆ ಮೈಮರೆತು ಸ್ವಲ್ಪ ಹೊತ್ತು ಸುಖನಿದ್ರೆಯುಂಟಾಗುವಂತೆ ಏನಾದರೂ ಔಷಧವನ್ನು ಕೊಡು.
ಜೀವಾನಂದ-ಅಪ್ಪಣೆ (ಔಷಧವನ್ನು ಕೊಡುವನು.)
ಮಾಧವನು ಆ ಔಷಧವನ್ನು ಪಾನಮಾಡಲು, ಕೂಡಲೆ ಅವನಿಗೆ ಚೆನ್ನಾಗಿ ನಿದ್ರೆ ಬಂದಿತು, ಜೀವಾನಂದನು ಅವನ ಹಾಸುಗೆಯ ಬಳಿಯಲ್ಲೇ ಕುಳಿತಿದ್ದನು. ಪರಂತಪನು, ತನ್ನ ದೂತನಾದ ಮಂಜೀರಕನನ್ನು ನೋಡುವುದಕ್ಕೋಸ್ಕರ ಬಾಗಲಿಗೆ ಬಂದು ನೋಡಿ, ಅವನನ್ನು ಕಾಣದೆ ಅಲ್ಲಿದ್ದ ಇತರ ಜನಗಳನ್ನು ಕೇಳಲು, ಅವರು “ ಅಯ್ಯಾ ! ಪರಂತಪನೆ! ಮಂಜೀರಕನು ತನ್ನ ಕೈಯಲ್ಲಿ ಒಂದು ಸಣ್ಣ ತುಪಾಕಿಯನ್ನೂ ಗುಂಡುಗಳನ್ನೂ ಹಿಡಿದುಕೊಂಡು ಹೋಗುತ್ತಿರುವಾಗ, ಯಾಮಿಕರು ಕಂಡು, ಇವನೇ ಆ