ಪುಟ:ಮಾತೃನಂದಿನಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಮಾತೃನ 5 ದಿನಿ ಆಸಿದವು ಗಣನೆಗೆ ಬರುವಂತಹವಾಗಲಿಲ್ಲ. ಅಲ್ಲದೆ, ಅದನ್ನು ಮಾಡಿದ ನಗೂ ಮಾಡಿಸಿದವರಿಗೂ ಮನ್ನಣೆಯಾಗಿ ಕೈ ಕೊಳಗಳೂ, ಅಪರಾಧ ಕಾಣಿಕೆಯ ಸುಲಿಗೆಗಳ ತಪ್ಪಲಿಲ್ಲ. ಇದು ಸಾಲದೆಂದು, ಒಂದೆರಡು ಬಾರಿ ನಗೇಶರಾಯನ ಮನೆಗೆ ಕನವೂ ಬಿದ್ದಿತು. ಆದರೇನು? ಕನ್ನ ಹಾಕಿದವರಿಗೆ ಆ ಕಡೆಯಿಂದಲೇ ತುಬಾಕಿಯ ಮದ್ದಿನೇಟು ಮಾತ್ರ ದೊರಕಿತಲ್ಲದೆ, ಮತ್ತೇನೂ ದೊರೆಯಲಿಲ್ಲ. ಪ್ರಪ೦ಡನಾದ ನರೇಶರಾಯನನ್ನು ದಾರಿಗೆ ತರುವ ಉಪಾಯವು ಮತ್ತಾವುದೂ ಇವರಿಗೆ ಉಳಿಯಲಿಲ್ಲ. ಕಡೆಗೆ, ನರೇಶ ರಾಯನಿಗೆ ವಕ್ರಿಸಿದ್ದ `ಶನಿಯು, ಅತನ ಉ ತತನಕ್ಕೆ ಹೆದರಿ, ಆತನಿಗೆ ಮುಖ್ಯ ಸಹಾಯಕರಾಗಿರುವ ಕಲೆಕ್ಟರ್ ಜ್ಞಾನಸಾರ ತಕ್ರವರ್ತಿಯ ಕತೆಗೂ, ಶರತ್ಯ_ಂದ್ರನಾಥನ ಕಡೆಗೂ ತಿರುಗಿ, ತನ್ನ ಪ್ರತಾಪವನ್ನು ಸ್ವಲ್ಪ ಸ್ವಲ್ಪವಾಗಿ ಪ್ರಕಟವಡಿಸಲು ಮೊದಲುಮಾಡಿತು.

  • ಕಲೆಕ್ಟರ್ ಜ್ಞಾನಸಾರ ಚಕ್ರವರ್ತಿಯೇನು, ಸಾಮಾನ್ಯಪುರುಷನೇ' ಪುಂಡರ ತಂಡಗಳನ್ನು ಕಂಡಕಂಡಲ್ಲಿಯೇ ಬಂಡುಮಾಡುವ ಉದ್ದಂಡ ಪುರುಷನೇ ನಮ್ಮ ಚಕ್ರವರ್ತಿ ಮಹಾಶಯನು !!! ಈ ಗಂಡುಗಲಿಯ ಅಂಜು ಕುಳಿಗಳ ಈ ಹಂದೆತನಕ್ಕೆ ಹೆದರುವನೇನು? ಎಂದಿಗೂ ಇಲ್ಲ.

• ಆಗಲಿ, ಶಿವಪುರದ ಮಹಾಜನರೆಲ್ಲರೂ ಒಂದಾಗಿ ಒರಲಿ: ಬೇಕಾದ ನಾಟವನ್ನು ಹೂಡಲಿ: ಭಯವಿಲ್ಲ. ಪ್ರಾಣಹಾನಿಯಿಲ್ಲದಯೇ ಅವರನ್ನು ನಂಜರಾಬದ್ಧರನ್ನಾಗಿ ಮಾಡದೆ ಬಿಡುವವನು ನಾನಲ್ಲ. ಮಾಟಕ್ಕೆ ತಕ್ಕ ಮದ್ದು ನನ್ನಲ್ಲಿಲ್ಲದೇ ಹೋಗಿಲ್ಲ. ಇದೇ ಈಗಲೇ ಹೊರಬೀಳುತ್ತದೆ.* ಎಂದು ಹೇಳಿ, ತನ್ನನ್ನು ನೋಡಬಂದವರೆಲ್ಲರಿಗೂ ತಕ್ಕ ಮನ್ನಣೆಯನ್ನೆ ಮಾಡಿ ಕಳುಹಿದನು. ಅದು ಹೇಗೂ ಇರಲಿ; ಶಿವಪುರದಲ್ಲಿ ಒಮ್ಮಿಂದೊಮ್ಮೆಯೇ ಕಲೆ ಕೈರ್ ಚಕ್ರವರ್ತಿಗಳ ಜತ್ಸವವು. ಇಂದು ಅವರ ನಿಶಾಲಭವನದಲ್ಲಿ ಸಕಲ ಸಂಭ್ರಮದಿಂದಲೂ ನಡೆವುದು. ಭೋಜನ, ತಾಂಬೂಲ, ದಕ್ಷಿಣೆ, ಉಡುಗೊರೆಗಳನ್ನು ಬಯಸುವರಿಗೆ ಇದೇ ಸುಗ್ಗಿಯವೇಳೆ; ಬೇಕಾದವರು ಬಂದು, ಬೇಕಾದುದನ್ನು ಬೇಡಿಕೊಂಡು ಹೋಗಬಹುದು, ರಾತ್ರಿ ಹನ, ರಡು ಗಂಟೆಯವರೆಗೆ ಯಾರು ಬಂದರೂ ಉಚಿತ ಸನ್ಮಾನಗಳಾಗುವವು; ಆಬಳಿಕ