ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನ ಜನ್ಮ ಭೂಮಿ ಯಾವದು.

೧೩

ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ನಮಗಂತೂ ಬಂಗಾಲದ ಶ್ರೀ. ದಾಸರೆಂಬವರು ಹೊಸದಾಗಿ ಬರೆದಂತೆ, ಆರ್ಯಾವರ್ತವೇ ಜಗತ್ತಿನ ತೌರುಮನೆಯೆ೦ಬುವ ಕಲ್ಪನೆಯೇ ಹೆಚ್ಚು ಪ್ರಶಸ್ತವಾಗಿ ಕಾಣುತ್ತದೆ. ಶೀ. ದಾಸರು ತಮ್ಮ * "ವೈದಿಕ ಭಾರತ' ವೆ೦ಬ ಪುಸ್ತಕದೊಳಗೆ ಲೋಕ ಮಾನ್ಯರ ಸಿದ್ಧಾಂತಗಳನ್ನೆಲ್ಲ ಖಂಡಿಸಿ ಆರ್ಯರು ಮೊತ್ತ ಮೊದಲು ಇಲ್ಲಿಯ ನಿವಾಸಿಗಳೆಂದೂ, ಈಗಿನ ಪ೦ಜಾಬ ಪ್ರಾಂತವೇ ಪ್ರಾಚೀನ ಸುಧಾರಣೆಯ ಮಾತೃಸ್ಥಾನವಾಗಿತ್ತೆಂದೂ, ಆರ್ಯರಿಂದ ಬೇರೆಯಾದ ಬೇರೆ ಬೇರೆ ಬ೦ಧುಗಳು ಇಲ್ಲಿಂದಲೇ ಹೊರಗೆ ಹೋಗಿ ಆಯಾ ದೇಶಗಳಲ್ಲಿ ಒಕ್ಕಲಾದರೆಂದೂ ಸಾಧಾರ ಸಿದ್ಧಪಡಿಸಿದ್ದಾರೆ. ಯಾವನ ಹೃದಯದೊಳಗೆ ಅರ್ಯರ ಪವಿತ್ರವಾದ ನೆರವು ದಡದಡನೆ ಹರಿಯುತ್ತಿರುವದೊ, ಅವನಿಗೆ ಆರ್ಯರು ಇಲ್ಲಿಯವರೆ, ಜಗತ್ತಿಗೆಲ್ಲ ಹಿಂದು ಸ್ಥಾನವೇವೇ ಮಾತೃಭೂಮಿಯೆಂಬೀ ಸೊಲ್ಲನ್ನು ಕೇಳಿ ಆರ್ಯಭೂಮಿಯ ವಿಷಯದಲ್ಲಿ ಅವನಿಗೆಷ್ಟು ಅಭಿಮಾನವೆನಿಸುವದೋ ಅಷ್ಟು ಮಧ್ಯ ಏಸಿಯ ಅಧವಾ ಉತ್ತರಧ್ರುವನೆ೦ದರೆ ಅನಿಸುವದೊ? ಇದುವರೆಗೆ ಬಹುಮಟ್ಟಿಗೆ ಪಾಶ್ಚಾತ್ಯ ವಿದ್ವಾ೦ಸರೇ ನಮ್ಮ ಇತಿಹಾಸವನ್ನು ಬರೆಯುವ ಹಾಗು ಶೋಭಿಸುವ ಗುತ್ತಿಗೆ ಹೊತ್ತಿದ್ದರಿಂದ ನಮಗೆ ಅವರ ಮೇಲೆಯೇ ಅವಲಂಬಿಸಬೇಕಾಗಿತ್ತು; ಆದರೆ ನಮ್ಮ ಅದೃಷ್ಟದಿಂದ ಆ ಮನ್ವ೦ತರವೀಗ ಪಲ್ಲಟವಾಗಿದೆ; ಹಿಂದೂ ದೇಶದ ಪೂರ್ವ ನಿವಾಸಿಗಳು ಕಪ್ಪು ಬಣ್ಣದವರಿದ್ದರೆಂದೂ, ಅರ್ಯರು ಶೂರರೂ, ಕೆಂಬಣ್ಣದವರಾಗಿದ್ದರೆಂದೂ, ಅವರು ಅಲೆಯು ತ್ತಲೆಯುತ್ತ ಮಧ್ಯ ಏಸಿಯ ಅಥವಾ ಉತ್ತರ ಧ್ರುವದಿ೦ದ ಪ೦ಜಾಬಕ್ಕೆ ಬ೦ದರ೦ದೂ, ತಾವು ಆರ್ಯ ಬುಡ ಕಟ್ಟಿಗೆ ಸೇರಿದವರೆಂದೂ ಪಾಶ್ಚಾತ್ಯ ಚರಿತ್ರಕಾರರು ಪ್ರತಿಷ್ಠೆ ಕೊಚ್ಚಿಕೊ೦ಡು ಮೂಲ ಹಿ೦ದೂ ಜನರನ್ನು ಕಾಡು ಜನರ ಗುಂಪಿಗೆ ಸೇರಿಸಲು ಪ್ರಯತ್ನಿಸಿದ್ದಾರೆ; ಆದರೆ ಶುದ್ಧ ಅರ್ಯಸ೦ತತಿಯವರಾದ ನಮಗೆ ಈ ತರ್ಕದಿಂದ ಸಮಾಧಾನವಾಗುವದೆಂತು? ಆರ್ಯರು ಹೊರಗಿನ ಯಾವ


* ಬಂಗಾಲದ ಶ್ರೀ. ದಾಸರು ಬರ ದಿರುವ Rig-Vedic India ಎಂಬುದನ್ನು ಈ ಬಗ್ಗೆ ನೋಡಬಹುದು.