ಪುಟ:ಭವತೀ ಕಾತ್ಯಾಯನೀ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೯-

ಎಂಬ ಇಂದ್ರಿಯವು ಪ್ರಜೋತ್ಪಾದನವೆಂಬ ಕಾರ್ಯವನ್ನೂ ಮಾಡುತ್ತವೆಂಬುವದು ಸರ್ವರಿಗೂ ವಿದಿತವಾದ ವಿಷಯವೇ ಇರುತ್ತದೆ .

ಜ್ಞಾನೇಂದ್ರಿಯಗಳೇ ಆಗಲಿ, ಕರ್ಮೇಂದ್ರಿಯಗಳೇ ಆಗಲಿ, ಪ್ರತಿಯೊಂದು ಇಂದ್ರಿ ಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುವದಕ್ಕೆ ಸಮರ್ಥಗಳಾಗಿದ್ದರೂ ಅವುಗಳ ಕಡೆಗೆ ಮನಸ್ಸಿನ ಒಲವು ಇರಬೇಕಾಗುತ್ತದೆ. ಇವು ಕೆಲಸಮಾಡುವಾಗ ಮನಸ್ಸು ಇವುಗಳಲ್ಲಿ ಕೂಡಿಕೊಳ್ಳದಿದ್ದರೆ ಇವುಗಳಿಂದ ಯಾವಕೆಲಸವೂ ಅಗುವದಿಲ್ಲ. ಮನಸ್ಸು ಬೇರೆ ಎಲ್ಲಿಯಾದರೂ ಹೋಗಿದ್ದರೆ ಕಣ್ಣಿರದಿದ್ದರೂ ರೂಪವೇ ತೋರುವದಿಲ್ಲ, ಇದರಂತೆ ಶಬ್ದವೂ ಕೇಳುವದಿಲ್ಲ, ಗಂಧವೂ ತಿಳಿಯುವದಿಲ್ಲ, ರಸಜ್ಞಾನವೂ ಆಗುವದಿಲ್ಲ, ಸ್ಪರ್ಶವೂ ತಿಳಿಯುವದಿಲ್ಲ. ಈ ಅಭಿಪ್ರಾಯವನ್ನು ಭಗವದ್ಗೀತೆಯಲ್ಲಿ-"ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನು ವಿಧೀಯತೆ| ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾನವಾಂಭಸಿ||” “ಯಾವಾಗಲೂ, ಇಂದ್ರಿಯಗಳು ವಿಷಯಗಳಲ್ಲಿ ಸಂಚರಿಸತಕ್ಕ ಸ್ವಭಾವವುಳ್ಳವಾಗಿರು ತ್ತವೆ, ಅವುಗಳ ಕರ್ತವ್ಯಕರ್ಮವೇ ಅದಾಗಿರುವದು; ಆದರೆ ಆ ಇಂದ್ರಿಯಗಳ ಸಂಗಡ ಮನಸ್ಸನ್ನುಮಾತ್ರ ಕಳಿಸಿದರೆ ಸಾಕು, ನೀರಲ್ಲಿರುವ ನಾವಿಕೆಯನ್ನು ಅನುಕೂಲಮಾರು ತನು ಹಾರಿಸುವಂತೆ ಅದು ಮನುಷ್ಯನ ಕರ್ತವ್ಯಾಕರ್ತವ್ಯವಿವೇಕವನ್ನು ಅಪಹರಿಸುತ್ತದೆ. ಅಂದರೆ ಮನುಷ್ಯನು ಇಂದ್ರಿಯ ವಶನಾಗಿ ವ್ಯವಹರಿಸಹತ್ತಿದರೆ ಸದ್ವಿಚಾರಭ್ರಷ್ಟನಾಗುವ ನೆಂಬ ತಾತ್ಪರ್ಯವು