ಪುಟ:ಪರಂತಪ ವಿಜಯ ೨.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩

ಪರಂತಪ ವಿಜಯ


ಕೂಡಲೆ, ಸುಮಿತ್ರ ಶಂಬರರಿಗೆ ಅನಿರ್ವಚನೀಯವಾದ ಖೇದವುಂಟಾಗುವುದಲ್ಲದೆ, ಇವರಿಗೆ ನನ್ನ ಮೇಲೂ ದ್ವೇಷವುಂಟಾಗಬಹುದು; ಈ ದ್ವೇಷವನ್ನು ತಪ್ಪಿಸಿಕೊಳ್ಳಬೇಕೆಂದು, ಕಾಮಮೋಹಿನಿಗೆ ಪಿತೃಭಕ್ತಿಯ ವಿಷಯದಲ್ಲಿಯೂ, ಕೃತಜ್ಞತೆಯ ವಿಷಯದಲ್ಲಿಯೂ ಶಂಬರನನ್ನು ವಿವಾಹ ಮಾಡಿಕೊಳ್ಳತಕ್ಕ ವಿಷಯದಲ್ಲಿಯೂ ಕೂಡಿದ ಮಟ್ಟಿಗೂ ಹೇಳಿದೆನು; ಅವಳು ಕೇಳಲಿಲ್ಲ. ಇವರ ದ್ವೇಷವು ಪ್ರಬಲವಾಗಿ, ನನ್ನ ಬಳಿಯಲ್ಲಿರತಕ್ಕೆ ಮಾಧವನ ಉಯಿಲು, ಉಂಗರ, ಕಾಗದಪತ್ರಗಳು, ದ್ರವ್ಯ ಮೊದಲಾದುವುಗಳಿಗೆ ಏನಾದರೂ ಅಪೋಹಬಂದರೆ ಕಷ್ಟ; ಅದಲ್ಲದೆ, ಅಪರಾಧಿಗಳನ್ನು ಪತ್ತೆ ಮಾಡುವ ವಿಷಯದಲ್ಲಿ ನನಗೆ ಪೂರ್ಣಾಧಿಕಾರವನ್ನು ಕೊಟ್ಟು ಸರಕಾರದವರು ಕೊಟ್ಟಿರತಕ್ಕ ಸನ್ನದೂ ನನ್ನ ಬಳಿಯಲ್ಲಿಯೇ ಇದೆ. ಈಗ ಇದನ್ನು ಭದ್ರಪಡಿಸದಿದ್ದರೆ ಬಹಳ ಅನರ್ಥಕ್ಕೆ ಕಾರಣವಾಗುವುದು" ಎಂದು ಯೋಚಿಸಿ, ಆ ಕ್ಷಣದಲ್ಲಿ ಅವುಗಳನ್ನು ತೆಗೆದುಕೊಂಡು ಯಾರಿಗೂ ತಿಳಿಯದಂತೆ ಆ ತೋಟದಲ್ಲಿ ಗಹನವಾದ ಒಂದು ಪ್ರದೇಶಕ್ಕೆ ಹೋಗಿ, ಅಲ್ಲಿ ಒಂದು ಬಂಡೆಯ ಬಳಿಯಲ್ಲಿ ಒಂದು ಹಳ್ಳವನ್ನು ತೆಗೆದು, ಆ ಗುಂಡಿಯಲ್ಲಿ ಇವುಗಳೆಲ್ಲ ಇಡಲ್ಪಟ್ಟಿದ್ದ ಒಂದು ತವರದ ಪೆಟ್ಟಿಗೆಯನ್ನು ಇಟ್ಟು ಮಣ್ಣು ಮುಚ್ಚಿ, ಗುಮಾನಿಗೆ ಆಸ್ಪದವಾಗದಂತೆ ಹೆಪ್ಪುಗಳನ್ನು ಕಟ್ಟಿ, ದಂಸು ಮಾಡಿ ಹೊರಟುಹೋಗಿ, ಅಲ್ಲಿದ್ದ ಅತಿಥಿಗಳ ಜತೆಯಲ್ಲಿ ಸೇರಿಕೊಂಡನು.
  ಹೀಗಿರುವಲ್ಲಿ, ಸುಮಿತ್ರನ ಜವಾನನು ಆ ಯೆರಡು ಕಾಗದಗಳನ್ನು ತೆಗೆದುಕೊಂಡು ಹೋಗಿ ತನ್ನ ಯಜಮಾನನಿಗೆ ಕೊಟ್ಟನು. ಸುಮಿತ್ರನು ಈ ಕಾಗದಗಳ ಮೇಲುವಿಲಾಸಗಳನ್ನು ನೋಡಿದ ಕೂಡಲೆ ಗಾಬರಿಬಿದ್ದು, ಕವರುಗಳನ್ನು ಕೂಡಲೇ ಒಡೆದು ನೋಡಿದನು. ಅದರಲ್ಲಿ ಬರೆದಿದ್ದ ಒಕ್ಕಣೆ ಯೇನೆಂದರೆ:-
  ತೀರ್ಥರೂಪು ಸುಮಿತ್ರರವರ ಚರಣ ಸನ್ನಿಧಾನಗಳಲ್ಲಿ:-
  ಸೇವಕಳಾದ ಕಾಮಮೋಹಿನಿಯ ಸಾಷ್ಟಾಂಗ ನಮಸ್ಕಾರಪೂರ್ವಕ ವಿಜ್ಞಾಪನೆಗಳು ; ಕ್ಷೇಮೋಪರಿ, ಸಂಪ್ರತಿ.
  ನಾನು ನನ್ನ ಮಾತಾಪಿತೃಗಳನ್ನು ಅರಿಯೆನು. ನನಗೆ ಬುದ್ದಿ ಬಂದುದು ಮೊದಲು ತಾವೇ ತಂದೆತಾಯಿಗಳೆಂದು ಭಾವಿಸಿದ್ದೇನೆ. ಬಾಲ್ಯ