ಪುಟ:ಭವತೀ ಕಾತ್ಯಾಯನೀ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--೧೦--

ಗಳಿಗೆ ಅಶ್ವದೃಷ್ಟಾಂತವನ್ನು ಕೊಟ್ಟಿರುವದರಿಂದ, ಅಶ್ವಗಳ ಹಾಗೆ ಇಂದ್ರಿಯಗಳು ವಿಚಿತ್ರ ಗತಿಯುಳ್ಳವೆಂಬ ಅಭಿಪ್ರಾಯವಾಗುತ್ತದೆ. ಇಂಥ ಅಶ್ವಸಮಾನಗಳಾದ ಇಂದ್ರಿಯಗಳು ನಮ್ಮನ್ನು ಎಲ್ಲಿಯಾದರೂ ಒಂದು ಗರ್ತದಲ್ಲಿ ಕೆಡವದ ಹಾಗೆ ಬಿಗಿದು ಹಿಡಿಯುವದಕ್ಕೆ ವಿಚಾರ ಶಕ್ತಿಯುಳ್ಳ ಮನಸ್ಸೇ ರಜ್ಜುವಾಗಿರುವದೆಂಬ ತಾತ್ಪರ್ಯವು, ವಿವೇಕಿಯಾದವನು ವಿಚಾರಯುಕ್ತವಾದ ಮನಸ್ಸಿನ ಸಹಾಯದಿಂದ ಇಂದ್ರಿಯಗಳನ್ನು ವಿಷಯಗಳ ಕಡೆಗೆ ಹೋಗದಂತೆ ಇಟ್ಟುಕೊಂಡರೆ, ಅವನಿಗೆ ಸದ್ಗತಿಯಾಗುತ್ತದೆಂಬ ಭಾವಾರ್ಥವು, ಬೃಹದಾ ರಣ್ಯಕ ಶ್ರುತಿಯಲ್ಲಿ ವ್ಯಕ್ತವಾಗಿರುವದು. ಇಂದ್ರಿಯಗಳಿಗೆ ಗ್ರಹವೆಂತಲೂ, ವಿಷಯಗಳಿಗೆ ಅತಿಗ್ರಹವೆಂತಲೂ, ಅಲ್ಲಿ ಹೆಸರು ಕೊಟ್ಟಿರುವರು. "ಗೃಣ್ಣಂತಿ ಬಧ್ನಂತಿ ಪುರುಷಪಶೂ ನಿತಿ ಗ್ರಹಾಃ ಇಂದ್ರಿಯಾಣಿ” ಅಂದರೆ ಅವಿವೇಕಿಗಳಾದ ಪುರುಷರನ್ನು ಪಶುಗಳನ್ನಂತೆ ಕಟ್ಟಿಹಾಕುತ್ತವೆ, ತಮ್ಮ ಸ್ವಾಧೀನರನ್ನಾಗಿ ಮಾಡಿಕೊಳ್ಳುತ್ತವೆ ಎಂಬರ್ಥವು.ಅತಿಗ್ರಹ ಗಳೆಂದರೆ, ಇದಕ್ಕೂ ಹೆಚ್ಚಿನ ಗ್ರಹಗಳು ವಿಷಯಗಳು. ವಿಷಯಗಳಿದ್ದರೆಯೇ ಇಂದ್ರಿಯ

ಗಳ ಕೆಲಸವು ನಡೆಯುತ್ತದೆ, ಇಲ್ಲದಿದ್ದರೆ ಅವುಗಳಿಂದ ಯಾವಕಾರ್ಯವೂ ಆಗುವದಿಲ್ಲ.

