ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಟ್ಟಿಗಾದರೂ ದೃಷ್ಟಿಯಿಟ್ಟಿದ್ದರೆ ಚೆನ್ನಾಗಿತ್ತೆಂದು ಈಗ ಹೇಳುತ್ತಿರುವಿರಿ. ನಿಮ್ಮ ಈ ಮಾತುಗಳಿಗೆಲ್ಲ ಅರ್ಥವೇ ನು ? ನೆಲದೊಳಗೆ, ಅದರಲ್ಲಿಯೂ ಒಂದು ವಾರ, ಮನು ಏನಾದವನು ಬದುಕಿರಬಲ್ಲನೆಂಬುದು, ನನ್ನ ಬುದ್ಧಿಗೆ ಗೋಚರವಲ್ಲದ ವಿಷಯವಾಗಿರುವುದು, ದೇವೇಂದ್ರ-ನಾನು ತಮಗೆ ಸುಳ್ಳುಹೇಳಲು ಬಂದ ವನಲ್ಲ. ನಮ್ಮ ದೇಶದಲ್ಲಿ ಸಾಧಾರಣರಾದ ಜನರು ಈ ಸ್ಥಿ ತಿಯಲ್ಲಿ ಬದುಕಿರುವುದು ಅಸಂಭವವೇ ಸರಿ. - ರಾಮ-ದೇವೇಂದ್ರ, ಮೃತ್ಯುವಿಗೆ ಸಾಧಾರಣ ಹ ನರೇನು? ಅಸಾಧಾರಣ ಜನರೇನು? ದೇವೇಂದ್ರ-ಆರಭಿಸ್ತಾನ (Arabia) ದ ಫಕೀರ ರನೇಕರು ಗೋರೀ ಮಾಡಲ್ಪಟ್ಟು, ಮತ್ತೆ ಎದ್ದು ಬಂ ದಿರುವ ಸಂಗತಿಗಳು ನಿಮ್ಮ ಕಿವಿಗೆ ಯಾವಾಗಲ೧ ಬಿದ್ದಂತೆ ತೋರುವುದಿಲ್ಲ. ರಾಮ-ಹಾಗೆಂದರೇನು ! ನಾನು ಎಷ್ಮೆ ಸಂಗ ತಿಗಳನ್ನು ಕೇಳಿರುವೆನು. ದೇವೇಂದ್ರ-ಅವರೇನು ಮಾಡುವರೆಂಬುದು ? ರಾಮ-ಅದೂ ಕೊಂಚ ಕೊಂಚ ಗೊತ್ತುಂಟು. ಎರಡನೆಯ ಸಂಧಿ ದೇವೇಂದ್ರ ವಿಜಯನು ಹೇಳತೊಡಗಿದನು:- ಆರಭಿನದ ಫಕೀರರು ಪದಾರ್ಥಗಳ ಗುಣಗಳ