ಪುಟ:ಮಾತೃನಂದಿನಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಸತೀಹಿತ್ಯೀ ನಮ್ಮ ಸಂಸಾರಕ್ಕೆಲ್ಲಾ ಕಾರರತ್ನ ವೆಂದರೆ ಅವನೇ ಸರಿ! ಅವನಲ್ಲಿರುವ ಶೀಲ, ವಿವ್ಯಾ, ವಿನಯ, ವಿವೇಚನೆಯೇ ಮೊದಲಾದ ಸುಗುಣಗಳನ್ನು ನೋಡಿ ನೋಡಿಯೇ ನಮಗೆ ಪರಮಾನಂದವಾಗುತ್ತಿದೆ. ಆತನ ಶಿಕ್ಷಣಾಕೌಶಲ್ಯ ದಿಂದಲೇ ನಮ್ಮ ಸುರಸೆ, ನಿಜವಾದ ಸುರಸೆಯಾಗಿದ್ದಾಳೆ, ಹೆಚ್ಚೇಕೆ? ಅಚಲ ನೆಂದರೆ ನಮ್ಮವರಿಗೆ ಪ್ರಾಣ: ಉಳಿದವರ ಮಾತು ಹಾಗಿರಲಿ, ಚಿತ್ರ: -ಅಂತಹ ಸುಪುತ್ರನನ್ನು ಹೊಂದಲಿಕ್ಕೆ ಎಷ್ಟೊ ಸುಕೃತ ಮಾಡಿರಬೇಕು. ಚಂದ್ರಮತಿ! ಅಚಲಚಂದ್ರನ ಸ್ವಭಾವವು ನನಗೆ ಹೊಸ ದಲ್ಲ, ಅವನಲ್ಲಿ ಬಗೆಗೊಳ್ಳುತ್ತಿರುವ ವಿದ್ಯಾರ್ಥಿಲಕ್ಷಣದಲ್ಲಿ ಸ್ವಲ್ಪ ಸ್ವಲ್ಪವಾದರೂ, ನಮ್ಮ ನಾದಾನಂದನಲ್ಲಿ ತೋರುವಂತಾಗಬೇಕೆಂಬುದೇ ನನ್ನ ಆಶೆ ! ಆದರೇನು ? ಇನ್ನೆಷ್ಟು ದಿನಗಳು ಆತನೊಡನೆ ವ್ಯಾಸಂಗಿಸುತ್ತಿ ದ್ದರೂ ಇವನು ಬೇರೆ, ಅಂತಹ ದೃಢಭಾವವನ್ನು ಹೊಂದಲಾರಸು ! ಚಂದ್ರ: --ಸಹವಾಸಮಾಡಿದ ಮಾತ್ರಕ್ಕೆ ಸದ್ಗುಣಗಳೂ ಬರುವುಣೆ ಬುದು ಸುಳ್ಳು! ಅಭ್ಯಾಸವೂ ಆಸಕ್ತಿಯೂ ತಕ್ಕಂತೆ ಬಲವಾಗಿರಬೇಕು ! ಚಿತ್ರ:-ಹೇಗೂ ಇರಲಿ. ಅಚಲನನ್ನು ನಮ್ಮ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬುದೇ ನನ್ನ ಬಲವಾದ ಆಶೆಯಾಗಿದೆ! ಚಂದ್ರ:-ಆ ವಿಷಯದಲ್ಲಿ ಆಕೆಯು ನನಗೇನೂ ಕಡಿಮೆಯಾಗಿದೆ ಎಂದು ತಿಳಿಯಬೇಡ. ಸ್ವರ್ಣಯನ್ನು ಹೆರವರ ಮನೆಗೆ ಕೊಡಬಾರದೆಂ ಬುದೇ ನನ್ನ ಇಷ್ಟವಾಗಿದೆ. ಅಲ್ಲದೆ ನಮ್ಮ ಸುರಸೆಯ ಮದುವೆಕಾಲದಲ್ಲಿ ನಾದಾನಾದನಿಗೆ ಇನ್ನೂ ವಯಸ್ಸಾಗಿರಲಿಲ್ಲವೆಂದು ಬಿಟ್ಟು ಬಿಟ್ಟು ದಾಯ್ತು. ಈಗ ನಮ್ಮ ವನಿಗೇನೋ ವ್. ಆದರೆ, ಈ ವಿಚಾರವನ್ನು ಈಗಲೇ ಅವನ ಕಿವಿಗೆ ಮುಟ್ಟಿಸಬೇಡ. ಚಿತ್ರ:-ಏಕೆ? ಸ್ವರ್ಣಯನ್ನು ಅವನು ಒಪ್ಪಿಲ್ಲವೇನು? ಚಂದ್ರ:-ಅವಳನ್ನು ಒಪ್ಪಲೊಲ್ಲನೆಂದು ಹೇಳಲಿಲ್ಲ, ಅವಳ ಗುಣ ವನ್ನೂ, ಪ್ರತಿಭಾಶಕ್ತಿಯನ್ನೂ ಕುರಿತು, ಎಷ್ಟೋ ಬಾರಿ ನನ್ನ ಬಳಿಯಲ್ಲಿಯೇ ಹೊಗಳಿರುವನು. ಆದರೆ, ಅದರ ಜೊತೆಯಲ್ಲಿಯೇ ಅವಳ ವಿಲಾಸಾದಿಗಳ ವಿಚಾರವಾಗಿ ಹಾಸ್ಯಮಾಡಿಯೂ ಮಾಡುತ್ತಿರುವನು.