ಈ ಶ್ಲೋಕದಿಂದ ವ್ಯಕ್ತವಾಗಿರುತ್ತದೆ. ಇಂದ್ರಿಯಗಳು ತಮಗೆ ಸ್ವಾಧೀ ನನಾದ ಮನುಷ್ಯನನ್ನು ಅಡ್ಡ ಹಾದಿಗೆ ಹಚ್ಚದೆ ಎಂದೂ ಬಿಡವು ಎಂಬ ಅಭಿಪ್ರಾಯವನ್ನು ಶ್ರೀಮದ್ಭಾಗವತದ “ಮಾತ್ರಾ ಸ್ವಸ್ರಾ ದುಹಿತ್ರಾವಾ ನೈಕಶಯಾಸನೋ ಭವೇತ್|ಬಲವಾ ನಿಂದ್ರಿಯಗ್ರಾಮೋ ವಿದ್ವಾಂಸಮಪಿಕರ್ಷತಿ |" ಶಾಯಿಯಾಗಲಿ, ಅಕ್ಕತಂಗಿಯರಾಗಲಿ, ಮಗಳೇ ಆಗಲಿ, ಇವರೊಡನೆ ಪುರುಷನು ಒಂದೇ ಹಾಸಿಗೆಯಲ್ಲಿ, ಅಥವಾ ಒಂದೇ ಆಸನದಲ್ಲಿ ಕದಾಚಿತ್ಕಾಲದಲ್ಲಿಯಾದರೂ ಕುಳಿತುಕೊಳ್ಳಬಾರದು ಯಾಕಂದರೆ ಇಂದ್ರಿಯಗಳ ಹಿಂಡು ಬಲಾಢ್ಯವಾಗಿರುವದರಿಂದ ಪಂಡಿತನನ್ನೂ ಕೂಡ ಸ್ವಾಧೀನನ್ನಾಗಿ ಮಾಡಿಕೊಳ್ಳುತ್ತದೆ” ಎಂಬ ಶ್ಲೋಕವು ತೋರಿಸುತ್ತದೆ ಈ ಶ್ಲೋಕದಲ್ಲಿಯ "ವಿದ್ಯಾಸಂ" ಎಂಬ ಶಬ್ದಕ್ಕೆ ಬ್ರಹ್ಮಜ್ಞಾನಿಯೆಂಬ ಅರ್ಥವನ್ನು ಹೇಳಬಾರದು. ಶಾಸ್ತ್ರಕಲಿತವನೂ, ವ್ಯವಹಾರ ಚತುರನೂ ಆದ ಪುರಷನೆಂದು ಹೇಳಬೇಕು. ಯಾಕಂದರೆ, ಮನಸ್ಸು ಮತ್ತು ಇಂದ್ರಿಯ ಇವುಗಳ ಶಕ್ತಿಯನ್ನು ಇಲ್ಲದಂತೆ ಮಾಡಿ, ವಿಷಯಗಳನ್ನು ತುಚೀಕರಿಸಿ ಸದಾನಂದಿಯಾಗಿರುವ ಆ ಮಹಾತ್ಮನನ್ನು ಎಳೆದುಕೊಳ್ಳುವ ಶಕ್ತಿಯು ಇಂದ್ರಿಯಗಳಿಗೆ ಎಲ್ಲಿಂದಬರಬೇಕು? ವೇದದಲ್ಲಿ ಒಂದು ರೂಪಕವನ್ನು ಕಲ್ಪಿಸಿರುತ್ತದೆ. ಅದು ಹೇಗೆಂದರೆ." ಈ ದೇಹದ ಯಜ ಮಾನನಾದ ಜೀವಾತ್ಮನೇ ಒಬ್ಬ ರಥಿಕನಾಗಿರುವನು. ಬುದ್ಧಿಯೆಂಬುವದೇ ಇವನಿಗೆ ಸಾರ ಥ್ಯವನ್ನು ಮಾಡುವದು. ಇವರಿಗೆ ಕುಳಿತುಕೊಳ್ಳಲಿಕ್ಕೆ ರಥಮಾತ್ರ ಬೇಕಾಯಿತಷ್ಟೆ? ಆ ರಥವೆಂದರೆ ದೇಹವು. ರಥಕ್ಕೆ ಹೂಡಿದ ಕುದುರೆಗಳೇ ಇಂದ್ರಿಯಗಳು ಇನ್ನು ಈ ಕುದುರೆ ಗಳನ್ನು ಬಂಧನಮಾಡುವದಕ್ಕೆ ಬೇಕಾದ ಹಗ್ಗವು ಮನಸ್ಸಾಗಿರುವದು." ಇಲ್ಲಿ ಇಂದ್ರಿಯ