ಈ ದೇಹವು ಭೂತಮಹಾಪಂಚಕದ ಸೂಕ್ಷ್ಮಾಂಶವಾಗಿದ್ದು, ಇದರೊಳಗಿನ ಅತಿ ಸೊಕ್ಷ್ಮಾಂಶಗಳೆಂದರೆ ಇಂದ್ರಿಯಗಳು. ದೇಹದಲ್ಲಿದ್ದ ಪಂಚಭೂತಗಳಿಗೆ ಹೊರಗಿನ ರೂಪ ಮುಂತಾದ್ದರ ಸಂಬಂಧದ ಹೊರತು ಪೋಷಣವಿಲ್ಲ. ಹೇಗೆಂದರೆ ಒಳಗೆ ಪ್ರಾಣ ರೂಪವಾದ ವಾಯುವು ಇರುತ್ತದಷ್ಟೆ? ಇದಕ್ಕೆ ಹೊರಗಿನ ವಾಯುವಿನ ಸಂಬಂಧವಿಲ್ಲ ದಂತಾದರೆ, ಪ್ರಾಣವಾಯುವು ನಿಲ್ಲುವದೇ ಇಲ್ಲ. ಈ ಪ್ರಾಣವಾಯುವು ಯಾವಾಗಲೂ ಒಳಗಿನ ದುರ್ಗಂಧವನ್ನೆಲ್ಲ ಮುಖದ್ವಾರದಿಂದ ಹೊರಗೆ ಹಾಕಿ, ಹೊರಗಿನ ನಿರ್ಮಲವಾದ ವಾಯುವನ್ನು ಒಳಗೆ ಒಯ್ಯುತ್ತಲಿರುತ್ತದೆ. ಇದೊಂದೇ ಈ ವಾಯುವಿನ ಕಾರ್ಯವಿ ರುತ್ತದೆ. ಈ ಒಳಗಿರುವ ವಾಯುವಿನ ಇಂದ್ರಿಯವು ತ್ವಗಿಂದ್ರಿಯವಿರುವದು. ಇದು ಭೂತಸೂಕ್ಷ್ಮವಾದ ದೇಹದ ವಾಯುವಿನ ಸೂಕ್ಷ್ಮಾಂಶವಿರುವದು. ವಾಯುವಿನ ಗುಣವು ಸ್ಪರ್ಶವಿರುವುದರಿಂದ ಇದು ಯಾವಾಗಲೂ, ಸ್ಪರ್ಶವನ್ನೇ ಹಿಡಿಯುತ್ತದೆ; ಮತ್ತು ಇದಕ್ಕೆ ಮುಖ್ಯವಾಗಿ ಹೊರಗಿನ ವಾಯುವಿನ ಸ್ಪರ್ಶವು ಬೇಕಾಗಿರುತ್ತದೆ ಅದಿಲ್ಲದಿದ್ದರೆ ಈ ದೇಹವೇ ನಿಲ್ಲುವದಿಲ್ಲ. ತ್ವಗಿಂದ್ರಿಯವು ಈ ದೇಹದಮೇಲೆ ಮತಾಯಿಸಿದಂಥ ಚರ್ಮ ವನ್ನೆಲ್ಲ ವ್ಯಾಪಿಸಿಕೊಂಡಿರುತ್ತದೆ. ಅದ,ನೇತ್ರ ಮುಂತಾದ ಇಂದ್ರಿಯಗಳಂತೆ ಒಂದೊಂದೇ ಪ್ರದೇಶದಲ್ಲಿಲ್ಲ. ಈ ದೇಹದ ಚರ್ಮಕ್ಕೆ ತುಂಬಾ ಛಿದ್ರಗಳುಂಟು. ಆ ಛಿದ್ರಗಳ ಲ್ಲೆಲ್ಲ ಸಣ್ಣ ಸಣ್ಣ ರೋಮಗಳೂ ದೊಡ್ಡ ದೊಡ್ಡ ರೋಮಗಳೂ ತುಂಬಿರುವವು. ದೇಹ ದಲ್ಲಿರುವ ವ್ಯಾನವೆಂಬ ವಾಯುವು ಒಳಗಿನ ಕಶ್ಮಲವನ್ನೆಲ್ಲ ಬೆವರಿನ ರೂಪದಿಂದ ಹೊರಗೆ ಹಾಕುತ್ತದೆ . ಅದನ್ನೆಲ್ಲ ಹೊರಗಿನ ವಾಯುವು ಆರಿಸಿ ಬಿಡುತ್ತದೆ . ಈ ಕ್ರಿಯೆಯೃ ಯಾವಾಗಲೂ ನಡೆದಿರುತ್ತದೆ. ಹೀಗಾಗದಿದ್ದರೆ, ದೇಹದ ಪೋಷಣವೇ ಆಗಲಾರದು. ಈ ತ್ವಗಿಂದ್ರಿಯದ ಸಂಪೂರ್ಣ ನಾಶವಾದರೆ ಚರ್ಮವೆಲ್ಲ ಒಣಗಿ ರಕ್ತವೇ ಓಡಾಡುವ ವದಿಲ್ಲ. ಇಂಥ ಪ್ರಸಂಗದಲ್ಲಿ ಮನುಷ್ಯನು ಬದುಕುವದೇ ಇಲ್ಲ .