ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಭಾರತೀಯರ ಇತಿಹಾಸವು.

ಒಕ್ಕಲತನ ಬೇಸಾಯವನ್ನೇ ತಮ್ಮ ಜೀವನದ ಮುಖ್ಯಾಧಾರವಾಗಿಟ್ಟುಕೊ೦ಡರು; ಮತ್ತು ಆ ಬೇಸಾಯಕ್ಕಾಗಿಯೇ ಅವರು ದನಕರು ಅಕಳುಗಳನ್ನು ಹಾಕಿಕೊಂಡಿರಬೇಕಾಯಿತು. ಈ ಶುದ್ಧವಾದ ವೃತ್ತಿಯಲಿರುವಾಗ ಆರ್ಯರಿಗೆ ಆಕಳು, ಎತ್ತು ಇವರಡೂ ಅತಿಶಯ ಪ್ರಿಯತಮವಾದ ಪ್ರಾಣಿಗಳಾದವು. ಮನುಷ್ಯನ ದೇಹವನ್ನೂ, ಬುದ್ಧಿಯನೂ ಪೋಷಿಸುವಂಧ ಅಮೃತತುಲ್ಯವಾದ ರಸವನ್ನಿತ್ತು, ಮನುಷ್ಯ ಕೋಟಿಗೇನೇ ಜೀವನಪ್ರದವಾಗಿರುವದರಿಂದ ಅಕಳೆಂದರೆ ಭೂಲೋಕದೊಳಗೆ. ಓಡಾಡುವ ದೇವತೆಯೆಂದು ಆರ್ಯರು ತಿಳಿದಿರುವಲ್ಲಿ ಸೋಜಿಗವೇನು? ಅದರಂತೆಯೇ ತಮ್ಮ ಹೊಲಗದ್ದೆಗಳ ಬೇಸಾಯಕ್ಕೆ ಎತ್ತು ಎಷ್ಟೊಂದು ಅನುಪಮವಾದ ಸಹಕಾರಿಯಾಗಿರುವದೆ೦ಬದರ ಮರ್ಮವನ್ನು ಅರಿತುಕೊಂಡು ಅದನ್ನು ಅವರು ಜೀವಕ್ಕಿಂತ ಮೇಲೆಂದೆಣಿಸಿದರು. ಹೀಗೆ ಆಕಳಲ್ಲಿ ಎದ್ದು ಕಾಣುವಂಧ ಸಭ್ಯತೆಯನ್ನೂ ಶ್ರಮವಿಲ್ಲದೆ ಈಲಾಗುವ ಗುಣವನ್ನೂ, ಬೇಸಾಯಕ್ಕಾಗಿ ಎತ್ತಿ ನಿಂದಾಗುವ ಹೆಚ್ಚಿನ ಪ್ರಯೋಜನವನ್ನೂ ಅರಿತವರಾಗಿ, ಇವೆರಡರ ಬಗ್ಗೆ ಅವರಲ್ಲಿ ಬರಬರುತ್ತಾ ಆದ ರಾತಿಶಯವು೦ಟಾಗಲಿಕ್ಕೆ ಕಾರಣವಾಯಿತು. ಆರ್ಯರ ಈ ಆದರವು ಬೆಳೆಯುತ್ತ ನಡೆದು ಕೊನೆಗೆ ಆಕಳನ್ನು ದೇವರೆಂದು ಪೂಜಿಸುವ ವರೆಗೆ ಮುಟ್ಟಿತು. ಈ ಕಾಲದಲ್ಲಿ ಆರ್ಯರಿಗೆ ಗೋವುಗಳ ಹಿಂಡು ( ಗೋ ಧನ)ವೇ ದೊಡ್ಡದೊಂದು ಸಲ ಪತ್ತೆ೦ದೆನಿಸಿತು. ಯಾವಾತನ ಬಳೆ ಸಾವಿರಾರು ಆಕಳ ಹಿಂಡು ಇರುವದೋ ಅವನೇ ಶ್ರೀಮಂತನೆಂದು ತತ್ಕಾಲಕ್ಕೆ ಎಲ್ಲರ ಭಾವನೆಯಾಯಿತು. ಒಕ್ಕಲತನದ ರುಚಿ ಹತ್ತಿದ್ದರಿಂದ ದಟ್ಟವಾದ ಅರಣ್ಯಗಳನ್ನು ಕಡಿದು ನದಿಗಳಗುಂಟ ಸಣ್ಣ ಪುಟ್ಟ ಹಳ್ಳಿಗಳನ್ನು ಕಟ್ಟಿ ಕೊಂಡು ಇರಲಾರಂಭಿಸಿದ್ದರಿಂದ ಸೊಗಸಾದ ಊರುಗಳಿಂದಲೂ, ಅವುಗಳ ನೆರೆ ಹೊರೆ, ಸುತ್ತು ಮುತ್ತು ಹಚ್ಚನ್ನ ಬೆಳೆ ಗಳಿ೦ದ ತು೦ಬಿದ ಹೊಲಗದ್ದೆಗಳಿಂದಲೂ ಭೂ ದೇವಿಯು ಹೊಳೆಯ ಹತ್ತಿದಳು; ಕಾಡು ವೃತ್ತಿಯಿಂದ ಕುರುಬರ ಕಸಬು ಮಾಡುತ್ತಿರುವಾಗಿನ ಅವರ ಮನಃಸ್ಥಿತಿಯು ಈಗ ಬದಲಾದ್ದರಿಂದ ತಮಗೆ ಹೊತ್ತು ಹೊತ್ತಿಗೆ ಮಳೆ, ಬೆಳೆ, ಪೈರುಗಳನ್ನು ಕೊಡುವಂಥ ಪರ್ಜನ್ಯರಾಜನೂ ಭೂ