ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ಭಾರತೀಯ ಇತಿಹಾಸವು.

ಶಿವ ಉಪಾಸನೆಗಳ ಪ೦ಥಗಳು ಮೆಲ್ಲಮೆಲ್ಲಗೆ ಅಡಿಯಿಡಲಿಕ್ಕೆ ಪ್ರಾರಂಭ ಸಿದ್ದವೆನ್ನಲಿಕ್ಕೆ ಅಡ್ಡಿಯಿಲ್ಲ. ಇದರ ಜೊತೆಯಲ್ಲಿಯೇ ದುರ್ಗಾಪೂಜೆಯು ಜನಸಾಮಾನ್ಯರಲ್ಲಿ ಸೇರಿಕೊಂಡಿತ್ತು. ಭಾರತೀಯ ಆರ್ಯರಲ್ಲಿ ಶ್ರಾದ್ಧ ಸಂಪ್ರದಾಯವು ಬಹು ಪುರಾತನ ಕಾಲದಿಂದ ನಡೆದು ಬಂದಿದೆ. ಶ್ರಾದ್ಧದೊಳಗೆ ಪಿತೃಸ್ಥಾನಕ್ಕೆ ಕುಳಿತು ಪೂಜೆಗೊಂಬುವ ಬ್ರಾಮ್ಹಣರು ವೇದವೇತ್ತರೂ , ಶೀಲಸಂಪನ್ನರೂ ಇರಲೇಬೇಕೆಂದು ಆರ್ಯರ ಮುಖ್ಯ ಕಟಾಕ್ಷವಿತ್ತು. ಭಾರತ ಕಾಲಕ ಬ್ರಾಮ್ಹಣರು ತಮ್ಮ ಬ್ರಾಮ್ಹಣ ಧರ್ಮವನ್ನು ತ್ಯಜಿಸಿ, ಹೊಟ್ಟೆಗಾಗಿ ಬಗೆಬಗೆಯ ಕೀಳು ಕೆಲಸಕ್ಕೆ ಕೈ ಹಾಕಿದ್ದರೆ೦ದು ನಿಚ್ಚಳವಾಗುತ್ತದೆ; ಏಕೆಂದರೆ ಧರ್ಮ ಬಿಟ್ಟು, ಬೇರೆ ವ್ಯವಸಾಯವನ್ನು ಕೈಕೊ೦ಡ೦ಧ ಬ್ರಾಮ್ಹಣರನ್ನು ಶ್ರಾದ್ಧಕ್ಕೆ ಕೂಡ್ರಿಸಬಾರದೆಂದು ನಿರ್ಬ೦ಧಹಾಕಿದ್ದರು; ಪ್ರತಿಯೊಬ್ಬನು ದಿನಾಲು ತನ್ನ ಕೈಯಲ್ಲಿ ಇದ್ದ ಮಟ್ಟಿಗೆ ಚೂರುಚಾರಾದರೂ ದಾನ ಮಾಡಿಯೇ ತೀರಬೇಕೆಂದು ಪೂರ್ವಿಕರ ಹೇಳಿಕೆ. ಭಾರತ ಕಾಲದಲ್ಲಿ, ಭ೦ಗಾರ ಭೂಮಿ, ಎಳ್ಳು, ಆಕಳು, ವಸ್ತ್ರ, ಕನ್ಯಾ, ಮೊದಲಾದವು ದಾನ ಪದಾರ್ಥಗಳಾಗಿದ್ದವು; ಇವುಗಳನ್ನು ದಾನ ಮಾಡುವದು ಮನುಷ್ಯ ಕ್ಷೇಮಕ್ಕೆ ಬಹು ಪೋಷಕವೆಂಬುದರಾಗಿ ಹೇಳಿರುವರು. ಶ್ರೀಕೃಷ್ಣನು ಕರ್ಣ ಪರ್ವದೊಳಿಗೆ ಒಂದು ಕಡೆಯಲ್ಲಿ "ಒಂದು ವೇಳೆ ಸುಳ್ಳನ್ನ ಡಬಹುದು; ಆದರೆ ಎ೦ಧ ಪ್ರಸಂಗ ಬಂದರೂ, ಹಿ೦ಸೆಪಡಿಸಕೂಡದೆಂದು ಖ೦ಡತು೦ಡಾಗಿ ಹೇಳಿರುವನು. ಭಾರತೀಯ ಕಾಲದೊಳಗೆ ಅಹಿಂಸೆಯ ಕಲ್ಪನೆಯು ಎಷ್ಟು ಪ್ರಖರವಾಗಿತ್ತೆಂಬುದು ಇದೊ೦ದರಮೇಲಿಂದ ಗಮನಿಸಬಹುದಾಗಿದೆ. ಅತಿಥಿಯು ಮನೆಗೆ ಬಂದರೆ, ತಾನು ಉಪವಾಸಬಿದ್ದಾದರೂ, ಅವನಿಗೆ ಅನ್ನಕೊಟ್ಟು ಸ೦ತುಷ್ಟಪಡಿಸಬೇಕೆಂದು ಭಾರತ ಕಾಲದೊಳ ಗಿದ್ದಂಧ ಕಟ್ಟುನಿಟ್ಟಾದ ನಿಯಮವು ಬೇರೆ ಯಾವ ಕಾಲದಲ್ಲಿಯೂ ಪ್ರಚಾರದಲ್ಲಿರುವದಕ್ಕೆ ಆಧಾರವಿಲ್ಲ. ಅತಿಧಿಯು ಉ೦ಡು ಉಳಿದ ಅನ್ನಕ್ಕೆ ಆರ್ಯರು ಅಮೃತವೆಂತಲೂ, ಗೃಹಸ್ಥಧರ್ಮದೊಳಗಿರುವ ಸ್ತ್ರೀಪುರುಷರು ಈ ಅಮೃತಾನ್ನವನ್ನು೦ಡು ಚರಿತಾರ್ಥ ನಡೆಯಿಸಬೇಕೆಂಬದೂ ಪರ೦ಪರೆಯಿ೦ದ ನಡೆದು ಬಂದಿರುವ ಆರ್ಯ