ಪುಟ:ಮಾತೃನಂದಿನಿ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನ೦ ದಿ ನಿ 17 ಕಲೆಕ್ಟರ್:-- ಕಿರುನಗೆಯಿ೦ದ ಹೋಗಿ ಕೇಳು-ಅವರಾ? ಸಿಕೆ ಬಂದಿರುವರು? ಎಲ್ಲಿಯವರು ? ಕೊಲ್ಲಸು ಹೊರಗೆ ಹೋಗಿ ಮತ್ತೆ ಬಂದು ಅವರು ಇದೇ ಊರವ ರಂತೆ. ಸ್ವಾಮಿಯನ್ನು ನೋಡಿ, ಹೇಳ-ಕೇಳಬೇಕಾದುದಿದೆಯಂತೆ.' ಕಲೆಕ್ಟರ್:- ತಲೆದೂಗಿ- .. ಮತ್ತೆ ಹೋಗಿ ಹೇಳು- ಅನಾಥ.. ಅಂಗಹೀನ-ರಿಕ್ತಹಸ್ತರುಗಳಿಗೆ ಅವಕಾಶವುಂಟು; ಅಲ್ಲದೆ, ಸಮಾಜದಿಂದ ಬಹಿಷ್ಕೃತರಾಗಿರುವವರಿಗೆ ಬರಲು ಅವಕಾಶವುಂಟು; ಮತ್ತಾರಿಗೂ ಇಲ್ಲಿ ಇಷ್ಟು ಹೊತ್ತಿನಮೇಲೆ ಬರಲು ಅವಕಾಶವಿಲ್ಲ. ಆದುದರಿಂದ ತಾವು ಯಾರಕಡೆಯವರು-ಕೆ ಬಂದಿರುವಿ -ತನ್ನ ಹೆಸರೇನು? ಸರಿಯಾಗಿ ಹೇಳಿ, ಆಬಳಿಕ ಬರಬಹುದು.'...” ಚಾರನು ಮತ್ತೆ ಓಡಿಹೋಗಿ, ಒಂದೆರಡು ಗಳಿಗೆಯಮೇಲೆ ಮರ ಬಂದು ಅವರು ಭಟ್ಟಾಚಾರ್ಯ, ಸಂತರೇ, ಮೊದಲಾದವರಂತ, ಗುರ: ಪೀತದಿಂದ ಅತ್ಯಗತ್ಯವಾದ ನಿರೂಪವನ್ನು ತಂದಿರುವಂತೆ, ಒಳಗೆ ಬರಲ. ಅವಕಾಶವನ್ನು ಕೊಡಬೇಕಂತೆ.” ಇಷ್ಟರಲ್ಲಿಯೇ ಹೊರಗಿನಿಂದ ಬಂದ ಭಕ್ತಿಸಾರ ಚಕ್ರವರ್ತಿಯು ಬಾಗಿಲಲ್ಲಿ ತಡೆಯಲ್ಪಟ್ಟಿದ್ದ ಭಟ್ಟಾಚಾರ್ಯರೇ ಮೊದಲಾದವರನ್ನು ಕಂಡುಓಹೋ ! ಅಪೂರ್ವಲಾಭ! ಒಳಗೆ ಬರಬೇಕು. ಇಲ್ಲೇಕೆ ನಿಂತಿರುವುದು ?? ಎಂದು ಹೇಳಿ, ಸಡಗರದಿಂದ ಕರೆತಂದು, ತಂದೆಯಾದ ಜ್ಞಾನನಾರ ಚಕ್ರ ವರ್ತಿಯನ್ನು ಕುರಿತು- ಅಪ್ಪ ! ಮಹಾಶಯರ ಆಗಮನದಿಂದ ನಮ್ಮವರೆ ಲ್ಲರೂ ಪವಿತ್ರರಾದರಲ್ಲವೆ?” ಕಲೆಕ್ಟರ್:-ತಲೆಯ . ಓಹೋ ! ಇದೇನಿದು? ಇದೇನಿದು!! ನೆನೆದಂತಯೇ ಬಂದಿರುವಿರಿ?? ಭಟ್ಟಾಚಾರ್ಯ:- ಕಲೆಕ್ಟರರಿಗೆ ಕಲ್ಯಾಣವಾಗಲಿ! ಗುರುಪೀಠ ದಿಂದ ನಿರೂಪ-” ಕಲೆಕ್ಟರ್:-ಹೋ! ತಾಳಿರಿ. ಸ್ವಲ್ಪ ನಿಧಾನಿಸಿರಿ. ತಾವು ಇತ್ತ ಬರಬಾರದು.' ಭಟ್ಟಾಚಾರ್ಯ:-ಅದೇಕೆ ? ನಾವೇನು, ಅಷ್ಟರ ಕರ್ಮಭ್ರಷ್ಟರೇನು?